<blockquote>ಉಮರ್ ಖಾಲಿದ್ ಮತ್ತು ಶರ್ಜೀಲ್ ಅವರಿಗೆ ಜಾಮೀನು ನೀಡದಿರುವ ತೀರ್ಪಿನ ಸುಪ್ರೀಂ ಕೋರ್ಟ್ ಪರಾಮರ್ಶೆಗೆ, ಸಾಂವಿಧಾನಿಕ ಹಕ್ಕುಗಳು ಒತ್ತಡದಲ್ಲಿರುವ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ.</blockquote>.<p>ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಯ ಸಂಚಿನ ಆರೋಪ ಹೊತ್ತಿರುವ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ್ದ ತನ್ನದೇ ತೀರ್ಪನ್ನು ಸುಪ್ರೀಂ ಕೋರ್ಟ್ ಮರು ವಿಮರ್ಶೆಗೆ ಒಡ್ಡಿಕೊಂಡಿದೆ. ಈ ಪರಾಮರ್ಶೆ, ಸರ್ಕಾರ ಮಾತ್ರವಲ್ಲದೆ ನ್ಯಾಯಾಂಗವೂ ಉಮರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಾಯ ಮತ್ತು ಭೇದಭಾವದಿಂದ ನಡೆದುಕೊಂಡಿರುವುದನ್ನು ಸೂಚಿಸುವಂತಿದೆ. ಉಮರ್ ಹಾಗೂ ಶರ್ಜೀಲ್ ಇಮಾಮ್ ಅವರು ಐದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿದ್ದು, ಅವರಿಗೆ ಜಾಮೀನು ನೀಡುವಂತೆ ಸಲ್ಲಿಸಲಾದ ಅನೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳು ತಿರಸ್ಕರಿಸಿವೆ. ಮೇ 19ರ ಮಂಗಳವಾರ ಕೂಡ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಉಮರ್ ಅವರಿಗೆ ಜಾಮೀನು ನಿರಾಕರಿಸಿದೆ. ಜಾಮೀನು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಉಮರ್ ಖಾಲಿದ್ ಮತ್ತು ಶರ್ಜೀಲ್ ಅವರಿಗೆ ಮತ್ತೊಂದು ಪೀಠವು ಜಾಮೀನು ನಿರಾಕರಿಸಿದ್ದು ತಪ್ಪು ನಿರ್ಧಾರವಾಗಿದೆ ಹಾಗೂ 2021ರ ಕೆ.ಎ. ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ಸ್ಥಾಪಿಸಿದ್ದ ತತ್ತ್ವದ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆ ವಿಳಂಬವಾದ ಸಂದರ್ಭದಲ್ಲಿ ‘ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಕೂಡ ‘ಜಾಮೀನು ನಿಯಮ, ಜೈಲು ಅಪವಾದ’ ಎಂದು ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.</p>.<p>ವ್ಯಕ್ತಿಗತ ಹಕ್ಕುಗಳನ್ನು ಎತ್ತಿಹಿಡಿಯುವ ನಜೀಬ್ ಪ್ರಕರಣದ ತೀರ್ಪಿನಂತಹ ಪೂರ್ವ ನಿದರ್ಶನಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳು ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿ ಸಿದೆ. ವಿಸ್ತೃತ ಪೀಠಗಳ ತಾರ್ಕಿಕತೆಗೆ ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಣ್ಣ ಪೀಠಗಳು ಅಸಮ್ಮತಿ ವ್ಯಕ್ತಪಡಿಸದೆಯೇ ದುರ್ಬಲಗೊಳಿಸಿರುವುದನ್ನೂ ಕೋರ್ಟ್ ಗಮನಿಸಿದೆ. ವಿಭಾಗೀಯ ಪೀಠದ ಈ ಗಂಭೀರ ವಿಮರ್ಶೆ ಮತ್ತು ವಿಶ್ಲೇಷಣೆಯು, ಉಮರ್ ಖಾಲಿದ್ ರೀತಿಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸಣ್ಣ ಪೀಠಗಳು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಮಾರ್ಗದರ್ಶನ ನೀಡುವಂತಿದೆ. ಉಮರ್ ಖಾಲಿದ್ ಅವರ ಮುಂದುವರಿದಿರುವ ಬಂಧನವು ವಿವೇಚನೆ ಹಾಗೂ ನ್ಯಾಯದ ಚೌಕಟ್ಟನ್ನು ದಾಟಿದ್ದು, ಸರ್ಕಾರದ ಹಟದಿಂದ ಮಾತ್ರ ಅದು ಜಾರಿಯಲ್ಲಿದೆ. ತನಿಖಾಸಂಸ್ಥೆ ಹೊರಿಸಿರುವ ಮೇಲ್ನೋಟದ ಆರೋಪಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಆರೋಪಿಗಳಿಗೆ ಜಾಮೀನು ನಿರಾಕರಿಸಿದರೆ, ವಿಚಾರಣೆಗೆ ಮೊದಲಿನ ಬಂಧನದ ಅವಧಿಯೇ ವಿಚಾರಣೆಯ ನಂತರದ ಶಿಕ್ಷೆಯ ಸ್ವರೂಪವಾಗಿ ಪರಿಣಮಿಸುತ್ತದೆ ಎಂದು ಕೋರ್ಟ್ ಹೇಳಿದೆ. ಉಮರ್ ಖಾಲಿದ್ ಪ್ರಕರಣದಲ್ಲಿ ಹೀಗೆಯೇ ಆಗಿದ್ದು, ವಿಚಾರಣಾಪೂರ್ವ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಿದೆ.</p>.<p>ಜಾಮೀನಿಗೆ ಸಂಬಂಧಿಸಿದ ಮೂಲಭೂತ ತತ್ತ್ವವು ‘ಯುಎಪಿಎ’ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಪುನರುಚ್ಚರಿಸಿರುವುದು ಗಮನಾರ್ಹ. ಯುಎಪಿಎ ಕಾಯ್ದೆಯ 43ಡಿ(5) ಸೆಕ್ಷನ್ ಕಠಿಣ ಜಾಮೀನು ನಿಯಮಗಳನ್ನು ಒಳಗೊಂಡಿದ್ದು, ವ್ಯಕ್ತಿಯ ಸ್ವಾತಂತ್ರ್ಯದ ಹಕ್ಕು ಮತ್ತು ತ್ವರಿತ ವಿಚಾರಣೆಯ ಹಕ್ಕನ್ನು ಈ ನಿಯಮಗಳು ಹತ್ತಿಕ್ಕಬಾರದು ಎಂದೂ ನ್ಯಾಯಾಲಯ ಹೇಳಿದೆ. ಯುಎಪಿಎ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ 2ರಿಂದ 6ರಷ್ಟಿದ್ದು, ಶೇ 94ರಿಂದ 98ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿ ಬಿಡುಗಡೆ ಆಗುತ್ತಿರುವುದನ್ನೂ ಕೋರ್ಟ್ ಎತ್ತಿ ತೋರಿಸಿದೆ. ನಾಗರಿಕರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕಾನೂನು ಅಸ್ತ್ರಗಳನ್ನು ಬಳಸಲು ಹಿಂಜರಿಯದಿರುವ ಹಾಗೂ ಮೂಲಭೂತ ಹಕ್ಕುಗಳು ಒತ್ತಡದಲ್ಲಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ವಿಶೇಷ ಮಹತ್ವವಿದೆ. ಸರ್ಕಾರದ ದಮನಕಾರಿ ವರ್ತನೆಗೆ ಉಮರ್ ಖಾಲಿದ್ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ನ್ಯಾಯಾಂಗದ ಚರಿತ್ರೆಯಲ್ಲಿ ಸುಪ್ರೀಂ ಕೋರ್ಟ್ ತನ್ನದೇ ತೀರ್ಪನ್ನು ಪ್ರಶ್ನಿಸಿರುವುದು ವಿರಳ. ಇದು ತಾಂತ್ರಿಕ ಪ್ರಶ್ನೆಯಷ್ಟೇ ಆಗಿರದೆ, ಗಂಭೀರವಾದ ಹಾಗೂ ಸಾವಧಾನದಿಂದ ಆಲಿಸಿ ಉತ್ತರಿಸಬೇಕಾದ ವಿಷಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಉಮರ್ ಖಾಲಿದ್ ಮತ್ತು ಶರ್ಜೀಲ್ ಅವರಿಗೆ ಜಾಮೀನು ನೀಡದಿರುವ ತೀರ್ಪಿನ ಸುಪ್ರೀಂ ಕೋರ್ಟ್ ಪರಾಮರ್ಶೆಗೆ, ಸಾಂವಿಧಾನಿಕ ಹಕ್ಕುಗಳು ಒತ್ತಡದಲ್ಲಿರುವ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ.