<p>ಒಮ್ಮೆ ಒಬ್ಬ ರೈತನಿಗೆ ತನ್ನ ಪಕ್ಕದ ಹೊಲದ ಗೆಳೆಯನೊಂದಿಗೆ ಯಾವುದೋ ಮಾತಿಗೆ ಜಗಳವಾಗುತ್ತದೆ. ಕೋಪದಲ್ಲಿ ಆತ ಬಾಯಿಗೆ ಬಂದದ್ದೆಲ್ಲ ಬಯ್ಯುತ್ತಾನೆ. ಸಿಟ್ಟು ಇಳಿದ ಬಳಿಕ ರೈತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗೆಳೆಯನಿಗೆ ಏನೆಲ್ಲಾ ಬೈದುಬಿಟ್ಟೆನಲ್ಲಾ ಎಂದು ತಾನೇ ನೊಂದುಕೊಳ್ಳುತ್ತಾನೆ. ಸಮಾಧಾನ ಅರಸಿಕೊಂಡು ಒಬ್ಬ ಸಂತರಲ್ಲಿಗೆ ಹೋಗುತ್ತಾನೆ. ‘ನಾನು ಆಡಿದ ಕೆಟ್ಟ ಮಾತುಗಳನ್ನು ಹಿಂತೆಗೆದುಕೊಳ್ಳುವ ಉಪಾಯವಿದ್ದರೆ ಸೂಚಿಸಿ’ ಎಂದು ಸಂತರಲ್ಲಿ ಕೇಳಿಕೊಳ್ಳುತ್ತಾನೆ.</p>.<p>ಆಗ ಸಂತರು ರೈತನಿಗೆ , ‘ಒಂದು ಕೆಲಸ ಮಾಡು. ಹಕ್ಕಿಗಳ ಬಹಳಷ್ಟು ಗರಿಗಳನ್ನು ಸಂಗ್ರಹಿಸು, ನಂತರ ಅವುಗಳನ್ನು ನಗರದ ಮಧ್ಯಭಾಗದಲ್ಲಿ ಇಟ್ಟು ಬಾ’ ಎಂದರು. ರೈತ ಹಾಗೆಯೇ ಮಾಡಿ ಬರುತ್ತಾನೆ.</p>.<p>ಈಗ ಸಂತರು, ‘ಸರಿ ಈಗ ಪುನಃ ಆ ಜಾಗಕ್ಕೆ ಹೋಗಿ ಎಲ್ಲಾ ಗರಿಗಳನ್ನು ಸಂಗ್ರಹಿಸಿಕೊಂಡು ಇಲ್ಲಿಗೆ ತಾ’ ಎನ್ನುತ್ತಾರೆ</p>.<p>ರೈತ ಗರಿಗಳನ್ನು ಇಟ್ಟ ಜಾಗವನ್ನು ತಲುಪುವ ಹೊತ್ತಿಗೆ ಆ ಎಲ್ಲಾ ಗರಿಗಳು ಎಲ್ಲೆಲ್ಲೋ ಹಾರಿಹೋಗಿದ್ದವು. ರೈತ ದುಃಖಿತನಾಗಿ ಸಂತರಲ್ಲಿಗೆ ಖಾಲಿ ಕೈಯಲ್ಲಿ ಮರಳುತ್ತಾನೆ. ಆಗ ಸಂತರು ರೈತನಿಗೆ, ‘ನೋಡಿದೆಯಾ, ಗರಿಗಳು ಹೇಗೆ ಎಲ್ಲಾ ಕಡೆ ಚದುರಿಹೋದವೋ ಹಾಗೆಯೇ ನಾವು ಆಡುವ ಮಾತುಗಳೂ... ಒಮ್ಮೆ ನಮ್ಮ ಬಾಯಿಂದ ಹೊರಬಿದ್ದರೆ ಅವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದು. ನೀನೆಷ್ಟೇ ಬಯಸಿದರೂ ಆಡಿದ ಮಾತು ನಿನ್ನ ಬಳಿ ಮರಳುವುದಿಲ್ಲ. ಅದನ್ನೇ ಹಿರಿಯರು ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂದಿರುವುದು. ಇದನ್ನೇ ಬಸವಣ್ಣ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದಿರುವರು’ ಎಂದು ವಿವರಿಸಿದರು.