ಇಲ್ಲಿನ ಗಲಭೆ ಪರಿಸ್ಥಿತಿಯ ಬಗ್ಗೆ ಈಗ ಸೇನೆಯೇ ವ್ಯವಹರಿಸುವುದು. ಪೊಲೀಸರು ಸೇನೆ ಇತ್ತ ನಿರ್ದೇಶನದಂತೆ ಕಾರ್ಯ ನಿರ್ವಹಿಸುವರು. ಹೊಸ ವ್ಯವಸ್ಥೆಯ ಪ್ರಕಾರ ಸೈನಿಕರು ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸಜ್ಜಾಗಿ ನಿಂತರು. ಪರಿಸ್ಥಿತಿ ಹೆಚ್ಚು ಪಾಲು ಶಾಂತವಾಗಿಯೇ ಇದೆ. ತೀವ್ರವಾದ ಘಟನೆಗಳಾವುದೂ ನಡೆದಿಲ್ಲ ಎಂದು ಉನ್ನತ ಸೈನಿಕಾಧಿಕಾರಿ ತಿಳಿಸಿದ್ದಾರೆ.