ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 25–6–1969

Last Updated 24 ಜೂನ್ 2019, 19:45 IST
ಅಕ್ಷರ ಗಾತ್ರ

ದಳ ಬಿಕ್ಕಟ್ಟು: ಹಿರಿಯ ನಾಯಕರ ಸಂಧಾನ ಯತ್ನ

ನವದೆಹಲಿ, ಜೂನ್ 24– ಜನತಾದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪರಿಹಾರಕ್ಕೆ ಪಕ್ಷದ ಹಿರಿಯ ನಾಯಕರಾದ ಮಧು ದಂಡವತೆ, ಬಾಪು ಕಲ್ದಾತೆ, ಜೈಪಾಲ ರೆಡ್ಡಿ ಹಾಗೂ ಪಿ.ಎಲ್. ಕೌಶಿಕ್ ಅವರು ಸಂಧಾನದ ಯತ್ನ ನಡೆಸಿದ್ದಾರೆ. ದಳದ 14 ಮಂದಿ ಸಂಸತ್ ಸದಸ್ಯರು ತಮಗೆ ಲೋಕಸಭೆಯಲ್ಲಿ ಪ್ರತ್ಯೇಕ ಸ್ಥಾನಗಳನ್ನು ನೀಡಬೇಕೆಂದು ಸ್ಪೀಕರ್ ಶಿವರಾಜ್ ಪಾಟೀಲ್ ಅವರಿಗೆ ಸಲ್ಲಿಸಿರುವ ಮನವಿಯನ್ನು ವಾಪಸ್ ಪಡೆದುಕೊಳ್ಳ
ಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.

ದಿಗ್ಗಜರ ಮಧ್ಯೆ ಪು.ತಿ.ನ.ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ

ಬೆಂಗಳೂರು, ಜೂನ್ 24– ಆಧುನಿಕ ಕನ್ನಡ ಸಾಹಿತ್ಯದ, ಅದರಲ್ಲೂ ನವೋದಯ ಕಾವ್ಯದ ಪ್ರಮುಖ ಸಾಧಕರಲ್ಲಿ ಒಬ್ಬರಾದ ಡಾ. ಪು.ತಿ. ನರಸಿಂಹಾಚಾರ್ ಅವರಿಗೆ ಇಂದು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅತ್ಯುನ್ನತ ಗೌರವವಾದ ‘ಫೆಲೋಷಿಪ್’ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT