<blockquote><strong>ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಶಾಂತಿ ಸ್ಥಾಪನೆಯ ದಾರಿ ದೂರದ್ದು ಮಾತ್ರವಲ್ಲ, ಕಠಿಣವಾದುದೂ ಹೌದು. </strong></blockquote>.<p>ಮಣಿಪುರದಲ್ಲಿ ಯಾವ ಕ್ಷಣದಲ್ಲಾದರೂ ಒಡೆಯಬಹುದಾದ ನೀರಿನ ಗುಳ್ಳೆಯಂತೆ ಶಾಂತಿ ನೆಲೆಗೊಂಡಿತ್ತು. ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಹತ್ಯೆ ಹಾಗೂ ಅದರ ನಂತರ ಆ ರಾಜ್ಯದ ವಿಷ್ಣುಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರ ಪ್ರಾಣಹಾನಿ ವರದಿ ಆಗುವುದರೊಂದಿಗೆ ಆ ಶಾಂತಿ ಕದಡಿದೆ. ಮಕ್ಕಳನ್ನು ಹತ್ಯೆ ಮಾಡಿರುವುದು, ಜನರನ್ನು ಉದ್ರಿಕ್ತರನ್ನಾಗಿ ಮಾಡಿ ಇನ್ನಷ್ಟು ಹಿಂಸಾಚಾರ ಉಂಟಾಗುವಂತೆ ಮಾಡುವ ಉದ್ದೇಶದ ಕೃತ್ಯವಾಗಿ ಈ ಘಟನೆ ಕಾಣುತ್ತಿದೆ. ಮಕ್ಕಳ ಹತ್ಯೆಯನ್ನು ಪ್ರತಿಭಟಿಸಿದ ಗುಂಪು, ಭದ್ರತಾ ಸಿಬ್ಬಂದಿಯ ಶಿಬಿರದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಬಾಂಬ್ ದಾಳಿ ನಡೆಸಿದವರನ್ನು ಪತ್ತೆಮಾಡಿ, ಅವರನ್ನು ಶಿಕ್ಷಿಸಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ವೈ. ಖೇಮಚಂದ್ ಎಚ್ಚರಿಕೆ ನೀಡಿದ್ದಾರೆ. ಬಾಂಬ್ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ತನಿಖೆ ನಡೆಸುತ್ತಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಮಣಿಪುರದಲ್ಲಿನ ಹಿಂಸಾಚಾರವನ್ನು ಈಗ ಬಿಡಿ ಘಟನೆಗಳನ್ನಾಗಿ ಕಾಣಲು ಆಗದು, ಅದು ಸಂಘಟಿತವಾದ ಉಗ್ರ ಕೃತ್ಯಗಳಾಗಿವೆ. ಏಕೆಂದರೆ, ಅಲ್ಲಿ ಹಿಂಸಾಚಾರಕ್ಕೆ ವ್ಯಕ್ತಿಗಳು ಕಾರಣವಾಗುತ್ತಿಲ್ಲ; ಗುಂಪುಗಳು ಆ ಕೆಲಸ ಮಾಡುತ್ತಿವೆ. ಕೃತ್ಯ ಎಸಗುವವರನ್ನು ಪತ್ತೆ ಮಾಡುವುದು ಕೂಡ ಕಷ್ಟವಾಗುತ್ತಿದೆ.</p>.<p>ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಅಮಾನತಿನಲ್ಲಿ ಇರಿಸಿರುವ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ವಿಷ್ಣುಪುರದಲ್ಲಿ ಹಿಂದೆ ಹಲವು ಹಿಂಸಾ<br>ಕೃತ್ಯಗಳು ನಡೆದಿದ್ದರೂ, ಹೊಸ ಸರ್ಕಾರ ರಚನೆ ಆದ ನಂತರದಲ್ಲಿ ಅಲ್ಲಿ ಹೀಗೆ ಆಗಿರುವುದು ಇದೇ ಮೊದಲು. ಈಚಿನ ವಾರಗಳಲ್ಲಿ ದುಷ್ಕರ್ಮಿಗಳನ್ನು ಗುರಿ ಆಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ಅಲ್ಲಿ ಶಸ್ತ್ರಸಜ್ಜಿತ ಆಕ್ರಮಣಗಳು ನಡೆಯುತ್ತಿರುವುದು ಹಾಗೂ ಶಸ್ತ್ರಾಸ್ತ್ರ ಇರುವ ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವುದು ವಿಧ್ವಂಸಕ ಕೃತ್ಯ ನಡೆಸುವವರು ಈಗಲೂ ಸಕ್ರಿಯರಾಗಿ ಇದ್ದಾರೆ ಎಂಬುದನ್ನು ತೋರಿಸುತ್ತಿದೆ. ಪೊಲೀಸ್ ಠಾಣೆಗಳಿಂದ, ಸರ್ಕಾರಿ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಮತ್ತೆ ವಶಕ್ಕೆ ಪಡೆಯುವ ಸರ್ಕಾರದ ಯತ್ನಗಳಿಗೆ ಫಲ ಸಿಕ್ಕಿಲ್ಲ. ಇಂತಹ ಶಸ್ತ್ರಾಸ್ತ್ರಗಳು ಜನರ ಕೈಯಲ್ಲಿ ಇರುವವರೆಗೆ ಅಲ್ಲಿ ಹಿಂಸಾಚಾರ ಮುಂದುವರಿಯುತ್ತದೆ. ಇಂಫಾಲ್ ನಗರ ಸೇರಿದಂತೆ ರಾಜ್ಯದ ಹಲವೆಡೆ ಕರ್ಫ್ಯೂ ನಡುವೆಯೂ ಹಿಂಸಾಚಾರವನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಇದು ರಾಜ್ಯ ಯಾವುದಕ್ಕಾಗಿ ಹಂಬಲಿಸುತ್ತಿದೆ ಎನ್ನುವುದರ ಸಂಕೇತದಂತಿದೆ.</p>.<p>ಮಕ್ಕಳ ಹತ್ಯೆ ಹಾಗೂ ನಂತರ ನಡೆದ ಹಿಂಸಾಚಾರವು ಅಲ್ಲಿ ಹೊಸ ಸರ್ಕಾರ ರಚನೆಯಾದ ನಂತರವೂ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸುತ್ತಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ಜನರ ನಡುವೆ ಅಪನಂಬಿಕೆ ಅದೆಷ್ಟು ಆಳವಾಗಿದೆ ಎಂಬುದನ್ನೂ ಇದು ತೋರಿಸುತ್ತಿದೆ. 2023ರ ಮೇ ತಿಂಗಳ ನಂತರದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಈ ಅಪನಂಬಿಕೆ ಮುಖ್ಯ ಕಾರಣ. ಆದರೆ, ಈಗಿನ ಸರ್ಕಾರವು ಎನ್. ಬಿರೇನ್ ಸಿಂಗ್ ನೇತೃತ್ವದ ಹಿಂದಿನ ಸರ್ಕಾರದಂತೆ ವರ್ತಿಸುತ್ತಿಲ್ಲ; ಈಗಿನ ಸರ್ಕಾರವು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನ್ಯಾಯಸಮ್ಮತವಾಗಿ, ನಿಷ್ಪಕ್ಷಪಾತವಾಗಿ ವರ್ತಿಸಲು ಯತ್ನಿಸುತ್ತಿದೆ. ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಲು ಖೇಮಚಂದ್ ಅವರು ಕುಕಿ ಸಮುದಾಯದವರು ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಲು ಯತ್ನಿಸಿದ್ದಾರೆ. ಆದರೂ ಸಹಸ್ರಾರು ಕುಟುಂಬಗಳು ಈಗಲೂ ಆಶ್ರಯ ಕೇಂದ್ರಗಳಲ್ಲಿ ವಾಸ ಮಾಡುತ್ತಿವೆ. ರಾಜ್ಯವು ಎರಡು ವಲಯಗಳಾಗಿ ವಿಭಜನೆಗೊಂಡಿದೆ. ಒಂದು ವಲಯದಲ್ಲಿ ಇನ್ನೊಂದು ವಲಯದ ಜನ ಪ್ರವೇಶಿಸುವುದು ಸ್ವೀಕಾರಾರ್ಹ ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಇನ್ನೂ ದೂರದ ಮಾತು, ಅದಕ್ಕಾಗಿ ಬಹಳ ಕಠಿಣ ಶ್ರಮದ ಅಗತ್ಯವಿದೆ ಎಂಬುದನ್ನು ಇವೆಲ್ಲವೂ ಹೇಳುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><strong>ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಶಾಂತಿ ಸ್ಥಾಪನೆಯ ದಾರಿ ದೂರದ್ದು ಮಾತ್ರವಲ್ಲ, ಕಠಿಣವಾದುದೂ ಹೌದು. </strong></blockquote>.