ಬೆಂಗಳೂರು, ಅ. 29– ‘ಏನು ಮಾಡಲಿದ್ದೇನೆ ಎಂಬುದನ್ನು ತಕ್ಷಣ ಹೇಳಲಾರೆ. ಮಾನಸಗಂಗೋತ್ರಿಯನ್ನು ಶ್ರೀ ಕೆ.ವಿ. ಪುಟ್ಟಪ್ಪನವರು ಆರಂಭಿಸಿದರು. ಪ್ರೊ. ನಿಕಂ ಅವರು ಕಟ್ಟಡಗಳನ್ನು ಕಟ್ಟಿಸಿದರು, ಒಂದು ರೂಪ ಬರಿಸಿದರು. ಡಾ. ಶ್ರೀಮಾಲಿಯವರು ಅದಕ್ಕೆ ಉಸಿರು ತುಂಬಿದರು, ಸಾಕಷ್ಟು ವಿಸ್ತರಿಸಿದರು. ಇದನ್ನು ಉಳಿಸಿಕೊಳ್ಳೋದೇ ದೊಡ್ಡ ಕೆಲಸವಲ್ಲವೆ?’ ಮುಂದಿರುವ ಕರ್ತವ್ಯಗ
ಳನ್ನು ಮೈಸೂರು ವಿಶ್ವವಿದ್ಯಾಲಯದ ನೂತನ ಉಪ ಕುಲಪತಿ ಶ್ರೀ ದೇ. ಜವರೇ
ಗೌಡರು ಜ್ಞಾಪಿಸಿಕೊಂಡರು.