ಜನಸಂಘ– ಸ್ವತಂತ್ರಪಕ್ಷ– ಸಂಸ್ಥಾ ಕಾಂಗ್ರೆಸ್ ಸೇರಿದ ಸಂಸತ್ ಸಂಯುಕ್ತರಂಗ ರಚನೆ ಯತ್ನಕ್ಕೆ ತಿಲಾಂಜಲಿ
ನವದೆಹಲಿ, ಜುಲೈ 26– ಕೇವಲ ಜನಸಂಘ ಮತ್ತು ಸ್ವತಂತ್ರ ಪಕ್ಷಗಳು ಸೇರಿದ ತ್ರಿಪಕ್ಷ ಬಲ ಪಂಥೀಯ ರಂಗವೊಂದನ್ನು ಸಂಸತ್ತಿನಲ್ಲಿ ರಚಿಸಿಕೊಳ್ಳುವ ಪ್ರಯತ್ನವನ್ನು ಇಂದು ಸಂಸ್ಥಾ ಕಾಂಗ್ರೆಸ್ ಹೆಚ್ಚುಕಡಿಮೆ ತ್ಯಜಿಸಿತು.
ಮಾರ್ಕ್ಸ್ವಾದಿಗಳೂ ಸೇರಿ ಇತರ ವಿರೋಧಿ ಗುಂಪುಗಳೊಡನೆ ಕೂಡಿ ಕೆಲಸ ಮಾಡುವ ವ್ಯವಸ್ಥೆಗೆ ಇಂಗಿತ ವ್ಯಕ್ತಪಡಿಸಿತು.
ಬೆಂಗಳೂರಿನ ಒಬ್ಬರು ಸೇರಿ ಆಂಧ್ರದಲ್ಲಿ ನಾಲ್ವರು ನಕ್ಸಲೀಯರ ಬಂಧನ
ಹೈದರಾಬಾದ್, ಜುಲೈ 26 (ಯುಎನ್ಐ)– ಕರ್ನೂಲು ಜಿಲ್ಲೆಯಲ್ಲಿರುವ ಅಣ್ಣಾಮಲೈ ಬೆಟ್ಟದಲ್ಲಿ ನಿನ್ನೆ ಪೊಲೀಸರು ಘರ್ಷಣೆ ನಂತರ ನಾಲ್ವರು ನಕ್ಸಲೀಯರನ್ನು ಬಂಧಿಸಿದರೆಂದು ಇಂದು ಇಲ್ಲಿಗೆ ಸುದ್ದಿ ಬಂದಿದೆ. ಬಂಧಿತರಲ್ಲಿ ಬೆಂಗಳೂರಿನ ನಾಗರಾಜ್ ಎಂಬುವರೂ ಒಬ್ಬರು.
ಚಿತ್ತೂರಿನ ಸಿ.ಕೆ.ನಾರಾಯಣ ರೆಡ್ಡಿ, ನೆಲ್ಲೂರಿನ ವಿ.ದಾಸರಥಿ, ಏಡುಲ ವೆಂಕಯ್ಯ ಇತರ ಮೂವರು.