ಈ ಕೈಗಾರಿಕೆ ಸ್ಥಾಪಿಸಲು ಮೂರು ಅರ್ಜಿಗಳು ರಾಜ್ಯ ಸರ್ಕಾರದ ಮುಂದಿದ್ದು, ಅವುಗಳಲ್ಲಿ ಒಂದನ್ನು ಆರಿಸಲಾಗುವುದು ಎಂದು ಕೈಗಾರಿಕೆಗಳ ಉಪಸಚಿವ ಶ್ರೀ.ಎ.ಪಿ. ಅಪ್ಪಣ್ಣನವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದರು. ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿರುವ ಕೆಲ ದೇಶಗಳು ಅದಿರು ತಮಗೆ ಗಟ್ಟಿ ರೂಪದಲ್ಲಿ ಬೇಕೆಂದು ಕೇಳುತ್ತಿರುವುದರಿಂದ, ಪುಡಿ ಅದಿರು ವ್ಯರ್ಥವಾಗುತ್ತಿದೆ. ಪುಡಿ ಮತ್ತು ಗಟ್ಟಿ ಅದಿರು, ಎರಡನ್ನೂ ಉಪಯೋಗಿಸಿ ಕಬ್ಬಿಣದ ಸಣ್ಣ ಉಂಡೆಗಳನ್ನು ತಯಾರಿಸಿದರೆ, ಪುಡಿಯ ಉಪಯೋಗವೂ ಆಗಿ ಅದಿರಿನ ಗಿರಾಕಿಗಳ ಅಗತ್ಯವನ್ನೂ ಪೂರೈಸಿ ತಯಾರಿಸಿದಂತಾಗುವುದು ಎಂದರು.