<p>ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸುತ್ತಿರುವ ರೀತಿ ತೀವ್ರ ಆಕ್ರೋಶ, ಅಸಮಾಧಾನದಿಂದ ಕೂಡಿದೆ. ಈ ಪ್ರತಿಕ್ರಿಯೆಯು ಚುನಾವಣಾ ಪ್ರಚಾರ ಸಮಯದಲ್ಲಿನ ವೈಷಮ್ಯಕ್ಕಿಂತಲೂ ಹೆಚ್ಚು ಕಟುವಾಗಿದೆ. ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಚುನಾವಣೆ ನ್ಯಾಯಬದ್ಧವಾಗಿ ನಡೆದಿಲ್ಲ, ತಮ್ಮ ಸೋಲಿನ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ಚುನಾವಣೆಯ ಸೋಲಿನ ನಂತರವೂ ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿರುವುದು ಇದೇ ಮೊದಲ ಬಾರಿಗೆ ಉದ್ಭವಿಸಿರುವ ರಾಜಕೀಯ ಸನ್ನಿವೇಶವಾಗಿದೆ. ಸಾಂವಿಧಾನಿಕ ವ್ಯಾಪ್ತಿಗೆ ಸಂಬಂಧಿಸಿದಂತೆಯೂ ಈ ಪರಿಸ್ಥಿತಿ ಹೊಸತಾಗಿದೆ. ಸಾಂವಿಧಾನಿಕ ಉದ್ದೇಶ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯಗಳ ನಡುವಿನ ವ್ಯತ್ಯಾಸ ಈ ಪರಿಸ್ಥಿತಿಯಲ್ಲಿ ಅಡಕವಾಗಿದೆ. ಪರಾಭವಗೊಂಡಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಲೇಬೇಕೆಂದು ಸಂವಿಧಾನ ಒತ್ತಾಯಿಸುವುದಿಲ್ಲ. ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೂ ನಿರ್ಗಮಿಸುವ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಹುದಷ್ಟೇ. ಹಾಗಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪದಿರುವ ಮಮತಾ ಅವರ ನಿರ್ಧಾರವನ್ನು ಕಾನೂನಿನ ಅನ್ವಯ ತಪ್ಪೆಂದು ಹೇಳುವುದು ಸಾಧ್ಯವಿಲ್ಲ. ಆದರೆ, ಅದು ಪ್ರಜಾಸತ್ತಾತ್ಮಕವಾಗಿ ಅಸಮಂಜಸವಾದುದು.</p>.<p>ಕಾನೂನುಬದ್ಧತೆ ಎನ್ನುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ವರ್ಣಮಾಲೆ ಇದ್ದಂತೆ. ಅದರ ನಿಜವಾದ ಅರ್ಥವು,ಚುನಾವಣೆಯ ಮೂಲಕ ಔಪಚಾರಿಕ<br>ವಾಗಿ ವ್ಯಕ್ತವಾಗುವ ಫಲಿತಾಂಶ ಹಾಗೂಜನಪ್ರಿಯ, ಸಾಂಪ್ರದಾಯಿಕ ಮಾರ್ಗಗಳ ಮೂಲಕ ಅನೌಪಚಾರಿಕವಾಗಿ ವ್ಯಕ್ತವಾಗುವ ಆದೇಶಗಳ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವು<br>ದರಲ್ಲಿದೆ. ಒಂದುವೇಳೆ, ರಾಜೀನಾಮೆ ನೀಡದಿರುವ ನಿರ್ಧಾರಕ್ಕೆ ಅವರು ಅಂಟಿಕೊಂಡಿದ್ದೇ ಆದಲ್ಲಿ ಸಂವಿಧಾನವು ತನ್ನ ಇರುವಿಕೆಯನ್ನು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅವರಿಗೆ<br>ಕಟ್ಟುನಿಟ್ಟಿನ ಎಚ್ಚರಿಕೆ ನೀಡಬಹುದಾಗಿದೆ, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದಾಗಿದೆ ಇಲ್ಲವೇ ಇನ್ನೂ ಕಠಿಣ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಇದರ ಪರಿಣಾಮವಾಗಿ ರೂಪುಗೊಳ್ಳುವ ಪ್ರಹಸನವು ಕಾನೂನುಬದ್ಧ ಆಗಿರುವುದಕ್ಕಿಂತಲೂ ಹೆಚ್ಚು ನಾಟಕೀಯಆಗಿರುತ್ತದೆ. ಮಮತಾ ಬ್ಯಾನರ್ಜಿ ಅವರು ತಮ್ಮನ್ನು ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವ ವ್ಯಕ್ತಿಯಾಗಿ ಬಿಂಬಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ, ಬಂಡಾಯದ ರಾಜಕೀಯ ಬಣ್ಣಗಳಲ್ಲಿ ಪ್ರದರ್ಶಿಸಿಕೊಳ್ಳಲು ಬಯಸುವ ನಾಯಕಿಯಾಗಿದ್ದಾರೆ.</p>.<p>ಚುನಾವಣಾ ಫಲಿತಾಂಶದ ನಂತರ ಮಮತಾ ಅವರು ತೆಗೆದುಕೊಂಡಿರುವ ಕಠಿಣ ನಿಲುವು, ರಾಜಕಾರಣವು ತನ್ನ ಪರಿಚಿತ ಪ್ರತಿರೋಧ ಮತ್ತು ಹಕ್ಕು ಸಾಧನೆಯ ಮಾದರಿಗಳಿಂದ ದೂರ ಸರಿಯುತ್ತಿರುವುದನ್ನು ಸೂಚಿಸುವಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟಿನಲ್ಲಿರುವ ಸನ್ನಿವೇಶ ಇಂದಿನದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತದಾರರ ಒಳಗೊಳ್ಳುವಿಕೆಯ ಬಗ್ಗೆ ಉದ್ಭವಿಸಿರುವ ಗಂಭೀರ ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರೆತಿಲ್ಲ. ಚುನಾವಣಾ ಆಯೋಗದ ಮೇಲೆ ಕರಿನೆರಳು ಆವರಿಸಿದೆ ಹಾಗೂ ನ್ಯಾಯಾಂಗವು ಪರಿಹಾರ ಮತ್ತು ಮಾರ್ಗದರ್ಶನ ನೀಡಲು ಸಮರ್ಥವಾಗಿದೆಯೇ ಎನ್ನುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ನ್ಯಾಯಬದ್ಧ ಆಗಿರುವುದನ್ನು ಕೇಂದ್ರ ಸರ್ಕಾರ ಬಹಳ ಹಿಂದೆಯೇ ನಿಲ್ಲಿಸಿದೆ ಹಾಗೂ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ನಿರ್ಮೂಲನಗೊಳಿಸಲು ಹಾಗೂ ರಾಜಕೀಯವಾಗಿ ತನ್ನನ್ನು ಶಾಶ್ವತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಂಡಾಯ, ಭಾವೋದ್ರೇಕ ಮತ್ತು ಬೀದಿ ರಂಪವನ್ನು ತಮ್ಮ ರಾಜಕೀಯ ಬೆಳವಣಿಗೆಯ ಬಂಡವಾಳ ಆಗಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರ ಸದ್ಯದ ‘ಧಿಕ್ಕಾರ’ವನ್ನು ವೈಯಕ್ತಿಕ ನಿರಾಶೆಯ ರೂಪದಲ್ಲಷ್ಟೇ ನೋಡಲು ಸಾಧ್ಯವಿಲ್ಲ. ಅದು, ವಿರೋಧ ಪಕ್ಷದ ರಾಜಕಾರಣದ ಮೇಲೆ ಹೇರಲಾದ ಬಿಕ್ಕಟ್ಟಾಗಿದೆ; ವ್ಯಾಪಕ ನೆಲೆಯಲ್ಲಿ ನೋಡುವುದಾದರೆ, ಶುಭಸೂಚಕವಲ್ಲದ ಈ ಬೆಳವಣಿಗೆಯು ಸಮಕಾಲೀನ ರಾಜಕಾರಣಕ್ಕೆ ಒದಗಿರುವ ಬಹು ದೊಡ್ಡ ಬಿಕ್ಕಟ್ಟಿನ ಸಂಕೇತವೂ ಆಗಿದೆ. ಅಧಿಕಾರವನ್ನು ಅಡ್ಡದಾರಿಯಲ್ಲಿ ಕಬಳಿಸುವವರನ್ನು ಮಮತಾ ಅಣಕ ಮಾಡುತ್ತಿದ್ದಾರೆ. ಇದು ಆತಂಕಕಾರಿಯಾದ ಸಂಕೇತವಾಗಿದೆ. ಆಡಳಿತದಲ್ಲಿ ಇರುವಂತೆ ರಾಜಕಾರಣದಲ್ಲೂ ಕೆಲವು ನಿಗದಿತ ಪ್ರಕ್ರಿಯೆಗಳಿರುತ್ತವೆ. ಅವು ವಿಫಲವಾದಾಗ ವ್ಯವಸ್ಥೆಯು ಅನಪೇಕ್ಷಿತ ದಾಳಿಗೆ ಒಳಗಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸುತ್ತಿರುವ ರೀತಿ ತೀವ್ರ ಆಕ್ರೋಶ, ಅಸಮಾಧಾನದಿಂದ ಕೂಡಿದೆ. ಈ ಪ್ರತಿಕ್ರಿಯೆಯು ಚುನಾವಣಾ ಪ್ರಚಾರ ಸಮಯದಲ್ಲಿನ ವೈಷಮ್ಯಕ್ಕಿಂತಲೂ ಹೆಚ್ಚು ಕಟುವಾಗಿದೆ. ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಚುನಾವಣೆ ನ್ಯಾಯಬದ್ಧವಾಗಿ ನಡೆದಿಲ್ಲ, ತಮ್ಮ ಸೋಲಿನ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ಚುನಾವಣೆಯ ಸೋಲಿನ ನಂತರವೂ ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿರುವುದು ಇದೇ ಮೊದಲ ಬಾರಿಗೆ ಉದ್ಭವಿಸಿರುವ ರಾಜಕೀಯ ಸನ್ನಿವೇಶವಾಗಿದೆ. ಸಾಂವಿಧಾನಿಕ ವ್ಯಾಪ್ತಿಗೆ ಸಂಬಂಧಿಸಿದಂತೆಯೂ ಈ ಪರಿಸ್ಥಿತಿ ಹೊಸತಾಗಿದೆ. ಸಾಂವಿಧಾನಿಕ ಉದ್ದೇಶ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯಗಳ ನಡುವಿನ ವ್ಯತ್ಯಾಸ ಈ ಪರಿಸ್ಥಿತಿಯಲ್ಲಿ ಅಡಕವಾಗಿದೆ. ಪರಾಭವಗೊಂಡಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಲೇಬೇಕೆಂದು ಸಂವಿಧಾನ ಒತ್ತಾಯಿಸುವುದಿಲ್ಲ. ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೂ ನಿರ್ಗಮಿಸುವ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಹುದಷ್ಟೇ. ಹಾಗಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪದಿರುವ ಮಮತಾ ಅವರ ನಿರ್ಧಾರವನ್ನು ಕಾನೂನಿನ ಅನ್ವಯ ತಪ್ಪೆಂದು ಹೇಳುವುದು ಸಾಧ್ಯವಿಲ್ಲ. ಆದರೆ, ಅದು ಪ್ರಜಾಸತ್ತಾತ್ಮಕವಾಗಿ ಅಸಮಂಜಸವಾದುದು.</p>.<p>ಕಾನೂನುಬದ್ಧತೆ ಎನ್ನುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ವರ್ಣಮಾಲೆ ಇದ್ದಂತೆ. ಅದರ ನಿಜವಾದ ಅರ್ಥವು,ಚುನಾವಣೆಯ ಮೂಲಕ ಔಪಚಾರಿಕ<br>ವಾಗಿ ವ್ಯಕ್ತವಾಗುವ ಫಲಿತಾಂಶ ಹಾಗೂಜನಪ್ರಿಯ, ಸಾಂಪ್ರದಾಯಿಕ ಮಾರ್ಗಗಳ ಮೂಲಕ ಅನೌಪಚಾರಿಕವಾಗಿ ವ್ಯಕ್ತವಾಗುವ ಆದೇಶಗಳ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವು<br>ದರಲ್ಲಿದೆ. ಒಂದುವೇಳೆ, ರಾಜೀನಾಮೆ ನೀಡದಿರುವ ನಿರ್ಧಾರಕ್ಕೆ ಅವರು ಅಂಟಿಕೊಂಡಿದ್ದೇ ಆದಲ್ಲಿ ಸಂವಿಧಾನವು ತನ್ನ ಇರುವಿಕೆಯನ್ನು ತನ್ನದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅವರಿಗೆ<br>ಕಟ್ಟುನಿಟ್ಟಿನ ಎಚ್ಚರಿಕೆ ನೀಡಬಹುದಾಗಿದೆ, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದಾಗಿದೆ ಇಲ್ಲವೇ ಇನ್ನೂ ಕಠಿಣ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಇದರ ಪರಿಣಾಮವಾಗಿ ರೂಪುಗೊಳ್ಳುವ ಪ್ರಹಸನವು