ನಾಲ್ಕನೇ ಯೋಜನೆ ಕರಡು: ಮುಖ್ಯಮಂತ್ರಿಗಳ ಬೇಡಿಕೆಗಳಲ್ಲಿ ‘ರಾಜಕೀಯ’ ದೃಷ್ಟಿ
ನವದೆಹಲಿ, ಏ. 21– ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಸಭೆಯಲ್ಲಿ ನಾಲ್ಕನೇ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು, ವಿಶೇಷತಃ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಮಂಡಿಸಿದ ಬೇಡಿಕೆಗಳು ‘ರಾಜಕೀಯ’ ದೃಷ್ಟಿಯಿಂದ ಕೂಡಿದುವು ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.