ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದ 73 ಅಭ್ಯರ್ಥಿಗಳ ಪೈಕಿ ಒಂಬತ್ತು ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದು, 64 ಜನ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಬೀದರ್ ಕ್ಷೇತ್ರದಿಂದ ನಾಲ್ವರು, ಔರಾದ್ನಿಂದ ಇಬ್ಬರು ಹಾಗೂ ಭಾಲ್ಕಿಯಿಂದ ಒಬ್ಬ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಬಸವಕಲ್ಯಾಣ ಹಾಗೂ ಹುಮನಾಬಾದ್ ಕ್ಷೇತ್ರದಿಂದ ಒಬ್ಬರೂ ನಾಮಪತ್ರ ಹಿಂದಕ್ಕೆ ಪಡೆದಿಲ್ಲ.
ಬೀದರ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದ ಅನಿಲ ರಾಜಕುಮಾರ, ಅಲಿ ಮಹಮ್ಮದ್ ಮಕಬೂಲ್ ಖಾನ್, ಅಂಬರೀಷ್ ಶಂಕರೆಪ್ಪ ಕೆಂಚಾ, ಶಾ ಸೈಫುಲ್ ಇಸ್ಲಾಂ ಮಹಮ್ಮದ್ ಮೊಹಿದ್ದಿನ್ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದಿಂದ ಮಹಮ್ಮದ್ ಫಿರೋಜ್ ಖಾನ್, ಶಾಮಣ್ಣ ಬಾವಗಿ, ಭಾಲ್ಕಿ ಕ್ಷೇತ್ರದಿಂದ ಜನಾರ್ಧನರಾವ್ ಮಾಧವರಾವ್, ಔರಾದ್ ಕ್ಷೇತ್ರದಿಂದ ಭೀಮಸೇನರಾವ್ ಸಿಂದೆ ಹಾಗೂ ರಾಮಣ್ಣ ನಾಗಪ್ಪ ನಾಮಪತ್ರ ವಾಪಸ್ ಪಡೆದಿದ್ದಾರೆ.