ಕೆಲವು ದಿನಗಳಹಿಂದೆ, ವಿವಾದವನ್ನು ಸುಪ್ರೀಂ ಕೋರ್ಟ್ಗೆ ಒಪ್ಪಿಸುವಂತೆ ಕೇಂದ್ರ ಸಚಿವರೊಬ್ಬರು ಅಸ್ಪಷ್ಟ ಸಲಹೆ ನೀಡಿದ್ದರು. ಆದರೆ, ವಿವಾದವನ್ನು ಸುಪ್ರೀಂ ಕೋರ್ಟ್ಗೆ ಒಪ್ಪಿಸುವ ಬಗ್ಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದು ಸರ್ಕಾರದಲ್ಲಿ ಬಹುಮತಾಭಿಪ್ರಾಯ ವ್ಯಕ್ತಪಟ್ಟಿತ್ತು. ಅಲ್ಲದೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಬೇಕಾದ, ಕಾನೂನಿಗೆ ಸಂಬಂಧಿಸಿದ ಯಾವ ಅಂಶವೂ ವಿವಾದದಲ್ಲಿಲ್ಲ ಎಂದೂ ಅಭಿಪ್ರಾಯ ಪಡಲಾಗಿತ್ತು.