ಸಿಂಡಿಕೇಟ್ ಬೆಂಬಲಿಗರ ಸಭೆ
ನವದೆಹಲಿ, ನ. 13– ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಉಚ್ಚಾಟನೆ ಮಾಡಿದುದರ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿಯನ್ನು ವಿಮರ್ಶಿಸಲು, ಸಿಂಡಿಕೇಟ್ಗೆ ಬೆಂಬಲ ನೀಡುವ ಸಂಸತ್ತಿನ ಕಾಂಗ್ರೆಸ್ ಸದಸ್ಯರು ಇಂದು ಸಂಜೆ ಮುರಾರಜಿ ದೇಸಾಯಿ ಅವರ ನಿವಾಸದಲ್ಲಿ ಸಭೆ ಸೇರಿದ್ದರು.