<p>ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿ ಉಳಿದಿರುವ ಪ್ರಕರಣಗಳ ಸಂಖ್ಯೆ 92 ಸಾವಿರಕ್ಕಿಂತ ಜಾಸ್ತಿ ಇದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಈಚೆಗೆ ಸುಗ್ರೀವಾಜ್ಞೆ ಹೊರಡಿಸಿರುವುದು ಈ ಹಿನ್ನೆಲೆಯಲ್ಲಿ ಸ್ವಾಗತಾರ್ಹ ಕ್ರಮ. 2019ರಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31ರಿಂದ 34ಕ್ಕೆ ಹೆಚ್ಚಿಸಲಾಗಿತ್ತು. ಅದಾದ ನಂತರದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯು ಶೇಕಡ 50ರಷ್ಟು ಜಾಸ್ತಿ ಆಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂದರೆ, ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದು ಸಮಸ್ಯೆಯ ಒಂದು ಭಾಗ ಮಾತ್ರ ಎಂಬುದನ್ನು ಇದು ಹೇಳುತ್ತಿದೆ. ಕೋರ್ಟ್ನ ಕೆಲಸಗಳಲ್ಲಿ ವ್ಯವಸ್ಥಿತವಾದ ಬದಲಾವಣೆಗಳನ್ನು ತರುವ ಮೂಲಕ ಮಾತ್ರವೇ ಪ್ರಕರಣಗಳ ಹೊರೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ. ಈಗ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದು ಇತ್ಯರ್ಥವಾಗಲು ಸರಾಸರಿ 1ರಿಂದ 3 ವರ್ಷಗಳು ಬೇಕಾಗುತ್ತಿವೆ. ಆದರೆ, ಕೆಲವು ಪ್ರಕರಣಗಳು 13 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ವಿಚಾರಣೆಯ ಹಂತದಲ್ಲಿ ಇದ್ದ ನಿದರ್ಶನಗಳೂ ಇವೆ.</p>.<p>ವಾಸ್ತವದಲ್ಲಿ ಸುಪ್ರೀಂ ಕೋರ್ಟ್ಗೆ ಮಂಜೂರಾದ ಅಷ್ಟೂ ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿ ಆಗಿರುವುದಿಲ್ಲ. ಇದಕ್ಕೆ ಹಲವು ಕಾರಣಗಳನ್ನು ಗುರ್ತಿಸಬಹುದು. ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳ ಸಮಿತಿಯ (ಕೊಲಿಜಿಯಂ) ಜೊತೆಗಿನ ಭಿನ್ನಮತದಿಂದಾಗಿ ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ವಿಳಂಬ ಮಾಡುವುದು ಕೂಡ ಒಂದು ಕಾರಣ. ತಾನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಳ್ಳುವ ಪ್ರಕರಣಗಳ ವಿಚಾರದಲ್ಲಿ ಕೋರ್ಟ್ ಇನ್ನಷ್ಟು ಅಳೆದು–ತೂಗಿ ತೀರ್ಮಾನ ಕೈಗೊಳ್ಳಬೇಕು ಎಂಬ ವಾದವೊಂದು ಇದೆ; ಹಲವು ಪ್ರಕರಣ<br />ಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಬೇಕಾದಷ್ಟು ಗಂಭೀರವಾಗಿ ಇರುವುದಿಲ್ಲ ಎಂದು ಈ ವಾದದ ಪರ ಇರುವವರು ಹೇಳುತ್ತಾರೆ. ಹೆಚ್ಚು ಉತ್ತಮ ಫಲಿತಾಂಶಕ್ಕಾಗಿ ಕೋರ್ಟ್ ತಂತ್ರಜ್ಞಾನದ ಮೊರೆ ಹೋಗಬಹುದು. ಉದಾಹರಣೆಗೆ, ಡಿಜಿಟಲ್ ಇ–ಫೈಲಿಂಗ್ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳು<br />ವುದರಿಂದ ಸಮಯ ಉಳಿಸಬಹುದು. ವಾದ ಆಲಿಸಲು, ವಾದ ಮಂಡನೆಗೆ ಸಮಯಮಿತಿ ನಿಗದಿ ಮಾಡುವುದನ್ನು ಬದಲಾವಣೆಯ ಭಾಗವಾಗಿಸಬಹುದು. ಕ್ಷುಲ್ಲಕ ಸಂಗತಿಗಳನ್ನೆಲ್ಲ ಕೋರ್ಟ್ಗೆ ಎಳೆಯದೆ ಇರುವ ಮೂಲಕ ಸರ್ಕಾರ ಕೂಡ ಪ್ರಕರಣಗಳ ಹೊರೆ ತಗ್ಗಿಸಲು ನೆರವಾಗಬಹುದು. ದೇಶದಲ್ಲಿ ಸರ್ಕಾರವೇ ಅತಿದೊಡ್ಡ ಸಂಖ್ಯೆಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿದೆ. ಹಲವು ಪ್ರಕರಣಗಳು ಕೋರ್ಟ್ನ ಮಧ್ಯಪ್ರವೇಶಕ್ಕೆ ಅರ್ಹವಾದವು ಅಲ್ಲ.</p>.<p>ದೇಶದ ಕೆಳಗಿನ ಹಂತಗಳ ನ್ಯಾಯಾಲಯಗಳಲ್ಲಿ ನ್ಯಾಯದಾನ ವಿಳಂಬ ಆಗುತ್ತಿರುವುದು ಇನ್ನಷ್ಟು ಹೆಚ್ಚು ತೀವ್ರವಾಗಿ ಅನುಭವಕ್ಕೆ ಬರುವಂತಿದೆ. ದೇಶದಲ್ಲಿ ಇತ್ಯರ್ಥವಾಗದೆ ಬಾಕಿ ಇರುವ ಅಷ್ಟೂ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿದರೆ, ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಮಾಣ ಶೇ 0.14ರಷ್ಟು ಮಾತ್ರ. ಹೈಕೋರ್ಟ್ಗಳಲ್ಲಿ ಒಟ್ಟು 56 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಹಾಗೂ ಇತರ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯು 4.3 ಕೋಟಿಗಿಂತ ಹೆಚ್ಚು. ಇವುಗಳಲ್ಲಿ ಹಲವು, ಆ ಪ್ರಕರಣಗಳ ಭಾಗವಾದವರ ಜೀವಿತಾವಧಿಯಲ್ಲಿ ಇತ್ಯರ್ಥ ಆಗದೇ ಇರಬಹುದು. ಈಗಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು, ಈಗಿನ ವೇಗದಲ್ಲೇ ಮುನ್ನಡೆದರೆ ಇನ್ನೂ 300ಕ್ಕೂ ಹೆಚ್ಚು ವರ್ಷಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೆಳ ಹಂತಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಜನಸಾಮಾನ್ಯರನ್ನು ಹೆಚ್ಚು ಬಾಧಿಸುತ್ತವೆ. ಆ ಪ್ರಕರಣಗಳನ್ನು ಹೆಚ್ಚು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಬೇಕು. ಜಾಮೀನು ಪಡೆಯುವ ಸಾಮರ್ಥ್ಯವಿಲ್ಲದ ಲಕ್ಷಾಂತರ ಮಂದಿ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಇದ್ದಾರೆ. ಪ್ರಕರಣಗಳ ಹೊರೆಯನ್ನು ತಗ್ಗಿಸುವ ಪ್ರಯತ್ನಗಳ ಭಾಗವಾಗಿ ಕೆಳ ಹಂತಗಳ ನ್ಯಾಯಾಲಯಗಳಲ್ಲಿಯೂ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಬೇಕು. ಗರಿಷ್ಠ ಸಂಖ್ಯೆಯ ಜನರಿಗೆ ತ್ವರಿತವಾಗಿ ನ್ಯಾಯದಾನ ಮಾಡುವಲ್ಲಿ ವ್ಯವಸ್ಥೆ ವಿಫಲವಾದಾಗ ಸುಧಾರಣೆಗಳನ್ನು ತರುವುದನ್ನು ವಿಳಂಬ ಮಾಡಲಾಗದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿ ಉಳಿದಿರುವ ಪ್ರಕರಣಗಳ ಸಂಖ್ಯೆ 92 ಸಾವಿರಕ್ಕಿಂತ ಜಾಸ್ತಿ ಇದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಈಚೆಗೆ ಸುಗ್ರೀವಾಜ್ಞೆ ಹೊರಡಿಸಿರುವುದು ಈ ಹಿನ್ನೆಲೆಯಲ್ಲಿ ಸ್ವಾಗತಾರ್ಹ ಕ್ರಮ. 2019ರಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31ರಿಂದ 34ಕ್ಕೆ ಹೆಚ್ಚಿಸಲಾಗಿತ್ತು. ಅದಾದ ನಂತರದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯು ಶೇಕಡ 50ರಷ್ಟು ಜಾಸ್ತಿ ಆಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂದರೆ, ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದು ಸಮಸ್ಯೆಯ ಒಂದು ಭಾಗ ಮಾತ್ರ ಎಂಬುದನ್ನು ಇದು ಹೇಳುತ್ತಿದೆ. ಕೋರ್ಟ್ನ ಕೆಲಸಗಳಲ್ಲಿ ವ್ಯವಸ್ಥಿತವಾದ ಬದಲಾವಣೆಗಳನ್ನು ತರುವ ಮೂಲಕ ಮಾತ್ರವೇ ಪ್ರಕರಣಗಳ ಹೊರೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ. ಈಗ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದು ಇತ್ಯರ್ಥವಾಗಲು ಸರಾಸರಿ 1ರಿಂದ 3 ವರ್ಷಗಳು ಬೇಕಾಗುತ್ತಿವೆ. ಆದರೆ, ಕೆಲವು ಪ್ರಕರಣಗಳು 13 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ವಿಚಾರಣೆಯ ಹಂತದಲ್ಲಿ ಇದ್ದ ನಿದರ್ಶನಗಳೂ ಇವೆ.</p>.<p>ವಾಸ್ತವದಲ್ಲಿ ಸುಪ್ರೀಂ ಕೋರ್ಟ್ಗೆ ಮಂಜೂರಾದ ಅಷ್ಟೂ ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿ ಆಗಿರುವುದಿಲ್ಲ. ಇದಕ್ಕೆ ಹಲವು ಕಾರಣಗಳನ್ನು ಗುರ್ತಿಸಬಹುದು. ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳ ಸಮಿತಿಯ (ಕೊಲಿಜಿಯಂ) ಜೊತೆಗಿನ ಭಿನ್ನಮತದಿಂದಾಗಿ ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ವಿಳಂಬ ಮಾಡುವುದು ಕೂಡ ಒಂದು ಕಾರಣ. ತಾನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಳ್ಳುವ ಪ್ರಕರಣಗಳ ವಿಚಾರದಲ್ಲಿ ಕೋರ್ಟ್ ಇನ್ನಷ್ಟು ಅಳೆದು–ತೂಗಿ ತೀರ್ಮಾನ ಕೈಗೊಳ್ಳಬೇಕು ಎಂಬ ವಾದವೊಂದು ಇದೆ; ಹಲವು ಪ್ರಕರಣ<br />ಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಬೇಕಾದಷ್ಟು ಗಂಭೀರವಾಗಿ ಇರುವುದಿಲ್ಲ ಎಂದು ಈ ವಾದದ ಪರ ಇರುವವರು ಹೇಳುತ್ತಾರೆ. ಹೆಚ್ಚು ಉತ್ತಮ ಫಲಿತಾಂಶಕ್ಕಾಗಿ ಕೋರ್ಟ್ ತಂತ್ರಜ್ಞಾನದ ಮೊರೆ ಹೋಗಬಹುದು. ಉದಾಹರಣೆಗೆ, ಡಿಜಿಟಲ್ ಇ–ಫೈಲಿಂಗ್ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳು<br />ವುದರಿಂದ ಸಮಯ ಉಳಿಸಬಹುದು. ವಾದ ಆಲಿಸಲು, ವಾದ ಮಂಡನೆಗೆ ಸಮಯಮಿತಿ ನಿಗದಿ ಮಾಡುವುದನ್ನು ಬದಲಾವಣೆಯ ಭಾಗವಾಗಿಸಬಹುದು. ಕ್ಷುಲ್ಲಕ ಸಂಗತಿಗಳನ್ನೆಲ್ಲ ಕೋರ್ಟ್ಗೆ ಎಳೆಯದೆ ಇರುವ ಮೂಲಕ ಸರ್ಕಾರ ಕೂಡ ಪ್ರಕರಣಗಳ ಹೊರೆ ತಗ್ಗಿಸಲು ನೆರವಾಗಬಹುದು. ದೇಶದಲ್ಲಿ ಸರ್ಕಾರವೇ ಅತಿದೊಡ್ಡ ಸಂಖ್ಯೆಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿದೆ. ಹಲವು ಪ್ರಕರಣಗಳು ಕೋರ್ಟ್ನ ಮಧ್ಯಪ್ರವೇಶಕ್ಕೆ ಅರ್ಹವಾದವು ಅಲ್ಲ.</p>.<p>ದೇಶದ ಕೆಳಗಿನ ಹಂತಗಳ ನ್ಯಾಯಾಲಯಗಳಲ್ಲಿ ನ್ಯಾಯದಾನ ವಿಳಂಬ ಆಗುತ್ತಿರುವುದು ಇನ್ನಷ್ಟು ಹೆಚ್ಚು ತೀವ್ರವಾಗಿ ಅನುಭವಕ್ಕೆ ಬರುವಂತಿದೆ. ದೇಶದಲ್ಲಿ ಇತ್ಯರ್ಥವಾಗದೆ ಬಾಕಿ ಇರುವ ಅಷ್ಟೂ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿದರೆ, ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಮಾಣ ಶೇ 0.14ರಷ್ಟು ಮಾತ್ರ. ಹೈಕೋರ್ಟ್ಗಳಲ್ಲಿ ಒಟ್ಟು 56 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಹಾಗೂ ಇತರ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯು 4.3 ಕೋಟಿಗಿಂತ ಹೆಚ್ಚು. ಇವುಗಳಲ್ಲಿ ಹಲವು, ಆ ಪ್ರಕರಣಗಳ ಭಾಗವಾದವರ ಜೀವಿತಾವಧಿಯಲ್ಲಿ ಇತ್ಯರ್ಥ ಆಗದೇ ಇರಬಹುದು. ಈಗಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು, ಈಗಿನ ವೇಗದಲ್ಲೇ ಮುನ್ನಡೆದರೆ ಇನ್ನೂ 300ಕ್ಕೂ ಹೆಚ್ಚು ವರ್ಷಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೆಳ ಹಂತಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಜನಸಾಮಾನ್ಯರನ್ನು ಹೆಚ್ಚು ಬಾಧಿಸುತ್ತವೆ. ಆ ಪ್ರಕರಣಗಳನ್ನು ಹೆಚ್ಚು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಬೇಕು. ಜಾಮೀನು ಪಡೆಯುವ ಸಾಮರ್ಥ್ಯವಿಲ್ಲದ ಲಕ್ಷಾಂತರ ಮಂದಿ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಇದ್ದಾರೆ. ಪ್ರಕರಣಗಳ ಹೊರೆಯನ್ನು ತಗ್ಗಿಸುವ ಪ್ರಯತ್ನಗಳ ಭಾಗವಾಗಿ ಕೆಳ ಹಂತಗಳ ನ್ಯಾಯಾಲಯಗಳಲ್ಲಿಯೂ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಬೇಕು. ಗರಿಷ್ಠ ಸಂಖ್ಯೆಯ ಜನರಿಗೆ ತ್ವರಿತವಾಗಿ ನ್ಯಾಯದಾನ ಮಾಡುವಲ್ಲಿ ವ್ಯವಸ್ಥೆ ವಿಫಲವಾದಾಗ ಸುಧಾರಣೆಗಳನ್ನು ತರುವುದನ್ನು ವಿಳಂಬ ಮಾಡಲಾಗದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>