ಸಂಧಾನದ ಬಾಗಿಲಿಗೆ ಬೀಗಮುದ್ರೆ
ನವದೆಹಲಿ, ನ. 3– ಐಕಮತ್ಯಕ್ಕಾಗಿ ನಡೆಸಿದ ಪ್ರಯತ್ನ ವಿಫಲವಾಗಿದೆಯೆಂದು ಕಾಂಗ್ರೆಸ್ ಮುಖ್ಯಮಂತ್ರಿಗಳು ಪ್ರಕಟಿಸಿರುವುದರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಮತ್ತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಡುವೆ ಉದ್ರಿಕ್ತ ಭಾವನೆಗಳ ಪತ್ರ ವಿನಿಮಯವಾಗಿರುವುದರಿಂದ ರಾಜಿ ಬಗೆಗೆ ನಿನ್ನೆಯವರೆಗೆ ಇದ್ದಂತಹ ಅಲ್ಪಸ್ವಲ್ಪ ನಂಬಿಕೆಯೂ ನಶಿಸಿತು.