ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '2003ರ ಜುಲೈ ತಿಂಗಳಿನಿಂದ 2013ರ ಡಿಸೆಂಬರ್ ವರೆಗೆ ನಾನು ಕುಡ್ಸೆಂಪ್ ನಿರ್ದೇಶಕನಾಗಿದ್ದೆ. ಈ ಅವಧಿಯಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ. ಸಿಪಿಎಂ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ಮತ್ತು ಬಿಜೆಪಿಯ ಸ್ವಘೋಷಿತ ಮುಖಂಡ ಹನುಮಂತ ಕಾಮತ್ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದರು.