ತಮ್ಮ ಪದಚ್ಯುತಿಯೇ ಆರೋಪಗಳ ಉದ್ದೇಶ– ಎಸ್ಸೆನ್
ನವದೆಹಲಿ, ಅ. 13– ಸಕಾರಣವಲ್ಲದೆಯೇ ತಮ್ಮ ವಿರುದ್ಧ ಆಪಾದನೆ ಹೊರಿಸುವ ಯತ್ನಗಳನ್ನು ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಪ್ರತಿಭಟಿಸಿದರು. ಕಾಂಗ್ರೆಸ್ ಅಧ್ಯಕ್ಷತೆಯಿಂದ ತಮ್ಮನ್ನು ಪದಚ್ಯುತಗೊಳಿಸುವುದೇ ಈ ಎಲ್ಲಾ ಆಪಾದನೆ ಉದ್ದೇಶವಾಗಿರುವಂತೆ ಕಾಣಬರುತ್ತಿರುವುದಾಗಿಯೂ ಹೇಳಿದರು.