<p><strong>ಯಾರ ಪ್ರಿಯತಮೆ ಕಾವೇರಿ?</strong></p>.<p><strong>ಬೆಂಗಳೂರು, ಜ. 16–</strong> ‘ಕಾವೇರಿ’ ಯಾರ ಪ್ರಿಯತಮೆ ಹೆಸರು?</p>.<p>ನವದೆಹಲಿಯಲ್ಲಿರುವ ರಾಜ್ಯದ ‘ಕಾವೇರಿ ಎಂಪೋರಿಯಂ’ನ ಹೆಸರಿನ ಔಚಿತ್ಯವನ್ನು ಶ್ರೀ ಎಸ್.ಎಸ್. ಅರಕೇರಿ (ಆರ್.ಪಿ.ಐ) ಇಂದು ವಿಧಾನಭೆಯಲ್ಲಿ ಪ್ರಶ್ನಿಸಿದರು.</p>.<p>ಕೈಗಾರಿಕಾ ಉಪ ಸಚಿವ ಶ್ರೀ ಕೆ.ಪಿ. ಅಪ್ಪಣ್ಣ ಅವರಿಂದ ಅದಕ್ಕೆ ಬಂದ ಉತ್ತರ: ಕರ್ನಾಟಕದಲ್ಲಿ ಹುಟ್ಟಿ ಅನೇಕರಿಗೆ ಪ್ರಯೋಜನ ಆಗಿರುವ ಕಾವೇರಿಯು ನದಿ ಹೆಸರು, ಯಾರ ಪ್ರಿಯತಮೆ ಹೆಸರೂ ಅಲ್ಲ.</p>.<p><strong>ಪ್ರ: </strong>ಆಗಸ್ಟ್ ತಿಂಗಳಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಒಬ್ಬರೂ ಕನ್ನಡ ಮಾತಾಡಲಿಲ್ಲ. ಕನ್ನಡ ನೌಕರರು ಇಲ್ಲವೇ?</p>.<p><strong>ಉ: </strong>ಎಂಟು ನೌಕರರಲ್ಲಿ ಒಬ್ಬರು ಕನ್ನಡ ಬಲ್ಲವರಿದ್ದಾರೆ. ನೀವು ಅಲ್ಲಿಗೆ ಭೇಟಿ ನೀಡಿದಾಗ ಅವರು ಕನ್ನಡದಲ್ಲಿ ಮಾತಾಡಲಿಲ್ಲ ಅಂತ ಕಾಣುತ್ತೆ.</p>.<p><strong>ಪೊರಕೆ ಹರಾಜ್</strong></p>.<p><strong>ಅಲಹಾಬಾದ್, ಜ. 16–</strong> ಜಾಡಮಾಲಿಯೊಬ್ಬಳ ಪೊರಕೆಯನ್ನು ಮುಂದಿನ ವಾರ ನವದೆಹಲಿಯಲ್ಲಿ ಹರಾಜು ಹಾಕಲಾಗುವುದು.</p>.<p>ಮಹಾತ್ಮ ಗಾಂಧಿ ಹತ್ಯೆಯಾದ ಸ್ಥಳ ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಲು ಬಿರ್ಲಾಗಳಿಗೆ ಪರಿಹಾರದ ಪ್ರಥಮ ಕಂತು ಪಾವತಿ ಮಾಡಲು ಈ ಹಣ ಎತ್ತಲಾಗುವುದು.</p>.<p>ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಬಗ್ಗೆ ಇತ್ತೀಚೆಗೆ ಉಪವಾಸ ಮುಷ್ಕರ ಹೂಡಿದ್ದ ಸಂಸತ್ ಸದಸ್ಯ ಶಶಿಭೂಷಣ್ ಈ ವಿಷಯವನ್ನುಯು.ಎನ್.ಐ.ಗೆ ಇಂದು ತಿಳಿಸಿದರು.</p>.<p>ಬಿರ್ಲಾಗಳಿಗೆ ನೀಡಬೇಕಾದ ಪರಿಹಾರದ ಇಡೀ ಮೊತ್ತವನ್ನು ಮಹಾತ್ಮ ಗಾಂಧಿಯವರ ಪ್ರೀತಿಪಾತ್ರರಾದ ಹರಿಜನರಿಂದಲೇ ಎತ್ತಲಾಗುವುದೆಂದು ಅವರು ಹೇಳಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಯಾರ ಪ್ರಿಯತಮೆ ಕಾವೇರಿ?