ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ವಸ್ತಾರಿ ಗ್ರಾಮದಲ್ಲಿ ಜನವರಿ 22ರಂದು ನಸುಕಿನ ಜಾವದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಶರಣಪ್ಪನ ಹಿರಿಯ ಸಹೋದರ ಚಂದ್ರಕಾಂತ ಮತ್ತು ಆತನ ಸ್ನೇಹಿತ ರವಿ ಐರಸಂಗ್ ಬಂಧಿತರು. ಆಸ್ತಿಗಾಗಿ ಅಣ್ಣನೇ ಸ್ನೇಹಿತನ ಜತೆಗೆ ಸೇರಿ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನೆಲೋಗಿ ಮತ್ತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.