ಬೆಂಗಳೂರು, ಸೆ. 17– ಪೌರ ಸಮಿತಿಯು ಆರಂಭಿಸಿದ ‘ಕಾರ್ಪೊರೇಷನ್ನಿನಲ್ಲಿ ಲಂಚ ನಿರೋಧ’ ಚಳವಳಿಯು ಸಾಕಷ್ಟು ಫಲ ನೀಡಿದೆಯೆಂದು ಇಂದು ತಿಳಿಸಿದ ಪೌರ ಸಮಿತಿಯ ಅಧ್ಯಕ್ಷ ಶ್ರೀ ಕೆ.ಎಂ.ನಾಗಣ್ಣನವರು, ‘ಇನ್ನೂ ಉಳಿದಿರುವ ಲಂಚಕೋರ ಅಧಿಕಾರಿಗಳು ಕಾರ್ಪೊರೇಷನ್ನಿಂದ ಹೋಗುವವರೆಗೆ’ ಚಳವಳಿ ಮುಂದುವರಿಯುವುದೆಂದು ತಿಳಿಸಿದರು.