ನವದೆಹಲಿ, ಜುಲೈ 22– ರಾಷ್ಟ್ರೀಕರಣಗೊಳಿಸಲ್ಪಟ್ಟ 14 ವಾಣಿಜ್ಯ ಬ್ಯಾಂಕುಗಳ ಮಾಲೀಕತ್ವವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದರ ಮೇಲೆ ಹಾಗೂ ಆ ಬ್ಯಾಂಕುಗಳ ಮಾಮೂಲಿನ ವಹಿವಾಟಿನ ಮೇಲೆ ಸುಪ್ರೀಂ ಕೋರ್ಟಿನ ತಡೆ ಆಜ್ಞೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.