ಗಡಿ ಪ್ರಶ್ನೆ: ಪ್ರಧಾನಿಯಿಂದ ಹೊಸ ಹೇಳಿಕೆ ಬರದಿರುವುದಕ್ಕೆ ರಾಜ್ಯದ ಜನತೆಗೆ ನಿರಾಶೆ
ಬೆಂಗಳೂರು, ಜುಲೈ 20– ರಾಜ್ಯದಲ್ಲಿ ತಮ್ಮ ಪ್ರವಾಸ ಕಾಲದಲ್ಲಿ ಮೈಸೂರು ರಾಜ್ಯದ ಗಡಿ ಸಮಸ್ಯೆಯ ಬಗ್ಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ‘ಹೊಸ ಹೇಳಿಕೆಯನ್ನೇನೂ ನೀಡದಿರುವುದರಿಂದ’ ಮೈಸೂರು ಜನತೆಗೆ ನಿರಾಶೆಯಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.
‘ಮಹಾಜನ್ ವರದಿಯನ್ನು ಒಪ್ಪಲು ಮಹಾರಾಷ್ಟ್ರವು ನಿರಾಕರಿಸಿದ ಮೇಲೆ ಹೇಳಲಾಗುತ್ತಿರುವ ಹೇಳಿಕೆಯನ್ನೇ ಪ್ರಧಾನಿಯವರು ಪುನರುಚ್ಚರಿಸಿರುವರೇ ಹೊರತು ಹೊಸದೇನನ್ನೂ ಹೇಳಲಿಲ್ಲ’ ಎಂದು ವರದಿಗಾರರೊಡನೆ ಮಾತನಾಡುತ್ತಾ ಶ್ರೀ ಪಾಟೀಲರು ತಿಳಿಸಿದರು.
ಮಳೆಯಲ್ಲಿ ಮುಕ್ತಾಯ
ಬೆಂಗಳೂರು, ಜುಲೈ 20– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಮೂರು ದಿವಸಗಳ ರಾಜ್ಯ ಪ್ರವಾಸದ ಕೊನೆಯ ಕಾರ್ಯಕ್ರಮವಾದ ಕಂಠೀರವ ಸ್ಟೇಡಿಯಂನ ಬಹಿರಂಗ ಸಭೆಯು ಇಂದು ಸಂಜೆ ಮಳೆಯಲ್ಲಿ ತೊಯ್ದು ಬರೇ ಐದು ನಿಮಿಷಗಳಲ್ಲಿ ಮುಕ್ತಾಯಗೊಂಡಿತು.