ಮೈಸೂರಿಗೆ ಪ್ರತಿಕೂಲವಾಗಿರುವುದೆಂದು ವರದಿಯಾದ ಕೇಂದ್ರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿಕೊಳ್ಳಲು ಮೈಸೂರಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನವೆಂಬರ್ 5ರಂದು ದೆಹಲಿಗೆ ಆಗಮಿಸಿದ್ದರೇ ಎಂಬ ಶ್ರೀ ಕೆ. ಸುಂದರಂ ಅವರ ಪ್ರಶ್ನೆಯೊಂದಕ್ಕೆ ಶುಕ್ಲ ಉತ್ತರ ಕೊಡುತ್ತ, ಮೈಸೂರಿನ ಮುಖ್ಯಮಂತ್ರಿ ಅವರು ನವೆಂಬರ್ 5ರಂದು ಗೃಹ ಸಚಿವರನ್ನು ಭೇಟಿಯಾಗಿದ್ದರೆಂದೂ ಆದರೆ ಅವರು ಗಡಿ ಪ್ರಶ್ನೆಯನ್ನು ಪ್ರಸ್ತಾಪಿಸಲಿಲ್ಲವೆಂದೂ ತಿಳಿಸಿದರು.