‘ನೋಡ್ರಿ ಆಂಟಿ, ‘ಬಯಲೇ ಶೌಚಾಲಯ, ಬಯಲೇ ಮೂತ್ರಾಲಯ’ ಅಂತ ಹಾಡ್ತಿದ್ದವರನ್ನೆಲ್ಲ ಹೆಂಗ ಕರ್ಕಂಡು ಬಂದು ಮನ್ಯಾಗಿನ ಪಾಯಿಖಾನೆ ವಳಗ ಕುಂಡ್ರಸ್ಯಾರ ನಮ್ಮ ನಮೋಗುರುಗಳು.ಪ್ರಪಂಚದಾಗ ಎಷ್ಟ್ ಹಿಂದುಳಿದ ದೇಶಗೋಳು ಅದಾವಲ್ರಿ... ಒಂದ್ರಗಾರೂ ಐದೇ ವರ್ಸದಾಗ ಹೀಂಗ ಹತ್ ಕೋಟಿ ಪಾಯಿಖಾನೆ ಕಟ್ಯಾರೇನ್ರಿ? ಸತ್ಯಾ ಏನದ ಅಂತ ಜರಾ ಬಲಕ್ಕ ತಿರುಗಿ ನೋಡೂದೇ ಇಲ್ಲಲ್ರೀ ನೀವು’ ಎಂದು ಗೆಳತಿಯ ಮಗಳು ನನ್ನನ್ನು ಹೀಗಳೆದಳು.