ಬೆಂಗಳೂರು, ಫೆ. 27– ಈ ಘಟ್ಟದಲ್ಲಿ ರಾಜ್ಯದ ಗಡಿ ಯಥಾಸ್ಥಿತಿಯಲ್ಲಿರಲಿ, ಮಹಾಜನ್ ಆಯೋಗದ ಶಿಫಾರಸನ್ನು ಕಾರ್ಯಗತ ಮಾಡುವುದು ಬೇಡವೆಂದರೆ ಮಹಾಜನ್ ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ಸೇರಲು ಕಾದು ಕುಳಿತಿರುವವರಿಗೆ ಘೋರ ಅನ್ಯಾಯವಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಮೇಲ್ಮನೆಯಲ್ಲಿ ಹೇಳಿದರು.