ನಾಲ್ಕು ಗೋಡೆಗಳ ಆವರಣದಲ್ಲಿ ಹೊರಗಿನ ಸಂಪರ್ಕ ಇಲ್ಲದಂತೆ ಕೈದಿಗಳನ್ನಿಡುವುದರಿಂದ ಅವರ ಮಾನಸಿಕ ಪರಿವರ್ತನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕದೆಂಬುದನ್ನು ಮನಗಂಡ ಸರ್ಕಾರ ಪ್ರಥಮ ಬಾರಿಗೆ ಮಲಪ್ರಭಾ ಕಾಲುವೆಗಳನ್ನು ತೋಡುವ ಕಾರ್ಯದಲ್ಲಿ ಸುಮಾರು 200 ಕೈದಿಗಳನ್ನು ಬಳಸಿತು. ಅದರಿಂದ ಉತ್ತೇಜನಕಾರಿ ಫಲ ಕಂಡುಬಂದುದರಿಂದ, ಈ ರೀತಿಯ ಕಾರ್ಯಕ್ಕೆ ಅವರು ಹೊಂದಿಕೊಂಡದ್ದರಿಂದ, ಕೃಷಿರಂಗದಿಂದ ಬಂದ ಕೈದಿಗಳನ್ನು ಅವರಿಗೆ ಚಿರಪರಿಚಿತವಾದ ಕೃಷಿ ಕಾರ್ಯದಲ್ಲಿ ತೊಡಗಿಸಲು ಈ ಯೋಜನೆಯನ್ನು ಹೊಂದಲಾಗುವುದು.