</p>.<p>ಸಾರ್ವಜನಿಕ ಸ್ಥಳಗಳಲ್ಲಿ, ನೆರೆಹೊರೆಯಲ್ಲಿ ಅಥವಾ ನಮ್ಮ ನಮ್ಮ ಕುಟುಂಬಗಳಲ್ಲಿಯೇ ಕೆಲವರು ಬಹಳ ಒರಟಾಗಿ ಮಾತಾಡುವುದನ್ನು, ವೃಥಾ ಸಿಟ್ಟುಗೊಳ್ಳುವುದನ್ನು, ಸರಿತಪ್ಪು ಯೋಚಿಸದೇ ಬಾಯಿಗೆ ಬಂದದ್ದನ್ನು ಆಡಿಬಿಡುತ್ತಾರೆ. ತಮ್ಮ ತಪ್ಪಿನ ಅರಿವಾದ ನಂತರ ಒಳಗೊಳಗೇ ಒದ್ದಾಡುತ್ತಾರೆ. ತಮ್ಮ ನಡೆಯಿಂದ ತಾವು ನಾಚಿಗೆಪಟ್ಟುಕೊಳ್ಳುತ್ತಾರೆ. ಆದರೆ ತಾವೇ ಸರಿ, ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವ ವಿತಂಡವಾದಿಗಳಿಗೆ ತಮ್ಮ ತಪ್ಪು ಯಾವತ್ತೂ ಕಾಣಿಸುವುದಿಲ್ಲ.</p>.<p>ಇನ್ನೊಬ್ಬರನ್ನು ಕಹಿನುಡಿಗಳಿಂದ ಚುಚ್ಚಿ ಗಾಸಿಗೊಳಿಸಿದಾಗ ಅದು ನಮ್ಮನ್ನೇ ಇರಿಯತೊಡಗುತ್ತದೆ. ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ನಿಶ್ಚಿಂತೆಯಿಂದ ನಿದ್ದೆ ಮಾಡಲಾರಿರಿ. ಅದಕ್ಕೆ ನುಡಿಯುವ ಮಾತುಗಳು ಮುತ್ತಿನ ಹಾರದಂತೆ ಅಂದವಾಗಿರಬೇಕು, ತರ್ಕಬದ್ಧವಾಗಿರಬೇಕು. ಮಾತಿನಲ್ಲಿ ಸತ್ಯ, ಅನುನಯ, ಅನುಭವದ ಬೆಳಕು ಇರಬೇಕು ಎನ್ನುತ್ತಾರೆ ಬಸವಣ್ಣ. ನಮ್ಮ ಕಚೇರಿಯಲ್ಲಿ ವಯಸ್ಸಾದ ಹಿರಿಯರಿದ್ದರು. ಅವರ ಪ್ರಶ್ನೆಗೆ ತಿರುಗಿ ಉತ್ತರ ಕೊಟ್ಟರೆ, ಅವರಿಗದು ಉದ್ಧಟತನ, ತಿರುಗಿ ಉತ್ತರ ಕೊಡ್ತಿದೀವಿ ಎನಿಸಿ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ನಂತರ ತಾವೇ ಕರೆದು ಸಮಜಾಯಿಷಿ ಕೊಡಲಾರಂಭಿಸುತ್ತಿದ್ದರು. ಅವರ ಹಿರಿತನಕ್ಕೆ ಗೌರವ ಕೊಟ್ಟು ಯಾರೂ ವಾದಕ್ಕಿಳಿಯುತ್ತಿರಲಿಲ್ಲ.</p>.<p>ಮಾತು ಅಮೂಲ್ಯವಾದದ್ದು, ಅದನರಿತವನೇ ಮಾತನಾಡುತ್ತಾನೆ;</p>.<p>ಹೃದಯದ ತಕ್ಕಡಿಯಲ್ಲಿ ತೂಗಿ ಅಳೆದ ಬಳಿಕವೇ ಬಾಯಿಂದ ಹೊರತರುತ್ತಾನೆ”</p>.