ರಾಜಿ ಯತ್ನಕ್ಕೆ ಎಸ್ಸೆನ್ ಆಶೀರ್ವಾದ
ನವದೆಹಲಿ, ನ. 9– ಕಾಂಗ್ರೆಸ್ ಪಕ್ಷದಲ್ಲಿನ ಸಾಂಸ್ಥಿಕ ವಿಭಾಗ ಹಾಗೂ ಶಾಸಕ ವಿಭಾಗದ ನಡುವಣ ಬಿಕ್ಕಟ್ಟನ್ನು ಸರಿಪಡಿಸುವುದಕ್ಕಾಗಿ ಇತರ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಕಲೆಹಾಕುವ ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ಹೊಸ ಪ್ರಯತ್ನ ಯಶಸ್ವಿಯಾಗಲೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಈ ರಾತ್ರಿ ಇಲ್ಲಿ ಶುಭ ಹಾರೈಸಿದರು.