ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಸುರಿಯುವ ಮುನ್ನ...

Last Updated 2 ಅಕ್ಟೋಬರ್ 2018, 16:28 IST
ಅಕ್ಷರ ಗಾತ್ರ

ಹಾಲಿಗೆ, ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗದಿದ್ದಾಗ ಅವನ್ನೆಲ್ಲಾ ತಂದು ರಸ್ತೆಗೆ ಸುರಿದುಪ್ರತಿಭಟಿಸುವುದು ಇತ್ತೀಚೆಗೆ ಎಲ್ಲೆಡೆ ಕಂಡುಬರುತ್ತಿದೆ. ಇದು ಕಳವಳಕಾರಿ ಸಂಗತಿ.

ಕೃಷಿ ಉತ್ಪನ್ನಗಳಿಗೆ ಗೌರವಯುತ ಬೆಲೆ ಸಿಗದಿದ್ದಾಗ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಸಹಜ. ಆದರೆ ಪ್ರತಿಭಟನೆಯ ರೀತಿ ಸರಿಯಾದುದೇ ಎಂದು ಒಮ್ಮೆ ಯೋಚಿಸುವ ತಾಳ್ಮೆ ಮತ್ತು ಅರಿವು ಎಲ್ಲರಲ್ಲೂ ಇರಬೇಕಲ್ಲವೇ?

ದೇಶದಲ್ಲಿ ಅದೆಷ್ಟೋ ಮಂದಿ ಒಪ್ಪೊತ್ತಿನ ಕೂಳಿಗೂ ಹೆಣಗಾಡುತ್ತಿದ್ದಾರೆ. ಪೌಷ್ಟಿಕಾಂಶದ ಹೊರತೆಯಿಂದ ಮಕ್ಕಳು ಪ್ರಾಣ ಬಿಡುತ್ತಿವೆ. ಹೀಗಿರುವಾಗ ಹಾಲು, ತರಕಾರಿಗಳನ್ನು ರಸ್ತೆಗೆ ಸುರಿಯುವುದು ಎಷ್ಟು ಸರಿ? ಅದನ್ನೇ ಹಸಿದ ಹೊಟ್ಟೆಗಳಿಗೆ ಹಂಚಿ ಅವರ ಸಂತೃಪ್ತ ಮುಖಗಳನ್ನು ನೋಡುವ ಗುಣ ನಮ್ಮದಾಗಬೇಕು.

ರೈತರಿಗೆ ಕಷ್ಟಗಳಿವೆ ಎಂಬುದನ್ನು ಒಪ್ಪಲೇ ಬೇಕು. ನಮ್ಮ ಕಷ್ಟಗಳ ಮಧ್ಯೆಯೂ ಹಸಿದ ಹೊಟ್ಟೆಗಳನ್ನು ತುಂಬಿಸೋಣ. ಮಾನವೀಯ ಮೌಲ್ಯಗಳನ್ನು ಮರೆಯದೆಯೇ ಪ್ರತಿಭಟನೆಗಳನ್ನೂ ನಡೆಸೋಣ.

ರಾಘವೇಂದ್ರ ನಾಯ್ಕ ಉಂಚಳ್ಳಿ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT