ರಾಷ್ಟ್ರಪತಿ ವಿ.ವಿ. ಗಿರಿ, ಉಪರಾಷ್ಟ್ರಪತಿ ಎಸ್. ಪಾಠಕ್, ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಗಡಿನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್ ಅವರು ಇಂದು ಬೆಳಿಗ್ಗೆ ಇಲ್ಲಿನ ಶಾಂತಿವನಕ್ಕೆ ಭೇಟಿ ಇತ್ತು ನೆಹರೂ ಸಮಾಧಿ ಮೇಲೆ ಪುಷ್ಪಗುಚ್ಛ
ಗಳನ್ನಿರಿಸಿ, ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರಲ್ಲದೆ ಸಮಾಧಿ ಬಳಿ ಗುಲಾಬಿ ಗಿಡಗಳನ್ನು ನೆಟ್ಟರು.
ನೆಹರೂ ವಾರ್ಸಿಟಿ ಉದ್ಘಾಟನೆ
ನವದೆಹಲಿ, ನ. 14– ರಾಷ್ಟ್ರದ ಅಭಿವೃದ್ಧಿಗೆ ವಿಶೇಷ ಗಮನಹರಿಸುವ ಮೂಲಕ ವೈಶಿಷ್ಟ್ಯ ಪೂರ್ಣ ಶಿಕ್ಷಣ ಕೇಂದ್ರವಾಗುವುದೆಂಬ ಸದಾಶಯದೊಂದಿಗೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಇಲ್ಲಿ ಉದ್ಘಾಟಿಸಿದರು.