</strong></p>.<p><strong>ಬೆಂಗಳೂರು, ಜ. 16–</strong> ‘ಕಾವೇರಿ’ ಯಾರ ಪ್ರಿಯತಮೆ ಹೆಸರು?</p>.<p>ನವದೆಹಲಿಯಲ್ಲಿರುವ ರಾಜ್ಯದ ‘ಕಾವೇರಿ ಎಂಪೋರಿಯಂ’ನ ಹೆಸರಿನ ಔಚಿತ್ಯವನ್ನು ಶ್ರೀ ಎಸ್.ಎಸ್. ಅರಕೇರಿ (ಆರ್.ಪಿ.ಐ) ಇಂದು ವಿಧಾನಭೆಯಲ್ಲಿ ಪ್ರಶ್ನಿಸಿದರು.</p>.<p>ಕೈಗಾರಿಕಾ ಉಪ ಸಚಿವ ಶ್ರೀ ಕೆ.ಪಿ. ಅಪ್ಪಣ್ಣ ಅವರಿಂದ ಅದಕ್ಕೆ ಬಂದ ಉತ್ತರ: ಕರ್ನಾಟಕದಲ್ಲಿ ಹುಟ್ಟಿ ಅನೇಕರಿಗೆ ಪ್ರಯೋಜನ ಆಗಿರುವ ಕಾವೇರಿಯು ನದಿ ಹೆಸರು, ಯಾರ ಪ್ರಿಯತಮೆ ಹೆಸರೂ ಅಲ್ಲ.</p>.<p><strong>ಪ್ರ: </strong>ಆಗಸ್ಟ್ ತಿಂಗಳಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಒಬ್ಬರೂ ಕನ್ನಡ ಮಾತಾಡಲಿಲ್ಲ. ಕನ್ನಡ ನೌಕರರು ಇಲ್ಲವೇ?</p>.<p><strong>ಉ: </strong>ಎಂಟು ನೌಕರರಲ್ಲಿ ಒಬ್ಬರು ಕನ್ನಡ ಬಲ್ಲವರಿದ್ದಾರೆ. ನೀವು ಅಲ್ಲಿಗೆ ಭೇಟಿ ನೀಡಿದಾಗ ಅವರು ಕನ್ನಡದಲ್ಲಿ ಮಾತಾಡಲಿಲ್ಲ ಅಂತ ಕಾಣುತ್ತೆ.</p>.<p><strong>ಪೊರಕೆ ಹರಾಜ್</strong></p>.<p><strong>ಅಲಹಾಬಾದ್, ಜ. 16–</strong> ಜಾಡಮಾಲಿಯೊಬ್ಬಳ ಪೊರಕೆಯನ್ನು ಮುಂದಿನ ವಾರ ನವದೆಹಲಿಯಲ್ಲಿ ಹರಾಜು ಹಾಕಲಾಗುವುದು.</p>.<p>ಮಹಾತ್ಮ ಗಾಂಧಿ ಹತ್ಯೆಯಾದ ಸ್ಥಳ ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಲು ಬಿರ್ಲಾಗಳಿಗೆ ಪರಿಹಾರದ ಪ್ರಥಮ ಕಂತು ಪಾವತಿ ಮಾಡಲು ಈ ಹಣ ಎತ್ತಲಾಗುವುದು.</p>.<p>ಬಿರ್ಲಾ ಭವನವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಬಗ್ಗೆ ಇತ್ತೀಚೆಗೆ ಉಪವಾಸ ಮುಷ್ಕರ ಹೂಡಿದ್ದ ಸಂಸತ್ ಸದಸ್ಯ ಶಶಿಭೂಷಣ್ ಈ ವಿಷಯವನ್ನುಯು.ಎನ್.ಐ.ಗೆ ಇಂದು ತಿಳಿಸಿದರು.</p>.<p>ಬಿರ್ಲಾಗಳಿಗೆ ನೀಡಬೇಕಾದ ಪರಿಹಾರದ ಇಡೀ ಮೊತ್ತವನ್ನು ಮಹಾತ್ಮ ಗಾಂಧಿಯವರ ಪ್ರೀತಿಪಾತ್ರರಾದ ಹರಿಜನರಿಂದಲೇ ಎತ್ತಲಾಗುವುದೆಂದು ಅವರು ಹೇಳಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>