ಲಖನೌ, ಸೆ. 10– ಆಡಳಿತ ಕಾಂಗ್ರೆಸ್ಗೆ ಪಕ್ಷಾಂತರಗೊಳ್ಳುವುದಾದರೆ ಸಚಿವ ಪದವಿಗಳನ್ನು ಕೊಡಿಸುವುದಾಗಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಬಹುಗುಣ ಅವರು ತಮಗೆ ಮತ್ತು ತಮ್ಮ ಸಹೋದ್ಯೋಗಿ ಶ್ರೀ ಓಂ ಪ್ರಕಾಶ್ ಸಿಂಗ್ ಅವರಿಗೆ ಆಸೆ ತೋರಿಸಿದುದಾಗಿ ಉತ್ತರ ಪ್ರದೇಶದ ಉಪಸಚಿವ ಶ್ರೀ ರಾಂ ಪ್ರಸಾದ್ ದೇಶಮುಖ್ ಅವರು ಇಂದು ಇಲ್ಲಿ ಹೇಳಿದರು.