ಕಾನೂನುಬದ್ಧ ಆಗಿರುವುದಕ್ಕಿಂತಲೂ ಹೆಚ್ಚು ನಾಟಕೀಯಆಗಿರುತ್ತದೆ. ಮಮತಾ ಬ್ಯಾನರ್ಜಿ ಅವರು ತಮ್ಮನ್ನು ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವ ವ್ಯಕ್ತಿಯಾಗಿ ಬಿಂಬಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ, ಬಂಡಾಯದ ರಾಜಕೀಯ ಬಣ್ಣಗಳಲ್ಲಿ ಪ್ರದರ್ಶಿಸಿಕೊಳ್ಳಲು ಬಯಸುವ ನಾಯಕಿಯಾಗಿದ್ದಾರೆ.</p>.<p>ಚುನಾವಣಾ ಫಲಿತಾಂಶದ ನಂತರ ಮಮತಾ ಅವರು ತೆಗೆದುಕೊಂಡಿರುವ ಕಠಿಣ ನಿಲುವು, ರಾಜಕಾರಣವು ತನ್ನ ಪರಿಚಿತ ಪ್ರತಿರೋಧ ಮತ್ತು ಹಕ್ಕು ಸಾಧನೆಯ ಮಾದರಿಗಳಿಂದ ದೂರ ಸರಿಯುತ್ತಿರುವುದನ್ನು ಸೂಚಿಸುವಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟಿನಲ್ಲಿರುವ ಸನ್ನಿವೇಶ ಇಂದಿನದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತದಾರರ ಒಳಗೊಳ್ಳುವಿಕೆಯ ಬಗ್ಗೆ ಉದ್ಭವಿಸಿರುವ ಗಂಭೀರ ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರೆತಿಲ್ಲ. ಚುನಾವಣಾ ಆಯೋಗದ ಮೇಲೆ ಕರಿನೆರಳು ಆವರಿಸಿದೆ ಹಾಗೂ ನ್ಯಾಯಾಂಗವು ಪರಿಹಾರ ಮತ್ತು ಮಾರ್ಗದರ್ಶನ ನೀಡಲು ಸಮರ್ಥವಾಗಿದೆಯೇ ಎನ್ನುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ನ್ಯಾಯಬದ್ಧ ಆಗಿರುವುದನ್ನು ಕೇಂದ್ರ ಸರ್ಕಾರ ಬಹಳ ಹಿಂದೆಯೇ ನಿಲ್ಲಿಸಿದೆ ಹಾಗೂ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ನಿರ್ಮೂಲನಗೊಳಿಸಲು ಹಾಗೂ ರಾಜಕೀಯವಾಗಿ ತನ್ನನ್ನು ಶಾಶ್ವತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬಂಡಾಯ, ಭಾವೋದ್ರೇಕ ಮತ್ತು ಬೀದಿ ರಂಪವನ್ನು ತಮ್ಮ ರಾಜಕೀಯ ಬೆಳವಣಿಗೆಯ ಬಂಡವಾಳ ಆಗಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರ ಸದ್ಯದ ‘ಧಿಕ್ಕಾರ’ವನ್ನು ವೈಯಕ್ತಿಕ ನಿರಾಶೆಯ ರೂಪದಲ್ಲಷ್ಟೇ ನೋಡಲು ಸಾಧ್ಯವಿಲ್ಲ. ಅದು, ವಿರೋಧ ಪಕ್ಷದ ರಾಜಕಾರಣದ ಮೇಲೆ ಹೇರಲಾದ ಬಿಕ್ಕಟ್ಟಾಗಿದೆ; ವ್ಯಾಪಕ ನೆಲೆಯಲ್ಲಿ ನೋಡುವುದಾದರೆ, ಶುಭಸೂಚಕವಲ್ಲದ ಈ ಬೆಳವಣಿಗೆಯು ಸಮಕಾಲೀನ ರಾಜಕಾರಣಕ್ಕೆ ಒದಗಿರುವ ಬಹು ದೊಡ್ಡ ಬಿಕ್ಕಟ್ಟಿನ ಸಂಕೇತವೂ ಆಗಿದೆ. ಅಧಿಕಾರವನ್ನು ಅಡ್ಡದಾರಿಯಲ್ಲಿ ಕಬಳಿಸುವವರನ್ನು ಮಮತಾ ಅಣಕ ಮಾಡುತ್ತಿದ್ದಾರೆ. ಇದು ಆತಂಕಕಾರಿಯಾದ ಸಂಕೇತವಾಗಿದೆ. ಆಡಳಿತದಲ್ಲಿ ಇರುವಂತೆ ರಾಜಕಾರಣದಲ್ಲೂ ಕೆಲವು ನಿಗದಿತ ಪ್ರಕ್ರಿಯೆಗಳಿರುತ್ತವೆ. ಅವು ವಿಫಲವಾದಾಗ ವ್ಯವಸ್ಥೆಯು ಅನಪೇಕ್ಷಿತ ದಾಳಿಗೆ ಒಳಗಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>