<p>ಎಂಬ ಕಬೀರರ ದೋಹೆಯೂ ನಾವಾಡುವ ಮಾತಿನ ಕುರಿತದ್ದೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಮ್ಮೆ ಒಬ್ಬ ರೈತನಿಗೆ ತನ್ನ ಪಕ್ಕದ ಹೊಲದ ಗೆಳೆಯನೊಂದಿಗೆ ಯಾವುದೋ ಮಾತಿಗೆ ಜಗಳವಾಗುತ್ತದೆ. ಕೋಪದಲ್ಲಿ ಆತ ಬಾಯಿಗೆ ಬಂದದ್ದೆಲ್ಲ ಬಯ್ಯುತ್ತಾನೆ. ಸಿಟ್ಟು ಇಳಿದ ಬಳಿಕ ರೈತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗೆಳೆಯನಿಗೆ ಏನೆಲ್ಲಾ ಬೈದುಬಿಟ್ಟೆನಲ್ಲಾ ಎಂದು ತಾನೇ ನೊಂದುಕೊಳ್ಳುತ್ತಾನೆ. ಸಮಾಧಾನ ಅರಸಿಕೊಂಡು ಒಬ್ಬ ಸಂತರಲ್ಲಿಗೆ ಹೋಗುತ್ತಾನೆ. ‘ನಾನು ಆಡಿದ ಕೆಟ್ಟ ಮಾತುಗಳನ್ನು ಹಿಂತೆಗೆದುಕೊಳ್ಳುವ ಉಪಾಯವಿದ್ದರೆ ಸೂಚಿಸಿ’ ಎಂದು ಸಂತರಲ್ಲಿ ಕೇಳಿಕೊಳ್ಳುತ್ತಾನೆ.</p>.<p>ಆಗ ಸಂತರು ರೈತನಿಗೆ , ‘ಒಂದು ಕೆಲಸ ಮಾಡು. ಹಕ್ಕಿಗಳ ಬಹಳಷ್ಟು ಗರಿಗಳನ್ನು ಸಂಗ್ರಹಿಸು, ನಂತರ ಅವುಗಳನ್ನು ನಗರದ ಮಧ್ಯಭಾಗದಲ್ಲಿ ಇಟ್ಟು ಬಾ’ ಎಂದರು. ರೈತ ಹಾಗೆಯೇ ಮಾಡಿ ಬರುತ್ತಾನೆ.</p>.<p>ಈಗ ಸಂತರು, ‘ಸರಿ ಈಗ ಪುನಃ ಆ ಜಾಗಕ್ಕೆ ಹೋಗಿ ಎಲ್ಲಾ ಗರಿಗಳನ್ನು ಸಂಗ್ರಹಿಸಿಕೊಂಡು ಇಲ್ಲಿಗೆ ತಾ’ ಎನ್ನುತ್ತಾರೆ</p>.<p>ರೈತ ಗರಿಗಳನ್ನು ಇಟ್ಟ ಜಾಗವನ್ನು ತಲುಪುವ ಹೊತ್ತಿಗೆ ಆ ಎಲ್ಲಾ ಗರಿಗಳು ಎಲ್ಲೆಲ್ಲೋ ಹಾರಿಹೋಗಿದ್ದವು. ರೈತ ದುಃಖಿತನಾಗಿ ಸಂತರಲ್ಲಿಗೆ ಖಾಲಿ ಕೈಯಲ್ಲಿ ಮರಳುತ್ತಾನೆ. ಆಗ ಸಂತರು ರೈತನಿಗೆ, ‘ನೋಡಿದೆಯಾ, ಗರಿಗಳು ಹೇಗೆ ಎಲ್ಲಾ ಕಡೆ ಚದುರಿಹೋದವೋ ಹಾಗೆಯೇ ನಾವು ಆಡುವ ಮಾತುಗಳೂ... ಒಮ್ಮೆ ನಮ್ಮ ಬಾಯಿಂದ ಹೊರಬಿದ್ದರೆ ಅವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದು. ನೀನೆಷ್ಟೇ ಬಯಸಿದರೂ ಆಡಿದ ಮಾತು ನಿನ್ನ ಬಳಿ ಮರಳುವುದಿಲ್ಲ. ಅದನ್ನೇ ಹಿರಿಯರು ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂದಿರುವುದು. ಇದನ್ನೇ ಬಸವಣ್ಣ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದಿರುವರು’ ಎಂದು ವಿವರಿಸಿದರು.