ಆರನೇ ಯತ್ನದಲ್ಲಿ ಯಶಸ್ಸು ಕಂಡಿರುವ ಶ್ರುತಿ ಯರಗಟ್ಟಿ ಬೆಳಗಾವಿ ಜಿಲ್ಲೆಯ ತಲ್ಲೂರ ಗ್ರಾಮದವರು. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯ 2022ನೇ ಸಾಲಿನಲ್ಲಿ 362ನೇ ರ್ಯಾಂಕ್ ಪಡೆದಿರುವ ಅವರು, ತಪ್ಪು ತಿದ್ದಿಕೊಂಡು ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಹೇಳುತ್ತಾರೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅನುಭವಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.