ನವದೆಹಲಿ, ಜೂನ್ 24– ಜನತಾದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪರಿಹಾರಕ್ಕೆ ಪಕ್ಷದ ಹಿರಿಯ ನಾಯಕರಾದ ಮಧು ದಂಡವತೆ, ಬಾಪು ಕಲ್ದಾತೆ, ಜೈಪಾಲ ರೆಡ್ಡಿ ಹಾಗೂ ಪಿ.ಎಲ್. ಕೌಶಿಕ್ ಅವರು ಸಂಧಾನದ ಯತ್ನ ನಡೆಸಿದ್ದಾರೆ. ದಳದ 14 ಮಂದಿ ಸಂಸತ್ ಸದಸ್ಯರು ತಮಗೆ ಲೋಕಸಭೆಯಲ್ಲಿ ಪ್ರತ್ಯೇಕ ಸ್ಥಾನಗಳನ್ನು ನೀಡಬೇಕೆಂದು ಸ್ಪೀಕರ್ ಶಿವರಾಜ್ ಪಾಟೀಲ್ ಅವರಿಗೆ ಸಲ್ಲಿಸಿರುವ ಮನವಿಯನ್ನು ವಾಪಸ್ ಪಡೆದುಕೊಳ್ಳ
ಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.