ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ಪ್ರೌಢಶಾಲಾ ವಿದ್ಯಾರ್ಥಿಗಳ ಪುಂಡಾಟಿಕೆಯನ್ನು ಆಧಾರವಾಗಿಟ್ಟುಕೊಂಡು ಎರಡು ಲೇಖನಗಳನ್ನು ಬರೆಯಲಾಗಿದೆ (ಸಂಗತ, ಡಿ. 24 ಮತ್ತು 25). ವಿದ್ಯಾರ್ಥಿಗಳ ಇಂತಹ ವರ್ತನೆಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು, ವಿದ್ಯಾರ್ಥಿಗಳು ತಮ್ಮ ಬಗ್ಗೆ ಭಯ-ಭಕ್ತಿಯಿಂದ ಇರಬೇಕು ಎಂದು ಶಿಕ್ಷಕರು ಬಯಸುವುದು. ಆದರೆ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯ ಇರಬಾರದು, ಗೌರವ ಇರಬೇಕು. ಇದು ತೋರಿಕೆಯ ಗೌರವವಾಗಬಾರದು. ಈ ರೀತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಭಾವಿಸಬೇಕು. ಆದರೆ ನಡೆ-ನುಡಿ ಒಂದಾಗಿಲ್ಲದ ಶಿಕ್ಷಕ ಎಷ್ಟೇ ನೀತಿ, ಮೌಲ್ಯಗಳನ್ನು ಹೇಳಿದರೂ ವಿದ್ಯಾರ್ಥಿಗಳು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.