ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 27–7–1970

Last Updated 26 ಜುಲೈ 2020, 20:50 IST
ಅಕ್ಷರ ಗಾತ್ರ

ಜನಸಂಘ– ಸ್ವತಂತ್ರಪಕ್ಷ– ಸಂಸ್ಥಾ ಕಾಂಗ್ರೆಸ್‌ ಸೇರಿದ ಸಂಸತ್‌ ಸಂಯುಕ್ತರಂಗ ರಚನೆ ಯತ್ನಕ್ಕೆ ತಿಲಾಂಜಲಿ

ನವದೆಹಲಿ, ಜುಲೈ 26– ಕೇವಲ ಜನಸಂಘ ಮತ್ತು ಸ್ವತಂತ್ರ ಪಕ್ಷಗಳು ಸೇರಿದ ತ್ರಿಪಕ್ಷ ಬಲ
ಪಂಥೀಯ ರಂಗವೊಂದನ್ನು ಸಂಸತ್ತಿನಲ್ಲಿ ರಚಿಸಿಕೊಳ್ಳುವ ಪ್ರಯತ್ನವನ್ನು ಇಂದು ಸಂಸ್ಥಾ ಕಾಂಗ್ರೆಸ್‌ ಹೆಚ್ಚುಕಡಿಮೆ ತ್ಯಜಿಸಿತು.

ಮಾರ್ಕ್ಸ್‌ವಾದಿಗಳೂ ಸೇರಿ ಇತರ ವಿರೋಧಿ ಗುಂಪುಗಳೊಡನೆ ಕೂಡಿ ಕೆಲಸ ಮಾಡುವ ವ್ಯವಸ್ಥೆಗೆ ಇಂಗಿತ ವ್ಯಕ್ತಪಡಿಸಿತು.

ಬೆಂಗಳೂರಿನ ಒಬ್ಬರು ಸೇರಿ ಆಂಧ್ರದಲ್ಲಿ ನಾಲ್ವರು ನಕ್ಸಲೀಯರ ಬಂಧನ

ಹೈದರಾಬಾದ್‌, ಜುಲೈ 26 (ಯುಎನ್‌ಐ)– ಕರ್ನೂಲು ಜಿಲ್ಲೆಯಲ್ಲಿರುವ ಅಣ್ಣಾಮಲೈ ಬೆಟ್ಟದಲ್ಲಿ ನಿನ್ನೆ ಪೊಲೀಸರು ಘರ್ಷಣೆ ನಂತರ ನಾಲ್ವರು ನಕ್ಸಲೀಯರನ್ನು ಬಂಧಿಸಿದರೆಂದು ಇಂದು ಇಲ್ಲಿಗೆ ಸುದ್ದಿ ಬಂದಿದೆ. ಬಂಧಿತರಲ್ಲಿ ಬೆಂಗಳೂರಿನ ನಾಗರಾಜ್‌ ಎಂಬುವರೂ ಒಬ್ಬರು.

ಚಿತ್ತೂರಿನ ಸಿ.ಕೆ.ನಾರಾಯಣ ರೆಡ್ಡಿ, ನೆಲ್ಲೂರಿನ ವಿ.ದಾಸರಥಿ, ಏಡುಲ ವೆಂಕಯ್ಯ ಇತರ ಮೂವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT