<p>ಸಾಮಾಜಿಕ ಪಿಡುಗುಗಳಲ್ಲೊಂದಾದ ವರದಕ್ಷಿಣೆ ಪದ್ಧತಿಯನ್ನು ಕೊನೆಗೊಳಿಸುವ ಕುರಿತು, ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ 17 ಲಂಬಾಣಿ (ಬಂಜಾರ) ತಾಂಡಾಗಳ ಹಿರಿಯರು ಇತ್ತೀಚೆಗೆ ಮಹತ್ವದ ಠರಾವು ಒಂದನ್ನು ಕೈಗೊಂಡಿದ್ದಾರೆ. ಆ ಠರಾವಿನ ಪ್ರಕಾರ, ಈ ತಾಂಡಾಗಳಲ್ಲಿ ಇನ್ನು ಮುಂದೆ ಯಾರೂ ವರದಕ್ಷಿಣೆ ಕೊಡುವಂತಿಲ್ಲ ಮತ್ತು ತೆಗೆದುಕೊಳ್ಳುವಂತಿಲ್ಲ. ವರದಕ್ಷಿಣೆ ತೆಗೆದುಕೊಂಡವರಿಗೆ ಸಮುದಾಯದಿಂದ ಬಹಿಷ್ಕಾರ!</p>.<p>ಬಹಿಷ್ಕಾರವನ್ನು ಹೊರತುಪಡಿಸಿದರೆ, ಲಂಬಾಣಿ ಸಮುದಾಯದ ಹಿರಿಯರು ತೆಗೆದುಕೊಂಡಿರುವ ಠರಾವು ಎಲ್ಲ ಸಮುದಾಯಗಳಿಗೂ ಮಾದರಿ ಆಗುವಂತಿದೆ. ವರದಕ್ಷಿಣೆ ಕಾರಣದಿಂದಾಗಿ ಹೆಣ್ಣು ಹೆತ್ತವರು ಶೋಷಣೆಗೆ ಒಳಗಾಗುತ್ತಿದ್ದು, ಬಡ ಸಮುದಾಯಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿವೆ. ವರದಕ್ಷಿಣೆಯನ್ನು ಹೊಂದಿಸುವುದಕ್ಕಾಗಿ ಆಸ್ತಿ ಮಾರಿರುವ ಪೋಷಕರಿದ್ದಾರೆ. ಮಗಳ ಮದುವೆಗಾಗಿ ಜೀತಕ್ಕೆ ಸಿಲುಕಿದವರೂ ಇದ್ದಾರೆ. ದುಬಾರಿ ಬಡ್ಡಿಗೆ ಸಾಲ ಮಾಡಿ, ಆ ಸಾಲವನ್ನು ತೀರಿಸಲಿಕ್ಕಾಗದೆ ಆತ್ಮಹತ್ಯೆ ಮೂಲಕ ಬದುಕು ಕೊನೆಗೊಳಿಸಿಕೊಂಡ ನತದೃಷ್ಟರೂ ಇದ್ದಾರೆ. ವರದಕ್ಷಿಣೆ ಅನೇಕ ಕುಟುಂಬಗಳನ್ನು ಬೀದಿಪಾಲಾಗಿಸಿದೆ. ಈ ಸಮಸ್ಯೆ ನಿರ್ದಿಷ್ಟ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಯಷ್ಟೇ ಆಗಿರದೆ, ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗೆ ಸಂಬಂಧಿಸಿದ ಬಿಕ್ಕಟ್ಟೂ ಆಗಿದೆ.</p>.<p>ವರದಕ್ಷಿಣೆ ಕಿರುಕುಳದಿಂದ ಸಂಭವಿಸಿರುವ ಘಟನೆಗಳು ನಾಗರಿಕಸಮಾಜವನ್ನು ಬೆಚ್ಚಿಬೀಳಿಸುವಂತ<br>ಹವು. ಇಪ್ಪತ್ತಾರು ವರ್ಷದ ನವ ವಿವಾಹಿತೆಯೊಬ್ಬರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡರು. ಮದುವೆ ಸಂದರ್ಭದಲ್ಲಿ ವರ ಹಾಗೂ ಆತನ ಕುಟುಂಬದವರ ಎಲ್ಲ ಬೇಡಿಕೆಗಳನ್ನು ಪೂರೈಸಿದರೂ, ಮದುವೆಯ ನಂತರ ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಆ ಹಿಂಸೆ ತಾಳಲಾಗದೆ ನತದೃಷ್ಟ ಮಹಿಳೆ ಆತ್ಮಹತ್ಯೆಗೆ ಶರಣಾದರು. ಬೈಕ್ ಹಾಗೂ ಆಭರಣಗಳ ಬೇಡಿಕೆ ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಹಣ ತಾರದ ಕಾರಣಕ್ಕಾಗಿ ಪತ್ನಿಯನ್ನು ಪತಿಯೇ ಜೀವಂತವಾಗಿ ಸುಟ್ಟ ಘಟನೆ ಗ್ರೇಟರ್ ನೋಯ್ಡಾದಿಂದ ವರದಿಆಗಿತ್ತು. ಆ ಅಮಾನುಷ ಘಟನೆ ಮಗು ಹಾಗೂ ಕುಟುಂಬದ<br>ಸಮ್ಮುಖದಲ್ಲೇ ನಡೆದಿದೆ. ಇವು ಉದಾಹರಣೆಗಳಷ್ಟೇ. ವರದಕ್ಷಿಣೆ ಕಾರಣಕ್ಕಾಗಿ ಪತ್ನಿಯನ್ನು ಪೀಡಿಸುವವರು ನಮ್ಮ ಸುತ್ತಮುತ್ತಲೇ ಸಾಕಷ್ಟು ಮಂದಿಯಿದ್ದಾರೆ.</p>.<p>ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ಮಾಹಿತಿಯ ಪ್ರಕಾರ 2023ರಲ್ಲಿ ಭಾರತದಲ್ಲಿ 15,489 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. 6,156 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಅಂದರೆ ದಿನಕ್ಕೆ 17ರಿಂದ 20 ಮಹಿಳೆಯರು ವರದಕ್ಷಿಣೆ ಸಂಬಂಧಿತ ಹಿಂಸೆ ಅಥವಾ ಕಿರುಕುಳದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.</p>.<p>ಕರ್ನಾಟಕದಲ್ಲಿ 2020ರಿಂದ 2025ರ ಅವಧಿಯಲ್ಲಿ 14,636 ವರದಕ್ಷಿಣೆ ಪ್ರಕರಣಗಳು ದಾಖಲಾ<br>ಗಿದ್ದು, 834 ಸಾವುಗಳು ಸಂಭವಿಸಿವೆ ಎಂದು ವರದಿಯೊಂದು ಹೇಳುತ್ತಿದೆ. ತಿಂಗಳಿಗೆ ಸರಾಸರಿ 13 ಮಹಿಳೆಯರು ಸಾವನ್ನಪ್ಪಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಇತ್ತೀಚೆಗೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಈ ಅಂಕಿಅಂಶಗಳು ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದವು. ಅನೇಕ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹೋಗುತ್ತವೆ.</p>.<p>ಭಾರತದಲ್ಲಿ 1961ರಲ್ಲಿಯೇ ವರದಕ್ಷಿಣೆ ಪದ್ಧತಿ ನಿಷೇಧಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷಗಳ ಶಿಕ್ಷೆ ಹಾಗೂ ಕನಿಷ್ಠ ₹15 ಸಾವಿರ ದಂಡ ವಿಧಿಸಬಹುದಾಗಿದೆ. ಮಹಿಳೆಯರ ಮೇಲಿನ ಶೋಷಣೆ ಮತ್ತು ಹಿಂಸೆ ತಡೆಯುವುದು ಹಾಗೂ ಸಮಾನತೆಯನ್ನು ಉತ್ತೇಜಿಸುವುದು, ಸಮಾಜದಲ್ಲಿ ಆರೋಗ್ಯಕರ ವಿವಾಹ ಪದ್ಧತಿಯನ್ನು ರೂಢಿಸುವುದಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಮದುವೆಯ ಸಮಯದಲ್ಲಿ ವರ ಅಥವಾ ವಧುವಿನ ಕುಟುಂಬದಿಂದ ಹಣ, ಆಸ್ತಿ, ಅಥವಾ ಯಾವುದೇ ಮೌಲ್ಯಯುತ ವಸ್ತುಗಳನ್ನು ನೀಡುವುದು, ಪಡೆಯುವುದು ಅಥವಾ ಕೇಳುವುದು ಕಾನೂನುಬಾಹಿರ. ಆದರೆ, ಈ ಕಾಯ್ದೆ ಹಾಳೆಯ ಮೇಲಷ್ಟೇ ಉಳಿದಿದೆ. ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾದರೂ, ಕಾನೂನಿನ ಭಯವಿಲ್ಲದೆ ಅನಿಷ್ಟ ಪದ್ಧತಿ ಮುಂದುವರಿದಿದೆ.</p>.<p>ವರದಕ್ಷಿಣೆಯ ಪರಿಣಾಮಗಳು ಸಾಮಾಜಿಕ ಚಲನೆಯನ್ನು ಹಿಮ್ಮುಖವಾಗಿಸುತ್ತವೆ. ಹೆಣ್ಣು ಭ್ರೂಣಹತ್ಯೆಗೆ ವರ<br>ದಕ್ಷಿಣೆಯೂ ಒಂದು ಕಾರಣವಾಗಿದೆ. ಕೆಲವು ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕಿಂತಲೂ ಮದುವೆಗೆ ಹೆಚ್ಚಿನ ಆದ್ಯತೆನೀಡುತ್ತಾರೆ. ಇದರಿಂದ ಮಹಿಳಾ ಶಿಕ್ಷಣ, ಸ್ವಾವಲಂಬನೆಗೆ ಅಡ್ಡಿಯಾಗುತ್ತದೆ. ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ.</p>.<p>ಮದುವೆಯ ಸಂಬಂಧ ಪರಸ್ಪರ ಪ್ರೀತಿ, ಗೌರವ ಮತ್ತು ನಂಬಿಕೆಯನ್ನು ಆಧರಿಸಿರಬೇಕೇ ಹೊರತು, ಹಣ ಅಥವಾ ಆಸ್ತಿಯನ್ನಲ್ಲ. ಅನೇಕ ವಿದ್ಯಾವಂತರು ಕೂಡ ವರದಕ್ಷಿಣೆಯನ್ನು ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. ‘ವರದಕ್ಷಿಣೆ ಬೇಡ ಎಂದು ಸ್ಪಷ್ಟವಾಗಿ ಹೇಳುವ ಯುವಜನರ ಸಂಖ್ಯೆ ಹೆಚ್ಚಾಗುವುದೊಂದೇ ಈ ಸಮಸ್ಯೆಗೆ ಪರಿಹಾರ ಆಗಬಲ್ಲದು. ವರದಕ್ಷಿಣೆಯನ್ನು ಯುವಕರು ವಿರೋಧಿಸಬೇಕು ಹಾಗೂ ವರದಕ್ಷಿಣೆ ಬಯಸುವ ಯುವಕರನ್ನು ಮದುವೆಯಾಗಲು ತರುಣಿಯರು ನಿರಾಕರಿಸಬೇಕು. ಈ ನಿರಾಕರಣೆ ಒಂದು<br>ಆಂದೋಲನವಾಗಿ ಬೆಳೆಯುವ ಅಗತ್ಯವಿದೆ. ಇಂಥದೊಂದು ಆಂದೋಲನಕ್ಕೆ ಗಜೇಂದ್ರಗಡ ತಾಲ್ಲೂಕಿನ ಬಂಜಾರ ಸಮುದಾಯದ ಠರಾವು ಮುನ್ನುಡಿಯಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾಜಿಕ ಪಿಡುಗುಗಳಲ್ಲೊಂದಾದ ವರದಕ್ಷಿಣೆ ಪದ್ಧತಿಯನ್ನು ಕೊನೆಗೊಳಿಸುವ ಕುರಿತು, ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ 17 ಲಂಬಾಣಿ (ಬಂಜಾರ) ತಾಂಡಾಗಳ ಹಿರಿಯರು ಇತ್ತೀಚೆಗೆ ಮಹತ್ವದ ಠರಾವು ಒಂದನ್ನು ಕೈಗೊಂಡಿದ್ದಾರೆ. ಆ ಠರಾವಿನ ಪ್ರಕಾರ, ಈ ತಾಂಡಾಗಳಲ್ಲಿ ಇನ್ನು ಮುಂದೆ ಯಾರೂ ವರದಕ್ಷಿಣೆ ಕೊಡುವಂತಿಲ್ಲ ಮತ್ತು ತೆಗೆದುಕೊಳ್ಳುವಂತಿಲ್ಲ. ವರದಕ್ಷಿಣೆ ತೆಗೆದುಕೊಂಡವರಿಗೆ ಸಮುದಾಯದಿಂದ ಬಹಿಷ್ಕಾರ!</p>.<p>ಬಹಿಷ್ಕಾರವನ್ನು ಹೊರತುಪಡಿಸಿದರೆ, ಲಂಬಾಣಿ ಸಮುದಾಯದ ಹಿರಿಯರು ತೆಗೆದುಕೊಂಡಿರುವ ಠರಾವು ಎಲ್ಲ ಸಮುದಾಯಗಳಿಗೂ ಮಾದರಿ ಆಗುವಂತಿದೆ. ವರದಕ್ಷಿಣೆ ಕಾರಣದಿಂದಾಗಿ ಹೆಣ್ಣು ಹೆತ್ತವರು ಶೋಷಣೆಗೆ ಒಳಗಾಗುತ್ತಿದ್ದು, ಬಡ ಸಮುದಾಯಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿವೆ. ವರದಕ್ಷಿಣೆಯನ್ನು ಹೊಂದಿಸುವುದಕ್ಕಾಗಿ ಆಸ್ತಿ ಮಾರಿರುವ ಪೋಷಕರಿದ್ದಾರೆ. ಮಗಳ ಮದುವೆಗಾಗಿ ಜೀತಕ್ಕೆ ಸಿಲುಕಿದವರೂ ಇದ್ದಾರೆ. ದುಬಾರಿ ಬಡ್ಡಿಗೆ ಸಾಲ ಮಾಡಿ, ಆ ಸಾಲವನ್ನು ತೀರಿಸಲಿಕ್ಕಾಗದೆ ಆತ್ಮಹತ್ಯೆ ಮೂಲಕ ಬದುಕು ಕೊನೆಗೊಳಿಸಿಕೊಂಡ ನತದೃಷ್ಟರೂ ಇದ್ದಾರೆ. ವರದಕ್ಷಿಣೆ ಅನೇಕ ಕುಟುಂಬಗಳನ್ನು ಬೀದಿಪಾಲಾಗಿಸಿದೆ. ಈ ಸಮಸ್ಯೆ ನಿರ್ದಿಷ್ಟ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಯಷ್ಟೇ ಆಗಿರದೆ, ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗೆ ಸಂಬಂಧಿಸಿದ ಬಿಕ್ಕಟ್ಟೂ ಆಗಿದೆ.</p>.<p>ವರದಕ್ಷಿಣೆ ಕಿರುಕುಳದಿಂದ ಸಂಭವಿಸಿರುವ ಘಟನೆಗಳು ನಾಗರಿಕಸಮಾಜವನ್ನು ಬೆಚ್ಚಿಬೀಳಿಸುವಂತ<br>ಹವು. ಇಪ್ಪತ್ತಾರು ವರ್ಷದ ನವ ವಿವಾಹಿತೆಯೊಬ್ಬರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡರು. ಮದುವೆ ಸಂದರ್ಭದಲ್ಲಿ ವರ ಹಾಗೂ ಆತನ ಕುಟುಂಬದವರ ಎಲ್ಲ ಬೇಡಿಕೆಗಳನ್ನು ಪೂರೈಸಿದರೂ, ಮದುವೆಯ ನಂತರ ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಆ ಹಿಂಸೆ ತಾಳಲಾಗದೆ ನತದೃಷ್ಟ ಮಹಿಳೆ ಆತ್ಮಹತ್ಯೆಗೆ ಶರಣಾದರು. ಬೈಕ್ ಹಾಗೂ ಆಭರಣಗಳ ಬೇಡಿಕೆ ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಹಣ ತಾರದ ಕಾರಣಕ್ಕಾಗಿ ಪತ್ನಿಯನ್ನು ಪತಿಯೇ ಜೀವಂತವಾಗಿ ಸುಟ್ಟ ಘಟನೆ ಗ್ರೇಟರ್ ನೋಯ್ಡಾದಿಂದ ವರದಿಆಗಿತ್ತು. ಆ ಅಮಾನುಷ ಘಟನೆ ಮಗು ಹಾಗೂ ಕುಟುಂಬದ<br>ಸಮ್ಮುಖದಲ್ಲೇ ನಡೆದಿದೆ. ಇವು ಉದಾಹರಣೆಗಳಷ್ಟೇ. ವರದಕ್ಷಿಣೆ ಕಾರಣಕ್ಕಾಗಿ ಪತ್ನಿಯನ್ನು ಪೀಡಿಸುವವರು ನಮ್ಮ ಸುತ್ತಮುತ್ತಲೇ ಸಾಕಷ್ಟು ಮಂದಿಯಿದ್ದಾರೆ.</p>.<p>ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ಮಾಹಿತಿಯ ಪ್ರಕಾರ 2023ರಲ್ಲಿ ಭಾರತದಲ್ಲಿ 15,489 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. 6,156 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಅಂದರೆ ದಿನಕ್ಕೆ 17ರಿಂದ 20 ಮಹಿಳೆಯರು ವರದಕ್ಷಿಣೆ ಸಂಬಂಧಿತ ಹಿಂಸೆ ಅಥವಾ ಕಿರುಕುಳದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.</p>.<p>ಕರ್ನಾಟಕದಲ್ಲಿ 2020ರಿಂದ 2025ರ ಅವಧಿಯಲ್ಲಿ 14,636 ವರದಕ್ಷಿಣೆ ಪ್ರಕರಣಗಳು ದಾಖಲಾ<br>ಗಿದ್ದು, 834 ಸಾವುಗಳು ಸಂಭವಿಸಿವೆ ಎಂದು ವರದಿಯೊಂದು ಹೇಳುತ್ತಿದೆ. ತಿಂಗಳಿಗೆ ಸರಾಸರಿ 13 ಮಹಿಳೆಯರು ಸಾವನ್ನಪ್ಪಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಇತ್ತೀಚೆಗೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಈ ಅಂಕಿಅಂಶಗಳು ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದವು. ಅನೇಕ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹೋಗುತ್ತವೆ.</p>.