ಪುಣೆ, ಜುಲೈ 14– ‘ರಾಷ್ಟ್ರಪತಿ ಚುನಾವಣೆಗೆ ಶ್ರೀ ಸಂಜೀವ ರೆಡ್ಡಿಯವರನ್ನು ತಮ್ಮ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಕೈಗೊಂಡ ನಿರ್ಧಾರದಿಂದ ಜೇನುಗೂಡನ್ನು ಕೆದಕಿದಂತಾಗಿದೆ’ ಎಂದು ಅಖಿಲ ಭಾರತ ದಲಿತ ಸೇವಕ ಸಂಘದ ಅಧ್ಯಕ್ಷ ಶ್ರೀ ಆರ್.ಪಿ.ಎನ್. ರಾಜಭೋಜ್ ಅವರು ಇಂದು ಇಲ್ಲಿ ತಿಳಿಸಿದರು.