<p>ಮಣಿಪುರದಲ್ಲಿ ಯಾವ ಕ್ಷಣದಲ್ಲಾದರೂ ಒಡೆಯಬಹುದಾದ ನೀರಿನ ಗುಳ್ಳೆಯಂತೆ ಶಾಂತಿ ನೆಲೆಗೊಂಡಿತ್ತು. ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಹತ್ಯೆ ಹಾಗೂ ಅದರ ನಂತರ ಆ ರಾಜ್ಯದ ವಿಷ್ಣುಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರ ಪ್ರಾಣಹಾನಿ ವರದಿ ಆಗುವುದರೊಂದಿಗೆ ಆ ಶಾಂತಿ ಕದಡಿದೆ. ಮಕ್ಕಳನ್ನು ಹತ್ಯೆ ಮಾಡಿರುವುದು, ಜನರನ್ನು ಉದ್ರಿಕ್ತರನ್ನಾಗಿ ಮಾಡಿ ಇನ್ನಷ್ಟು ಹಿಂಸಾಚಾರ ಉಂಟಾಗುವಂತೆ ಮಾಡುವ ಉದ್ದೇಶದ ಕೃತ್ಯವಾಗಿ ಈ ಘಟನೆ ಕಾಣುತ್ತಿದೆ. ಮಕ್ಕಳ ಹತ್ಯೆಯನ್ನು ಪ್ರತಿಭಟಿಸಿದ ಗುಂಪು, ಭದ್ರತಾ ಸಿಬ್ಬಂದಿಯ ಶಿಬಿರದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಬಾಂಬ್ ದಾಳಿ ನಡೆಸಿದವರನ್ನು ಪತ್ತೆಮಾಡಿ, ಅವರನ್ನು ಶಿಕ್ಷಿಸಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ವೈ. ಖೇಮಚಂದ್ ಎಚ್ಚರಿಕೆ ನೀಡಿದ್ದಾರೆ. ಬಾಂಬ್ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ತನಿಖೆ ನಡೆಸುತ್ತಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಮಣಿಪುರದಲ್ಲಿನ ಹಿಂಸಾಚಾರವನ್ನು ಈಗ ಬಿಡಿ ಘಟನೆಗಳನ್ನಾಗಿ ಕಾಣಲು ಆಗದು, ಅದು ಸಂಘಟಿತವಾದ ಉಗ್ರ ಕೃತ್ಯಗಳಾಗಿವೆ. ಏಕೆಂದರೆ, ಅಲ್ಲಿ ಹಿಂಸಾಚಾರಕ್ಕೆ ವ್ಯಕ್ತಿಗಳು ಕಾರಣವಾಗುತ್ತಿಲ್ಲ; ಗುಂಪುಗಳು ಆ ಕೆಲಸ ಮಾಡುತ್ತಿವೆ. ಕೃತ್ಯ ಎಸಗುವವರನ್ನು ಪತ್ತೆ ಮಾಡುವುದು ಕೂಡ ಕಷ್ಟವಾಗುತ್ತಿದೆ.</p>.<p>ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಅಮಾನತಿನಲ್ಲಿ ಇರಿಸಿರುವ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ವಿಷ್ಣುಪುರದಲ್ಲಿ ಹಿಂದೆ ಹಲವು ಹಿಂಸಾ<br>ಕೃತ್ಯಗಳು ನಡೆದಿದ್ದರೂ, ಹೊಸ ಸರ್ಕಾರ ರಚನೆ ಆದ ನಂತರದಲ್ಲಿ ಅಲ್ಲಿ ಹೀಗೆ ಆಗಿರುವುದು ಇದೇ ಮೊದಲು. ಈಚಿನ ವಾರಗಳಲ್ಲಿ ದುಷ್ಕರ್ಮಿಗಳನ್ನು ಗುರಿ ಆಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ಅಲ್ಲಿ ಶಸ್ತ್ರಸಜ್ಜಿತ ಆಕ್ರಮಣಗಳು ನಡೆಯುತ್ತಿರುವುದು ಹಾಗೂ ಶಸ್ತ್ರಾಸ್ತ್ರ ಇರುವ ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವುದು ವಿಧ್ವಂಸಕ ಕೃತ್ಯ ನಡೆಸುವವರು ಈಗಲೂ ಸಕ್ರಿಯರಾಗಿ ಇದ್ದಾರೆ ಎಂಬುದನ್ನು ತೋರಿಸುತ್ತಿದೆ. ಪೊಲೀಸ್ ಠಾಣೆಗಳಿಂದ, ಸರ್ಕಾರಿ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಮತ್ತೆ ವಶಕ್ಕೆ ಪಡೆಯುವ ಸರ್ಕಾರದ ಯತ್ನಗಳಿಗೆ ಫಲ ಸಿಕ್ಕಿಲ್ಲ. ಇಂತಹ ಶಸ್ತ್ರಾಸ್ತ್ರಗಳು ಜನರ ಕೈಯಲ್ಲಿ ಇರುವವರೆಗೆ ಅಲ್ಲಿ ಹಿಂಸಾಚಾರ ಮುಂದುವರಿಯುತ್ತದೆ. ಇಂಫಾಲ್ ನಗರ ಸೇರಿದಂತೆ ರಾಜ್ಯದ ಹಲವೆಡೆ ಕರ್ಫ್ಯೂ ನಡುವೆಯೂ ಹಿಂಸಾಚಾರವನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಇದು ರಾಜ್ಯ ಯಾವುದಕ್ಕಾಗಿ ಹಂಬಲಿಸುತ್ತಿದೆ ಎನ್ನುವುದರ ಸಂಕೇತದಂತಿದೆ.</p>.<p>ಮಕ್ಕಳ ಹತ್ಯೆ ಹಾಗೂ ನಂತರ ನಡೆದ ಹಿಂಸಾಚಾರವು ಅಲ್ಲಿ ಹೊಸ ಸರ್ಕಾರ ರಚನೆಯಾದ ನಂತರವೂ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸುತ್ತಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ಜನರ ನಡುವೆ ಅಪನಂಬಿಕೆ ಅದೆಷ್ಟು ಆಳವಾಗಿದೆ ಎಂಬುದನ್ನೂ ಇದು ತೋರಿಸುತ್ತಿದೆ. 2023ರ ಮೇ ತಿಂಗಳ ನಂತರದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಈ ಅಪನಂಬಿಕೆ ಮುಖ್ಯ ಕಾರಣ. ಆದರೆ, ಈಗಿನ ಸರ್ಕಾರವು ಎನ್. ಬಿರೇನ್ ಸಿಂಗ್ ನೇತೃತ್ವದ ಹಿಂದಿನ ಸರ್ಕಾರದಂತೆ ವರ್ತಿಸುತ್ತಿಲ್ಲ; ಈಗಿನ ಸರ್ಕಾರವು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನ್ಯಾಯಸಮ್ಮತವಾಗಿ, ನಿಷ್ಪಕ್ಷಪಾತವಾಗಿ ವರ್ತಿಸಲು ಯತ್ನಿಸುತ್ತಿದೆ. ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಲು ಖೇಮಚಂದ್ ಅವರು ಕುಕಿ ಸಮುದಾಯದವರು ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಲು ಯತ್ನಿಸಿದ್ದಾರೆ. ಆದರೂ ಸಹಸ್ರಾರು ಕುಟುಂಬಗಳು ಈಗಲೂ ಆಶ್ರಯ ಕೇಂದ್ರಗಳಲ್ಲಿ ವಾಸ ಮಾಡುತ್ತಿವೆ. ರಾಜ್ಯವು ಎರಡು ವಲಯಗಳಾಗಿ ವಿಭಜನೆಗೊಂಡಿದೆ. ಒಂದು ವಲಯದಲ್ಲಿ ಇನ್ನೊಂದು ವಲಯದ ಜನ ಪ್ರವೇಶಿಸುವುದು ಸ್ವೀಕಾರಾರ್ಹ ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಇನ್ನೂ ದೂರದ ಮಾತು, ಅದಕ್ಕಾಗಿ ಬಹಳ ಕಠಿಣ ಶ್ರಮದ ಅಗತ್ಯವಿದೆ ಎಂಬುದನ್ನು ಇವೆಲ್ಲವೂ ಹೇಳುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>