<p>ಭಾರತದಲ್ಲಿ 1961ರಲ್ಲಿಯೇ ವರದಕ್ಷಿಣೆ ಪದ್ಧತಿ ನಿಷೇಧಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷಗಳ ಶಿಕ್ಷೆ ಹಾಗೂ ಕನಿಷ್ಠ ₹15 ಸಾವಿರ ದಂಡ ವಿಧಿಸಬಹುದಾಗಿದೆ. ಮಹಿಳೆಯರ ಮೇಲಿನ ಶೋಷಣೆ ಮತ್ತು ಹಿಂಸೆ ತಡೆಯುವುದು ಹಾಗೂ ಸಮಾನತೆಯನ್ನು ಉತ್ತೇಜಿಸುವುದು, ಸಮಾಜದಲ್ಲಿ ಆರೋಗ್ಯಕರ ವಿವಾಹ ಪದ್ಧತಿಯನ್ನು ರೂಢಿಸುವುದಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಮದುವೆಯ ಸಮಯದಲ್ಲಿ ವರ ಅಥವಾ ವಧುವಿನ ಕುಟುಂಬದಿಂದ ಹಣ, ಆಸ್ತಿ, ಅಥವಾ ಯಾವುದೇ ಮೌಲ್ಯಯುತ ವಸ್ತುಗಳನ್ನು ನೀಡುವುದು, ಪಡೆಯುವುದು ಅಥವಾ ಕೇಳುವುದು ಕಾನೂನುಬಾಹಿರ. ಆದರೆ, ಈ ಕಾಯ್ದೆ ಹಾಳೆಯ ಮೇಲಷ್ಟೇ ಉಳಿದಿದೆ. ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾದರೂ, ಕಾನೂನಿನ ಭಯವಿಲ್ಲದೆ ಅನಿಷ್ಟ ಪದ್ಧತಿ ಮುಂದುವರಿದಿದೆ.</p>.<p>ವರದಕ್ಷಿಣೆಯ ಪರಿಣಾಮಗಳು ಸಾಮಾಜಿಕ ಚಲನೆಯನ್ನು ಹಿಮ್ಮುಖವಾಗಿಸುತ್ತವೆ. ಹೆಣ್ಣು ಭ್ರೂಣಹತ್ಯೆಗೆ ವರ<br>ದಕ್ಷಿಣೆಯೂ ಒಂದು ಕಾರಣವಾಗಿದೆ. ಕೆಲವು ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕಿಂತಲೂ ಮದುವೆಗೆ ಹೆಚ್ಚಿನ ಆದ್ಯತೆನೀಡುತ್ತಾರೆ. ಇದರಿಂದ ಮಹಿಳಾ ಶಿಕ್ಷಣ, ಸ್ವಾವಲಂಬನೆಗೆ ಅಡ್ಡಿಯಾಗುತ್ತದೆ. ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ.</p>.<p>ಮದುವೆಯ ಸಂಬಂಧ ಪರಸ್ಪರ ಪ್ರೀತಿ, ಗೌರವ ಮತ್ತು ನಂಬಿಕೆಯನ್ನು ಆಧರಿಸಿರಬೇಕೇ ಹೊರತು, ಹಣ ಅಥವಾ ಆಸ್ತಿಯನ್ನಲ್ಲ. ಅನೇಕ ವಿದ್ಯಾವಂತರು ಕೂಡ ವರದಕ್ಷಿಣೆಯನ್ನು ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. ‘ವರದಕ್ಷಿಣೆ ಬೇಡ ಎಂದು ಸ್ಪಷ್ಟವಾಗಿ ಹೇಳುವ ಯುವಜನರ ಸಂಖ್ಯೆ ಹೆಚ್ಚಾಗುವುದೊಂದೇ ಈ ಸಮಸ್ಯೆಗೆ ಪರಿಹಾರ ಆಗಬಲ್ಲದು. ವರದಕ್ಷಿಣೆಯನ್ನು ಯುವಕರು ವಿರೋಧಿಸಬೇಕು ಹಾಗೂ ವರದಕ್ಷಿಣೆ ಬಯಸುವ ಯುವಕರನ್ನು ಮದುವೆಯಾಗಲು ತರುಣಿಯರು ನಿರಾಕರಿಸಬೇಕು. ಈ ನಿರಾಕರಣೆ ಒಂದು<br>ಆಂದೋಲನವಾಗಿ ಬೆಳೆಯುವ ಅಗತ್ಯವಿದೆ. ಇಂಥದೊಂದು ಆಂದೋಲನಕ್ಕೆ ಗಜೇಂದ್ರಗಡ ತಾಲ್ಲೂಕಿನ ಬಂಜಾರ ಸಮುದಾಯದ ಠರಾವು ಮುನ್ನುಡಿಯಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>