ಸರ್ಕಸ್ ಕಲಾವಿದರ ಕಣ್ಣೀರಿನ ಕತೆ
ನವದೆಹಲಿ, ಮಾರ್ಚ್ 29– ಭಾರತೀಯ ಸರ್ಕಸ್ ಕಲಾವಿದರು ವಿಶ್ವದಲ್ಲೇ ಉತ್ತಮ ಕಲಾವಿದರ ಪಂಕ್ತಿಗೆ ಸೇರಿದವರು. ಅವರ ಕಲಾ ಪ್ರದರ್ಶನಕ್ಕೆ ಸರ್ಕಸ್ ಆಡಳಿತ ವರ್ಗದವರು ಉತ್ತಮ ವ್ಯವಸ್ಥೆ ಮಾಡಿದ ಪಕ್ಷದಲ್ಲಿ, ಭಾರತದ ಸರ್ಕಸ್ ಕಂಪನಿಗಳು ವಿದೇಶಗಳ ಹೆಚ್ಚು ಆಕರ್ಷಣೆಗೆ ಒಳಗಾಗುವುದಲ್ಲದೇ ಅಮೂಲ್ಯ ವಿದೇಶಿ ವಿನಿಮಯವನ್ನು ಗಳಿಸುವುವು.