‘ಬೆಂಗಳೂರಿನ ಆರೇಳು ಪ್ರಮುಖ ಹೋಟೆಲ್ಗಳಿಗೆ ಹಲವು ವರ್ಷಗಳಿಂದ ತರಕಾರಿ ಪೂರೈಕೆ ಮಾಡುತ್ತಿದ್ದೆ. ಲಾಕ್ಡೌನ್ ಜಾರಿಯಾದರೂ ಹೋಟೆಲ್ಗಳಲ್ಲಿ ಸೇವೆ ಇರುತ್ತದೆ ಎಂದು ಕೇಳಿ ನಿರಾತಂಕವಾಗಿದ್ದೆ. ಆದರೆ, ತರಕಾರಿ ಖರೀದಿ ದಿಢೀರ್ ಕುಸಿಯಿತು. ತಿಂಗಳುಗಟ್ಟಲೆ ವ್ಯಾಪಾರವಿಲ್ಲದೆ, ಬೀದಿಗೆ ಬರುವ ಸ್ಥಿತಿ ತಲುಪಿದ್ದೆ’ ಎಂದು ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ರಮೇಶ್ ಸಂಕಟ ಹೊರಹಾಕಿದರು.