ನಗರ ಆಸ್ತಿ ಮಿತಿ ಹೇರಿಕೆ ಅಧಿಕಾರ ಕೇಂದ್ರಕ್ಕೆ ವಹಿಸುವುದು ಸೂಕ್ತವಲ್ಲ: ಹೆಗ್ಡೆ
ಬೆಂಗಳೂರು, ಅ. 17– ನಗರ ಆಸ್ತಿ ಮಿತಿ ಹೇರಿಕೆಯ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡುವುದು ಸೂಕ್ತವಲ್ಲ ಎಂದು ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗ್ಡೆ ಅವರು ಇಂದು ಇಲ್ಲಿ ಹೇಳಿದರು.
‘ಕೆಲವು ವಿಚಾರಗಳಲ್ಲಿ ನಮ್ಮ ಅಧಿಕಾರವನ್ನು ಕೇಂದ್ರಕ್ಕೆ ಒಪ್ಪಿಸಿ ಅದರ ಕಹಿಫಲ ಅನುಭವಿಸುತ್ತಿದ್ದೇವೆ’ ಎಂದು ಅವರು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಾಲದಲ್ಲಿ ತಿಳಿಸಿದರು.