ರಾವಲ್ಪಿಂಡಿ, ಏ. 10– ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ಯರ್ಥವಾಗದೆಉಳಿದಿರುವ ಕಾಶ್ಮೀರ ಸೇರಿದಂತೆ ಎಲ್ಲ ವಿವಾದಗಳ ಶಾಂತಿಯುತ ಹಾಗೂ ಗೌರವಯುತ ಪರಿಹಾರಕ್ಕೆ ತಮ್ಮ ಸರಕಾರ ಆದ್ಯ ಮಹತ್ವ ನೀಡುವುದೆಂದು ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಅವರು ಇಂದು ಹೇಳಿದರು.ಈಪ್ರದೇಶದಲ್ಲಿ ಶಾಂತಿ ನೆಲಸಬೇಕೆಂಬ ಕಾತರ ತಮಗಿದೆಯೆಂದು ಅವರು ನುಡಿದರು.