ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಗುರುವಾರ, 22–10–1970

Last Updated 21 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ವಿದೇಶಿ ಹಣದ ಪ್ರಭಾವ ತಡೆಗೆ ಶಾಸನ ಸಿದ್ಧ

ನವದೆಹಲಿ, ಅ. 21– ಸಾಧಾರಣ ವ್ಯವಹಾರಗಳ ವಿನಾ ಮಿಕ್ಕಂತೆ ವಿದೇಶಿ ಸಂಸ್ಥೆಗಳು, ಏಜೆನ್ಸಿಗಳು ಅಥವಾ ವ್ಯಕ್ತಿ ಗಳಿಂದ ಹಣ ಪಡೆಯುವಿಕೆ ವಿರುದ್ಧ ಸೂಕ್ತ ನಿರ್ಬಂಧ ವಿಧಿಸಲು ಕರಡು ಶಾಸನ ಕ್ರಮಗಳನ್ನು ಕೇಂದ್ರ ಗೃಹ ಸಚಿವ ಶಾಖೆ ಸಿದ್ಧಪಡಿಸಿದೆ.

ವಾರ್ತೆ ಹಾಗೂ ಪ್ರಸಾರ ಸಚಿವ ಶಾಖೆಗೆ ಸಂಬಂಧಿಸಿದ ಸಂಸತ್ ಸದಸ್ಯರ ಸಲಹಾ ಸಮಿತಿ ಸದಸ್ಯರ ಸಭೆಗೆ ಇಂದು ಈ ವಿಷಯ ತಿಳಿಸಲಾಯಿತು.

ಕಾಲೇಜು ಶಿಕ್ಷಕರ ಸಂಬಳ: ತುಕೋಳ್ ಶಿಫಾರಸು ಅನ್ವಯದ ಬಗ್ಗೆ ಬೇಗ ನಿರ್ಧಾರ

ಬೆಂಗಳೂರು, ಅ. 21– ರಾಜ್ಯದಲ್ಲಿ ಕಾಲೇಜುಗಳಲ್ಲಿನ ಶಿಕ್ಷಕರಿಗೆ ತುಕೋಳ್ ಆಯೋಗ ಶಿಫಾರಸು ಮಾಡಿರುವ ವೇತನ ಸ್ಕೇಲನ್ನು ಅನ್ವಯಿಸುವ ಬಗ್ಗೆ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಈ ಸಂಬಂಧದಲ್ಲಿ ಹಣಕಾಸು ಇಲಾಖೆಯೊಡನೆ ವ್ಯವಹರಿಸುತ್ತಿರುವುದಾಗಿ ತಿಳಿಸಿದರು.

ಪಕ್ಷೇತರ ಸದಸ್ಯ ಶ್ರೀ ಎಂ. ಸತ್ಯನಾರಾಯಣ ರಾವ್ ಅವರ ಗಮನ ಸೆಳೆಯುವ ಸೂಚನೆ ಸಂಬಂಧದಲ್ಲಿ ಹೇಳಿಕೆ ನೀಡಿದ ಶ್ರೀ ಶಂಕರಗೌಡರು, ತುಕೋಳ್ ಆಯೋಗದ ಶಿಫಾರಸನ್ನು ಕಾರ್ಯಗತ ಮಾಡಿದಾಗ ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ
ವೇತನ ಬರುತ್ತಿರುವವರಿಗೆ ಅದನ್ನು ಉಳಿಸಲಾಗುವುದೆಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT