ಬಾದಾಮಿ ತಾಲ್ಲೂಕಿನ ನಂದಿಕೇಶ್ವರದ ಆಸರೆ ಕಾಲೊನಿಯಲ್ಲಿ 500 ಮನೆಗಳು ಹಾಳು ಬಿದ್ದಿದ್ದವು. ಈಗ ಮತ್ತೆ ಅವುಗಳನ್ನು ವಾಸಯೋಗ್ಯವಾಗಿಸಲು ಸಂತ್ರಸ್ತರೊಂದಿಗೆ ಜಿಲ್ಲಾಡಳಿತವೂ ಕೈ ಜೋಡಿಸಿದೆ. ಸುತ್ತಲೂ ಬೆಳೆದ ಜಾಲಿ ಕಂಟಿ ತೆಗೆಸಿ ತಾತ್ಕಾಲಿಕ ರಸ್ತೆ ಮಾಡಲು ಪಿಡಿಒಗೆ ಹೊಣೆ ವಹಿಸಲಾಗಿದೆ. ಬಾಗಿಲು– ಕಿಟಕಿ ಇಲ್ಲದ ಮನೆಗಳಿಗೆ ಬಟ್ಟೆಯ ಹೊದಿಕೆ ನೆರವಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಒದಗಿಸುವ ಕೆಲಸ ನಡೆದಿತ್ತು. ಓಣಿ ಹಾಗೂ ಕೇರಿಯ ಸಾಮಾಜಿಕ ಸಂರಚನೆಯೂ ಪಾಲನೆಯಾಗಿತ್ತು!