ಪ್ರಕರಣವೇನು?: ರಾಜ್ಯ ವಕೀಲರ ಪರಿಷತ್ನ 25 ಪದಾಧಿಕಾರಿಗಳ ಆಯ್ಕೆಗೆ 2018ರ ಮಾರ್ಚ್ 27ರಂದು ಚುನಾವಣೆ ನಡೆದಿತ್ತು. ‘ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಸ್ಪರ್ಧಿಯಾಗಿದ್ದ ವಕೀಲ ಎಚ್.ಆರ್. ದುರ್ಗಾಪ್ರಸಾದ್ ಭಾರತೀಯ ವಕೀಲರ ಪರಿಷತ್ಗೆ ದೂರು ನೀಡಿದ್ದರು. ಇದರನ್ವಯ ಚುನಾವಣಾ ನ್ಯಾಯಮಂಡಳಿ ಚುನಾವಣೆ ರದ್ದುಪಡಿಸಿ ಆದೇಶಿಸಿದೆ.