ಅಂತೆಯೇ ಬ್ಯಾಂಕ್ ರಾಷ್ಟ್ರೀಕರಣ ಪ್ರಕರಣದಿಂದ ಪಕ್ಷದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ‘ಯಜಮಾನರು’ ಗಳಿಗೆ ಅವಕಾಶ ನೀಡುತ್ತಿಲ್ಲ. ಎರಡೂ ಗುಂಪುಗಳು ಏಕತೆಯ ಘೋಷಣೆಯನ್ನೇ ಪದೇ ಪದೇ ಕೂಗುತ್ತಿದ್ದರೂ ತಮ್ಮ ತಮ್ಮ ನಿಲುವನ್ನು ಸಂಘಟಿಸಿಕೊಳ್ಳಲು ಪ್ರಯತ್ನಿಸುತ್ತಿವೆ.