<p>ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಆ ರಾಜ್ಯದ ರಾಜಕಾರಣದಲ್ಲಿ ಹೊಸತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲು ಒಂದಿಷ್ಟು ಅನಿಶ್ಚಿತ ಪರಿಸ್ಥಿತಿ ಎದುರಿಸಬೇಕಾಯಿತು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ಒಂದಿಷ್ಟು ವಿಳಂಬ ಮಾಡಿದರು. ಹಾಗೆ ಮಾಡಿದ್ದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇದ್ದಿರಬಹುದು. ಚುನಾವಣಾಪೂರ್ವ ಮೈತ್ರಿಕೂಟವೊಂದಕ್ಕೆ ಬಹುಮತ ಸಿಗದೆ ಇದ್ದಾಗ, ಮೈತ್ರಿಕೂಟವು ಸರ್ಕಾರ ರಚನೆಗೆ ಮುಂದಾಗದೆ ಇದ್ದಾಗ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ಕೊಡುವುದು ದೇಶದಲ್ಲಿ ಒಪ್ಪಿತ ಸಂಪ್ರದಾಯವಾಗಿ ಬೆಳೆದುಬಂದಿದೆ. ಆದರೂ ತಮಿಳುನಾಡಿನ ರಾಜ್ಯಪಾಲರು, ಇತರ ಪಕ್ಷಗಳ ಬೆಂಬಲ ಸಿಕ್ಕಿರುವ ಬಗ್ಗೆ ದಾಖಲೆ ಒದಗಿಸಬೇಕು ಎಂದು ವಿಜಯ್ ಅವರಿಗೆ ಸೂಚಿಸಿದರು. ಅಂದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಂದ ಸರ್ಕಾರದ ಕೆಲವು ಕೆಲಸಗಳಿಗೆ ಅಡ್ಡಿ ಎದುರಾಗಬಹುದು ಎಂಬ ಸೂಚನೆಯು ಈ ನಡೆಯ ಮೂಲಕ ವಿಜಯ್ ಅವರಿಗೆ ರವಾನೆ ಆದಂತಾಗಿದೆ. ವಿಧಾನಸಭೆಯಲ್ಲಿ ವಿಜಯ್ ಅವರಿಗೆ ಬಹಳ ಕಡಿಮೆ ಪ್ರಮಾಣದ ಬಹುಮತ ಇದೆ. ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸದ ಪಕ್ಷವೊಂದು ತಮಿಳುನಾಡಿನಲ್ಲಿ 1967ರ ನಂತರ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿರುವುದೂ ಈಚಿನ ದಶಕಗಳಲ್ಲಿ ಇದೇ ಮೊದಲು.</p>.<p>ವಿಜಯ್ ಅವರು ಚುನಾವಣೆಯಲ್ಲಿ ಸಾಧಿಸಿರುವ ಜಯವು ತಮಿಳುನಾಡಿನ ರಾಜಕಾರಣವನ್ನು ದ್ರಾವಿಡ ಸಿದ್ಧಾಂತದ ಆಚೆಗಿನ ಪಕ್ಷಗಳಿಗೂ ಮುಕ್ತಗೊಳಿಸಿದೆ; ಆ ರಾಜ್ಯದಲ್ಲಿ ಇನ್ನು ಮುಂದೆ ದ್ರಾವಿಡ ಚಳವಳಿಗೆ ಹೊರತಾಗಿರುವ ಪಕ್ಷಗಳೂ ಪ್ರವರ್ಧಮಾನಕ್ಕೆ ಬರಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದು ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನಲ್ಲಿ ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಹೊಸ ಆಸೆಯನ್ನು ಮೂಡಿಸಬಹುದು. ಕಾಮರಾಜ್, ಪೆರಿಯಾರ್ ರಾಮಸ್ವಾಮಿಅವರ ಚಿಂತನೆಗಳು ತಮ್ಮ ಪಕ್ಷದ ಪಾಲಿಗೆ ಮಾರ್ಗದರ್ಶಿ ಆಗಿವೆ ಎಂದು ವಿಜಯ್ ಈ ಹಿಂದೆ ಹೇಳಿದ್ದರು. ಪ್ರಸ್ತುತ, ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ಸರ್ಕಾರದ ಭಾಗವಾಗಿದೆ. ವಿಜಯ್ ಅವರು ಧರ್ಮನಿರಪೇಕ್ಷ ಹಾಗೂ ಮಧ್ಯಮಪಂಥವನ್ನು ಅನುಸರಿಸಬಹುದು ಎಂಬ ಸೂಚನೆಗಳಿವೆ. ವಿಜಯ್ ಅವರಿಗೆ ಬೆಂಬಲ ನೀಡಿರುವ ಪಕ್ಷಗಳು ಬೇಷರತ್ತಾಗಿ ಹಾಗೆ ಮಾಡಿಲ್ಲ ಎಂಬುದು ಗಮನಾರ್ಹ. ಈಗ ಹೇಳಿರುವ ಹಾದಿಯನ್ನು ಬಿಟ್ಟು ಸರ್ಕಾರವು ಬೇರೆ ಹಾದಿ ತುಳಿದಲ್ಲಿ, ಎಡಪಕ್ಷಗಳು ತಮ್ಮ ಬೆಂಬಲದ ಬಗ್ಗೆ ಮರುಚಿಂತನೆ ನಡೆಸಬಹುದು. ಸ್ಥಿರವಾದ ಹಾಗೂ ಧರ್ಮನಿರಪೇಕ್ಷ ತತ್ತ್ವದಲ್ಲಿ ನಂಬಿಕೆ ಇರುವ ಸರ್ಕಾರವನ್ನು ಬಯಸಿ ಬೆಂಬಲ ನೀಡಿರುವುದಾಗಿ ಈ ಪಕ್ಷಗಳು ಹಾಗೂ ವಿಸಿಕೆ ಹೇಳಿವೆ. ಇವು ಡಿಎಂಕೆ ಜೊತೆ ಕೂಡ ಸಮಾಲೋಚನೆ ನಡೆಸಿವೆ. ಹೀಗಾಗಿ ಇವು ಡಿಎಂಕೆ ಮೈತ್ರಿಕೂಟದ ಭಾಗವಾಗಿಯೂ ಇರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ತನಗೆ ದ್ರೋಹ ಎಸಗಿದೆ ಎಂದು ಡಿಎಂಕೆ ದೂರಿದೆ. ದಶಕದ ನಂಟನ್ನು ಬಹಳ ಸಲೀಸಾಗಿ ಕಾಂಗ್ರೆಸ್ ಮುರಿದುಕೊಂಡಿದೆ ಎಂದು ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ. ವಿಜಯ್ ಅವರನ್ನು ಬೆಂಬಲಿಸಿರುವುದಕ್ಕೆ ಕಾಂಗ್ರೆಸ್ಗೆ ತನ್ನದೇ ಆದ ಸಮರ್ಥನೆಗಳಿವೆ. ರಾಜ್ಯದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ವಿಜಯ್ ಪಕ್ಷದ ಜೊತೆಗೂಡಿ ಎದುರಿಸುವುದಾಗಿ ಅದು ಹೇಳಿದೆ.</p>.<p>ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ದಳ, ಮಾದಕ ಪದಾರ್ಥ ವಿರೋಧಿ ಘಟಕ ಹಾಗೂ ಅರ್ಹರಿಗೆ ಉಚಿತ ವಿದ್ಯುತ್ ಘೋಷಣೆ ಮಾಡುವ ಮೂಲಕ ವಿಜಯ್ ಅವರು ಸರ್ಕಾರಿಯಂತ್ರಕ್ಕೆ ಚಾಲನೆ ನೀಡಿದ್ದಾರೆ. ಡಿಎಂಕೆ ನೇತೃತ್ವದ ಹಿಂದಿನ ಸರ್ಕಾರವು ರಾಜ್ಯದ ಮೇಲೆ ₹10 ಲಕ್ಷ ಕೋಟಿ ಮೊತ್ತದ ಸಾಲದ ಹೊರೆ ಹೊರಿಸಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿಯೂ ಹೇಳಿದ್ದಾರೆ. ದೇಶದ ಬಹುತೇಕ ರಾಜ್ಯಗಳು ಸಾಲದ ಭಾರೀ ಹೊರೆಯನ್ನು ಹೊತ್ತಿವೆ. ಸಾಲದ ಹೊರೆಯು ವಿಜಯ್ ಅವರಿಗೆ ತಮ್ಮ ಜನಪ್ರಿಯ ಘೋಷಣೆಗಳನ್ನು ಜಾರಿಗೆ ತರಲು ಅಡ್ಡಿಯಾಗಿ ಪರಿಣಮಿಸಬಹುದು. ರಾಜಕಾರಣ ಹಾಗೂ ಆಡಳಿತದಲ್ಲಿ ಯಾವುದೇ ಅನುಭವ ಇಲ್ಲದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಹೊಣೆ ಸೇರಿದಂತೆ ಹಲವು ಬಗೆಯ ಸವಾಲುಗಳನ್ನು ಎದುರಿಸಬೇಕಾಗಿದೆ. ಆ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಅವರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಆ ರಾಜ್ಯದ ರಾಜಕಾರಣದಲ್ಲಿ ಹೊಸತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲು ಒಂದಿಷ್ಟು ಅನಿಶ್ಚಿತ ಪರಿಸ್ಥಿತಿ ಎದುರಿಸಬೇಕಾಯಿತು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ಒಂದಿಷ್ಟು ವಿಳಂಬ ಮಾಡಿದರು. ಹಾಗೆ ಮಾಡಿದ್ದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇದ್ದಿರಬಹುದು. ಚುನಾವಣಾಪೂರ್ವ ಮೈತ್ರಿಕೂಟವೊಂದಕ್ಕೆ ಬಹುಮತ ಸಿಗದೆ ಇದ್ದಾಗ, ಮೈತ್ರಿಕೂಟವು ಸರ್ಕಾರ ರಚನೆಗೆ ಮುಂದಾಗದೆ ಇದ್ದಾಗ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ಕೊಡುವುದು ದೇಶದಲ್ಲಿ ಒಪ್ಪಿತ ಸಂಪ್ರದಾಯವಾಗಿ ಬೆಳೆದುಬಂದಿದೆ. ಆದರೂ ತಮಿಳುನಾಡಿನ ರಾಜ್ಯಪಾಲರು, ಇತರ ಪಕ್ಷಗಳ ಬೆಂಬಲ ಸಿಕ್ಕಿರುವ ಬಗ್ಗೆ ದಾಖಲೆ ಒದಗಿಸಬೇಕು ಎಂದು ವಿಜಯ್ ಅವರಿಗೆ ಸೂಚಿಸಿದರು. ಅಂದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಂದ ಸರ್ಕಾರದ ಕೆಲವು ಕೆಲಸಗಳಿಗೆ ಅಡ್ಡಿ ಎದುರಾಗಬಹುದು ಎಂಬ ಸೂಚನೆಯು ಈ ನಡೆಯ ಮೂಲಕ ವಿಜಯ್ ಅವರಿಗೆ ರವಾನೆ ಆದಂತಾಗಿದೆ. ವಿಧಾನಸಭೆಯಲ್ಲಿ ವಿಜಯ್ ಅವರಿಗೆ ಬಹಳ ಕಡಿಮೆ ಪ್ರಮಾಣದ ಬಹುಮತ ಇದೆ. ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸದ ಪಕ್ಷವೊಂದು ತಮಿಳುನಾಡಿನಲ್ಲಿ 1967ರ ನಂತರ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿರುವುದೂ ಈಚಿನ ದಶಕಗಳಲ್ಲಿ ಇದೇ ಮೊದಲು.</p>.<p>ವಿಜಯ್ ಅವರು ಚುನಾವಣೆಯಲ್ಲಿ ಸಾಧಿಸಿರುವ ಜಯವು ತಮಿಳುನಾಡಿನ ರಾಜಕಾರಣವನ್ನು ದ್ರಾವಿಡ ಸಿದ್ಧಾಂತದ ಆಚೆಗಿನ ಪಕ್ಷಗಳಿಗೂ ಮುಕ್ತಗೊಳಿಸಿದೆ; ಆ ರಾಜ್ಯದಲ್ಲಿ ಇನ್ನು ಮುಂದೆ ದ್ರಾವಿಡ ಚಳವಳಿಗೆ ಹೊರತಾಗಿರುವ ಪಕ್ಷಗಳೂ ಪ್ರವರ್ಧಮಾನಕ್ಕೆ ಬರಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದು ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನಲ್ಲಿ ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಹೊಸ ಆಸೆಯನ್ನು ಮೂಡಿಸಬಹುದು. ಕಾಮರಾಜ್, ಪೆರಿಯಾರ್ ರಾಮಸ್ವಾಮಿಅವರ ಚಿಂತನೆಗಳು ತಮ್ಮ ಪಕ್ಷದ ಪಾಲಿಗೆ ಮಾರ್ಗದರ್ಶಿ ಆಗಿವೆ ಎಂದು ವಿಜಯ್ ಈ ಹಿಂದೆ ಹೇಳಿದ್ದರು. ಪ್ರಸ್ತುತ, ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ಸರ್ಕಾರದ ಭಾಗವಾಗಿದೆ. ವಿಜಯ್ ಅವರು ಧರ್ಮನಿರಪೇಕ್ಷ ಹಾಗೂ ಮಧ್ಯಮಪಂಥವನ್ನು ಅನುಸರಿಸಬಹುದು ಎಂಬ ಸೂಚನೆಗಳಿವೆ. ವಿಜಯ್ ಅವರಿಗೆ ಬೆಂಬಲ ನೀಡಿರುವ ಪಕ್ಷಗಳು ಬೇಷರತ್ತಾಗಿ ಹಾಗೆ ಮಾಡಿಲ್ಲ ಎಂಬುದು ಗಮನಾರ್ಹ. ಈಗ ಹೇಳಿರುವ ಹಾದಿಯನ್ನು ಬಿಟ್ಟು ಸರ್ಕಾರವು ಬೇರೆ ಹಾದಿ ತುಳಿದಲ್ಲಿ, ಎಡಪಕ್ಷಗಳು ತಮ್ಮ ಬೆಂಬಲದ ಬಗ್ಗೆ ಮರುಚಿಂತನೆ ನಡೆಸಬಹುದು. ಸ್ಥಿರವಾದ ಹಾಗೂ ಧರ್ಮನಿರಪೇಕ್ಷ ತತ್ತ್ವದಲ್ಲಿ ನಂಬಿಕೆ ಇರುವ ಸರ್ಕಾರವನ್ನು ಬಯಸಿ ಬೆಂಬಲ ನೀಡಿರುವುದಾಗಿ ಈ ಪಕ್ಷಗಳು ಹಾಗೂ ವಿಸಿಕೆ ಹೇಳಿವೆ. ಇವು ಡಿಎಂಕೆ ಜೊತೆ ಕೂಡ ಸಮಾಲೋಚನೆ ನಡೆಸಿವೆ. ಹೀಗಾಗಿ ಇವು ಡಿಎಂಕೆ ಮೈತ್ರಿಕೂಟದ ಭಾಗವಾಗಿಯೂ ಇರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ತನಗೆ ದ್ರೋಹ ಎಸಗಿದೆ ಎಂದು ಡಿಎಂಕೆ ದೂರಿದೆ. ದಶಕದ ನಂಟನ್ನು ಬಹಳ ಸಲೀಸಾಗಿ ಕಾಂಗ್ರೆಸ್ ಮುರಿದುಕೊಂಡಿದೆ ಎಂದು ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ. ವಿಜಯ್ ಅವರನ್ನು ಬೆಂಬಲಿಸಿರುವುದಕ್ಕೆ ಕಾಂಗ್ರೆಸ್ಗೆ ತನ್ನದೇ ಆದ ಸಮರ್ಥನೆಗಳಿವೆ. ರಾಜ್ಯದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ವಿಜಯ್ ಪಕ್ಷದ ಜೊತೆಗೂಡಿ ಎದುರಿಸುವುದಾಗಿ ಅದು ಹೇಳಿದೆ.</p>.<p>ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ದಳ, ಮಾದಕ ಪದಾರ್ಥ ವಿರೋಧಿ ಘಟಕ ಹಾಗೂ ಅರ್ಹರಿಗೆ ಉಚಿತ ವಿದ್ಯುತ್ ಘೋಷಣೆ ಮಾಡುವ ಮೂಲಕ ವಿಜಯ್ ಅವರು ಸರ್ಕಾರಿಯಂತ್ರಕ್ಕೆ ಚಾಲನೆ ನೀಡಿದ್ದಾರೆ. ಡಿಎಂಕೆ ನೇತೃತ್ವದ ಹಿಂದಿನ ಸರ್ಕಾರವು ರಾಜ್ಯದ ಮೇಲೆ ₹10 ಲಕ್ಷ ಕೋಟಿ ಮೊತ್ತದ ಸಾಲದ ಹೊರೆ ಹೊರಿಸಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿಯೂ ಹೇಳಿದ್ದಾರೆ. ದೇಶದ ಬಹುತೇಕ ರಾಜ್ಯಗಳು ಸಾಲದ ಭಾರೀ ಹೊರೆಯನ್ನು ಹೊತ್ತಿವೆ. ಸಾಲದ ಹೊರೆಯು ವಿಜಯ್ ಅವರಿಗೆ ತಮ್ಮ ಜನಪ್ರಿಯ ಘೋಷಣೆಗಳನ್ನು ಜಾರಿಗೆ ತರಲು ಅಡ್ಡಿಯಾಗಿ ಪರಿಣಮಿಸಬಹುದು. ರಾಜಕಾರಣ ಹಾಗೂ ಆಡಳಿತದಲ್ಲಿ ಯಾವುದೇ ಅನುಭವ ಇಲ್ಲದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ಹೊಣೆ ಸೇರಿದಂತೆ ಹಲವು ಬಗೆಯ ಸವಾಲುಗಳನ್ನು ಎದುರಿಸಬೇಕಾಗಿದೆ. ಆ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದೇ ಅವರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>