ಲೈಸೆನ್ಸ್ ವಿಷಯವೇ ಪ್ರಾಧಾನ್ಯವಾಗಿದ್ದ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಆಡಳಿತ ಕಾಂಗ್ರೆಸ್ಸಿನ ಚಂದ್ರಶೇಖರ್ ಅವರು, ಸರ್ಕಾರವು ಏಕಸ್ವಾಮ್ಯ ಶಾಸನವನ್ನು ಅಕ್ಷರಶಃ ಕಾರ್ಯಗತಗೊಳಿಸದೆ ಕರ್ತವ್ಯಚ್ಯುತಿ ಮತ್ತು ಜನವಂಚನೆ ಎಸಗಿರುವುದಾಗಿ ಆಪಾದಿಸಿದರು. ಬಿರ್ಲಾ ಸಂಸ್ಥೆಗಳ ವಿರುದ್ಧದ ಆರೋಪಗಳ ಬಗೆಗೆ ವಿಚಾರಣಾ ಆಯೋಗವೊಂದಿರುವಾಗ ಅವರಿಗೆ ಲೈಸೆನ್ಸ್ಗಳನ್ನು ಕೊಟ್ಟಿದ್ದೇಕೆ ಎಂದು ಅವರು ಪ್ರಶ್ನಿಸಿದರು.