</p>.<p>ಸಾರ್ವಜನಿಕ ಸ್ಥಳಗಳಲ್ಲಿ, ನೆರೆಹೊರೆಯಲ್ಲಿ ಅಥವಾ ನಮ್ಮ ನಮ್ಮ ಕುಟುಂಬಗಳಲ್ಲಿಯೇ ಕೆಲವರು ಬಹಳ ಒರಟಾಗಿ ಮಾತಾಡುವುದನ್ನು, ವೃಥಾ ಸಿಟ್ಟುಗೊಳ್ಳುವುದನ್ನು, ಸರಿತಪ್ಪು ಯೋಚಿಸದೇ ಬಾಯಿಗೆ ಬಂದದ್ದನ್ನು ಆಡಿಬಿಡುತ್ತಾರೆ. ತಮ್ಮ ತಪ್ಪಿನ ಅರಿವಾದ ನಂತರ ಒಳಗೊಳಗೇ ಒದ್ದಾಡುತ್ತಾರೆ. ತಮ್ಮ ನಡೆಯಿಂದ ತಾವು ನಾಚಿಗೆಪಟ್ಟುಕೊಳ್ಳುತ್ತಾರೆ. ಆದರೆ ತಾವೇ ಸರಿ, ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವ ವಿತಂಡವಾದಿಗಳಿಗೆ ತಮ್ಮ ತಪ್ಪು ಯಾವತ್ತೂ ಕಾಣಿಸುವುದಿಲ್ಲ.</p>.<p>ಇನ್ನೊಬ್ಬರನ್ನು ಕಹಿನುಡಿಗಳಿಂದ ಚುಚ್ಚಿ ಗಾಸಿಗೊಳಿಸಿದಾಗ ಅದು ನಮ್ಮನ್ನೇ ಇರಿಯತೊಡಗುತ್ತದೆ. ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ನಿಶ್ಚಿಂತೆಯಿಂದ ನಿದ್ದೆ ಮಾಡಲಾರಿರಿ. ಅದಕ್ಕೆ ನುಡಿಯುವ ಮಾತುಗಳು ಮುತ್ತಿನ ಹಾರದಂತೆ ಅಂದವಾಗಿರಬೇಕು, ತರ್ಕಬದ್ಧವಾಗಿರಬೇಕು. ಮಾತಿನಲ್ಲಿ ಸತ್ಯ, ಅನುನಯ, ಅನುಭವದ ಬೆಳಕು ಇರಬೇಕು ಎನ್ನುತ್ತಾರೆ ಬಸವಣ್ಣ. ನಮ್ಮ ಕಚೇರಿಯಲ್ಲಿ ವಯಸ್ಸಾದ ಹಿರಿಯರಿದ್ದರು. ಅವರ ಪ್ರಶ್ನೆಗೆ ತಿರುಗಿ ಉತ್ತರ ಕೊಟ್ಟರೆ, ಅವರಿಗದು ಉದ್ಧಟತನ, ತಿರುಗಿ ಉತ್ತರ ಕೊಡ್ತಿದೀವಿ ಎನಿಸಿ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು. ನಂತರ ತಾವೇ ಕರೆದು ಸಮಜಾಯಿಷಿ ಕೊಡಲಾರಂಭಿಸುತ್ತಿದ್ದರು. ಅವರ ಹಿರಿತನಕ್ಕೆ ಗೌರವ ಕೊಟ್ಟು ಯಾರೂ ವಾದಕ್ಕಿಳಿಯುತ್ತಿರಲಿಲ್ಲ.</p>.<p>ಮಾತು ಅಮೂಲ್ಯವಾದದ್ದು, ಅದನರಿತವನೇ ಮಾತನಾಡುತ್ತಾನೆ;</p>.<p>ಹೃದಯದ ತಕ್ಕಡಿಯಲ್ಲಿ ತೂಗಿ ಅಳೆದ ಬಳಿಕವೇ ಬಾಯಿಂದ ಹೊರತರುತ್ತಾನೆ”</p>.<p>ಎಂಬ ಕಬೀರರ ದೋಹೆಯೂ ನಾವಾಡುವ ಮಾತಿನ ಕುರಿತದ್ದೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>