ಮುಖ್ಯಮಂತ್ರಿ ಅಚ್ಯುತ ಮೆನನ್ ಅವರ ಸಲಹೆಯ ಅನುಸಾರ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಈ ಸಲಹೆ ಮಾಡಿದ್ದು ಅವರ ಸಂಪುಟದ ಅನೇಕ ಸಹೋದ್ಯೋಗಿಗಳಿಗೇ ಗೊತ್ತಿರಲಿಲ್ಲವೆಂದೂ ವಿಧಾನಸಭೆ ವಿಸರ್ಜನೆ ಸುದ್ದಿ ಅವರಿಗೆ ಆಶ್ಚರ್ಯವನ್ನುಂಟು ಮಾಡಿತೆಂದೂ ಐ.ಎಸ್.ಪಿ. ಅಧ್ಯಕ್ಷ ಶ್ರೀ ಚಂದ್ರಶೇಖರನ್ ಅವರು ತಿಳಿಸಿದ್ದಾರೆ.