ಬೆಂಗಳೂರು, ಡಿ. 16– ‘ಅತ್ಯಾಸೆಯುಳ್ಳ, ನಿರಂಕುಶಾಧಿಕಾರಿ, ವ್ಯಕ್ತಿಪೂಜೆಯನ್ನು ಬೆಳೆಸುತ್ತಿರುವ ಹಾಗೂ ಸರ್ವಾಧಿಕಾರಿಯ ಮನೋಭಾವವನ್ನು ಪ್ರದರ್ಶಿಸಿರುವ’ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ‘ಎಷ್ಟು ಬೇಗ ಅಧಿಕಾರ ತ್ಯಜಿಸಿದರೆ ರಾಷ್ಟ್ರಕ್ಕೆ ಅಷ್ಟೂ ಕ್ಷೇಮ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಕಟುವಾಗಿ ಟೀಕಿಸಿದರು.