</blockquote>.<p>ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಯ ಸಂಚಿನ ಆರೋಪ ಹೊತ್ತಿರುವ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ್ದ ತನ್ನದೇ ತೀರ್ಪನ್ನು ಸುಪ್ರೀಂ ಕೋರ್ಟ್ ಮರು ವಿಮರ್ಶೆಗೆ ಒಡ್ಡಿಕೊಂಡಿದೆ. ಈ ಪರಾಮರ್ಶೆ, ಸರ್ಕಾರ ಮಾತ್ರವಲ್ಲದೆ ನ್ಯಾಯಾಂಗವೂ ಉಮರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಾಯ ಮತ್ತು ಭೇದಭಾವದಿಂದ ನಡೆದುಕೊಂಡಿರುವುದನ್ನು ಸೂಚಿಸುವಂತಿದೆ. ಉಮರ್ ಹಾಗೂ ಶರ್ಜೀಲ್ ಇಮಾಮ್ ಅವರು ಐದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿದ್ದು, ಅವರಿಗೆ ಜಾಮೀನು ನೀಡುವಂತೆ ಸಲ್ಲಿಸಲಾದ ಅನೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳು ತಿರಸ್ಕರಿಸಿವೆ. ಮೇ 19ರ ಮಂಗಳವಾರ ಕೂಡ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಉಮರ್ ಅವರಿಗೆ ಜಾಮೀನು ನಿರಾಕರಿಸಿದೆ. ಜಾಮೀನು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಉಮರ್ ಖಾಲಿದ್ ಮತ್ತು ಶರ್ಜೀಲ್ ಅವರಿಗೆ ಮತ್ತೊಂದು ಪೀಠವು ಜಾಮೀನು ನಿರಾಕರಿಸಿದ್ದು ತಪ್ಪು ನಿರ್ಧಾರವಾಗಿದೆ ಹಾಗೂ 2021ರ ಕೆ.ಎ. ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ಸ್ಥಾಪಿಸಿದ್ದ ತತ್ತ್ವದ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆ ವಿಳಂಬವಾದ ಸಂದರ್ಭದಲ್ಲಿ ‘ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಕೂಡ ‘ಜಾಮೀನು ನಿಯಮ, ಜೈಲು ಅಪವಾದ’ ಎಂದು ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.</p>.<p>ವ್ಯಕ್ತಿಗತ ಹಕ್ಕುಗಳನ್ನು ಎತ್ತಿಹಿಡಿಯುವ ನಜೀಬ್ ಪ್ರಕರಣದ ತೀರ್ಪಿನಂತಹ ಪೂರ್ವ ನಿದರ್ಶನಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳು ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿ ಸಿದೆ. ವಿಸ್ತೃತ ಪೀಠಗಳ ತಾರ್ಕಿಕತೆಗೆ ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಣ್ಣ ಪೀಠಗಳು ಅಸಮ್ಮತಿ ವ್ಯಕ್ತಪಡಿಸದೆಯೇ ದುರ್ಬಲಗೊಳಿಸಿರುವುದನ್ನೂ ಕೋರ್ಟ್ ಗಮನಿಸಿದೆ. ವಿಭಾಗೀಯ ಪೀಠದ ಈ ಗಂಭೀರ ವಿಮರ್ಶೆ ಮತ್ತು ವಿಶ್ಲೇಷಣೆಯು, ಉಮರ್ ಖಾಲಿದ್ ರೀತಿಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸಣ್ಣ ಪೀಠಗಳು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಮಾರ್ಗದರ್ಶನ ನೀಡುವಂತಿದೆ. ಉಮರ್ ಖಾಲಿದ್ ಅವರ ಮುಂದುವರಿದಿರುವ ಬಂಧನವು ವಿವೇಚನೆ ಹಾಗೂ ನ್ಯಾಯದ ಚೌಕಟ್ಟನ್ನು ದಾಟಿದ್ದು, ಸರ್ಕಾರದ ಹಟದಿಂದ ಮಾತ್ರ ಅದು ಜಾರಿಯಲ್ಲಿದೆ. ತನಿಖಾಸಂಸ್ಥೆ ಹೊರಿಸಿರುವ ಮೇಲ್ನೋಟದ ಆರೋಪಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಆರೋಪಿಗಳಿಗೆ ಜಾಮೀನು ನಿರಾಕರಿಸಿದರೆ, ವಿಚಾರಣೆಗೆ ಮೊದಲಿನ ಬಂಧನದ ಅವಧಿಯೇ ವಿಚಾರಣೆಯ ನಂತರದ ಶಿಕ್ಷೆಯ ಸ್ವರೂಪವಾಗಿ ಪರಿಣಮಿಸುತ್ತದೆ ಎಂದು ಕೋರ್ಟ್ ಹೇಳಿದೆ. ಉಮರ್ ಖಾಲಿದ್ ಪ್ರಕರಣದಲ್ಲಿ ಹೀಗೆಯೇ ಆಗಿದ್ದು, ವಿಚಾರಣಾಪೂರ್ವ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಿದೆ.</p>.<p>ಜಾಮೀನಿಗೆ ಸಂಬಂಧಿಸಿದ ಮೂಲಭೂತ ತತ್ತ್ವವು ‘ಯುಎಪಿಎ’ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಪುನರುಚ್ಚರಿಸಿರುವುದು ಗಮನಾರ್ಹ. ಯುಎಪಿಎ ಕಾಯ್ದೆಯ 43ಡಿ(5) ಸೆಕ್ಷನ್ ಕಠಿಣ ಜಾಮೀನು ನಿಯಮಗಳನ್ನು ಒಳಗೊಂಡಿದ್ದು, ವ್ಯಕ್ತಿಯ ಸ್ವಾತಂತ್ರ್ಯದ ಹಕ್ಕು ಮತ್ತು ತ್ವರಿತ ವಿಚಾರಣೆಯ ಹಕ್ಕನ್ನು ಈ ನಿಯಮಗಳು ಹತ್ತಿಕ್ಕಬಾರದು ಎಂದೂ ನ್ಯಾಯಾಲಯ ಹೇಳಿದೆ. ಯುಎಪಿಎ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ 2ರಿಂದ 6ರಷ್ಟಿದ್ದು, ಶೇ 94ರಿಂದ 98ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿ ಬಿಡುಗಡೆ ಆಗುತ್ತಿರುವುದನ್ನೂ ಕೋರ್ಟ್ ಎತ್ತಿ ತೋರಿಸಿದೆ. ನಾಗರಿಕರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕಾನೂನು ಅಸ್ತ್ರಗಳನ್ನು ಬಳಸಲು ಹಿಂಜರಿಯದಿರುವ ಹಾಗೂ ಮೂಲಭೂತ ಹಕ್ಕುಗಳು ಒತ್ತಡದಲ್ಲಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ವಿಶೇಷ ಮಹತ್ವವಿದೆ. ಸರ್ಕಾರದ ದಮನಕಾರಿ ವರ್ತನೆಗೆ ಉಮರ್ ಖಾಲಿದ್ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ನ್ಯಾಯಾಂಗದ ಚರಿತ್ರೆಯಲ್ಲಿ ಸುಪ್ರೀಂ ಕೋರ್ಟ್ ತನ್ನದೇ ತೀರ್ಪನ್ನು ಪ್ರಶ್ನಿಸಿರುವುದು ವಿರಳ. ಇದು ತಾಂತ್ರಿಕ ಪ್ರಶ್ನೆಯಷ್ಟೇ ಆಗಿರದೆ, ಗಂಭೀರವಾದ ಹಾಗೂ ಸಾವಧಾನದಿಂದ ಆಲಿಸಿ ಉತ್ತರಿಸಬೇಕಾದ ವಿಷಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>