<p>ಆಡಂಬರದ ಆಚರಣೆಗಳು ಜನಸಾಮಾನ್ಯರ ಬದುಕಿಗೆ ಕುತ್ತಾಗಿ ಪರಿಣಮಿಸುತ್ತವೆ ಎನ್ನುವ ಸತ್ಯ ಸ್ನೇಹಿತೆಯೊಬ್ಬಳ ಬದುಕನ್ನು ಹತ್ತಿರದಿಂದ ನೋಡಿದಾಗ ಮತ್ತಷ್ಟು ನಿಚ್ಚಳ ವಾಯಿತು.</p>.<p>ಡಿಗ್ರಿ ಮುಗಿಸುತ್ತಿದ್ದಂತೆ ಕುಟುಂಬದ ಒತ್ತಡಕ್ಕೆ ಮಣಿದ ಆಕೆ, ಉನ್ನತ ಶಿಕ್ಷಣದ ಕನಸನ್ನು ಮೊಟಕುಗೊಳಿಸಿದಳು. ಮಗಳ ಉನ್ನತ ವ್ಯಾಸಂಗಕ್ಕೆ ಖರ್ಚು ಮಾಡುವ ಬದಲು, ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡುವ ಮೂಲಕ ‘ಜವಾಬ್ದಾರಿ’ ಕಳೆದುಕೊಳ್ಳುವುದು ಪಾಲಕರಿಗೆ ಮುಖ್ಯವೆನ್ನಿ ಸಿತ್ತು. ಉತ್ತಮ ಕೆಲಸ, ಆಸ್ತಿ ಹೊಂದಿರುವ ವರನನ್ನು ಹುಡು ಕಿದ ಅವರು, ಅದ್ದೂರಿಯಾಗಿ ಮದುವೆ ನಡೆಸಿ ಕೊಟ್ಟರು. ಪ್ರಿ ವೆಡ್ಡಿಂಗ್ ಶೂಟ್, ದುಬಾರಿ ಬಟ್ಟೆ, ದೊಡ್ಡ ಸಭಾಂಗಣ, ಮದುವೆ ಚಿತ್ರೀಕರಣ ಎಂದೆಲ್ಲಾ ಹಣ ಖರ್ಚು ಮಾಡಿದರು.</p>.<p>ಮದುವೆಗಾಗಿ ಮಾಡಿದ ಲಕ್ಷಾಂತರ ರೂಪಾಯಿ ಸಾಲದ ಬಾಕಿ ಬೆಳೆಯುತ್ತಿರುವಾಗಲೇ, ಮಗಳು ಹೆರಿಗೆಗೆಂದು ತವರಿಗೆ ಬಂದಳು. ಸಾಲದ ಸುಳಿಗೆ ಸಿಲುಕಿದ್ದ ಪೋಷಕರಿಗೆ, ಗರ್ಭಿಣಿ ಮಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗಲಿಲ್ಲ. ಅವಧಿಪೂರ್ವ ಹೆರಿಗೆ ನೋವು ಕಾಣಿಸಿಕೊಂಡಿತು. ವೈದ್ಯಕೀಯ ಹೋರಾಟದಲ್ಲಿ ತಾಯಿ ಉಳಿದರೂ, ಮಗು ದಕ್ಕಲಿಲ್ಲ. ಸಾಲ ಮಾಡಿ ಮಗಳ ಮದುವೆ ಮಾಡಿದ್ದ ಕುಟುಂಬ, ಈಗ ಅದೇ ಮಗಳ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂದೆಮುಂದೆ ನೋಡುವಂತೆ ಆಗಿತ್ತು.</p>.<p>ಕೂಸನ್ನು ಕಳೆದುಕೊಂಡ ದುಃಖ ಹೆಚ್ಚಿಸುವಂತೆ, ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಗಂಡನ ಮನೆಯವರು ದೂಷಿಸಿದರು. ಸೊಸೆಯ ಕಾಳಜಿ ಮತ್ತು ಆರೋಗ್ಯ ತಮ್ಮ ಜವಾಬ್ದಾರಿಯೂ ಹೌದು ಎನ್ನುವುದರ ಅರಿವಿಲ್ಲದಂತೆ ಗೆಳತಿಯ ಗಂಡನ ಮನೆ<br>ಯವರು ವರ್ತಿಸುತ್ತಿದ್ದಾರೆ. ತವರು ಮನೆಯವರ ಅಸಹಾಯ ಕತೆ, ಗಂಡನ ಮನೆಯವರ ಹೊಣೆಗೇಡಿತನದಲ್ಲಿ ಆಕೆ ನವೆ ಯುತ್ತಿದ್ದಾಳೆ. ವೃಥಾ ಆಡಂಬರಕ್ಕೆ ಬಿದ್ದರೆ ಜನಸಾಮಾನ್ಯರ ಬದುಕು ಹೇಗೆ ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವುದಕ್ಕೆ ಗೆಳತಿ ಉದಾಹರಣೆಯಂತೆ ಕಾಣಿಸುತ್ತಿದ್ದಾಳೆ.</p>.<p>ಮಕ್ಕಳ ಮದುವೆಯಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಉದಾಹರಣೆಗಳು ನಮ್ಮಲ್ಲಿ ಕಡಿಮೆ ಯೇನಿಲ್ಲ. ಅರಿವಿನ ಕೊರತೆ, ಒಣ ಪ್ರತಿಷ್ಠೆ, ನೋಡಿದವರು ಏನಂತಾರೆ ಎಂಬ ದಾಕ್ಷಿಣ್ಯ ಮದುವೆಗೆ ತಮ್ಮ ಶಕ್ತಿಮೀರಿ ಹಣ ಖರ್ಚು ಮಾಡಲು ಪೋಷಕರನ್ನು ಪ್ರೇರೇಪಿಸುತ್ತದೆ.</p>.<p>ಆಡಂಬರದ ಮದುವೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೂ ಇದೆ. ನಮ್ಮ ನಿರ್ಧಾರಗಳು ಹಾಗೂ ಜೀವನಶೈಲಿ ಮೇಲೆ ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಪ್ರಭಾವ ಬೀರುತ್ತಿರುವ ದಿನಗಳಿವು. ಸಂವಹನದ ಉದ್ದೇಶಕ್ಕಾಗಿ ಆರಂಭ ವಾದ ಈ ಮಾಧ್ಯಮಗಳು, ಈಗ ತಮ್ಮ ವ್ಯಾಪ್ತಿಯನ್ನು ಮೀರಿ ಬೆಳೆದಿವೆ. ಒಂದೆಡೆ ಜನರ ಸೃಜನಶೀಲತೆಗೆ ವೇದಿಕೆಯಾಗಿ, ಆದಾಯದ ಮೂಲ ಆಗಿವೆ. ಇನ್ನೊಂದೆಡೆ, ಅನಗತ್ಯ ಒತ್ತಡ ಸೃಷ್ಟಿಸುವುದರೊಂದಿಗೆ ತೋರಿಕೆಯ ಜೀವನಕ್ಕೆ ಕುಮ್ಮಕ್ಕು ನೀಡುತ್ತಿವೆ.</p>.<p>ಈ ಮೊದಲು ಮನೆಮಂದಿಗಷ್ಟೇ ಸೀಮಿತವಾಗಿದ್ದ ಅನೇಕ ಆಚರಣೆ ಗಳು ಈಗ ದುಬಾರಿ ಪೆಂಡಾಲ್ ಮತ್ತು ಫೋಟೊ ಶೂಟ್ ಗಳಿಂದ ಮಿಂಚುತ್ತಿವೆ. ಮದುವೆ ಮಾತ್ರವಲ್ಲ, ಪೂಜೆ ಹಾಗೂ<br>ಹುಟ್ಟುಹಬ್ಬದಂತಹ ಆಚರಣೆಗಳಲ್ಲೂ ಆಡಂಬರ ಎದ್ದು ಕಾಣುತ್ತಿದೆ. ಈ ಅದ್ದೂರಿತನದ ಹಿಂದಿನ ಕಾರಣ ಸಾಮಾಜಿಕಮಾಧ್ಯಮಗಳಲ್ಲಿ ಪ್ರದರ್ಶನ ಮಾಡುವುದೇ ಆಗಿದೆ. ದುಬಾರಿ<br>ಪ್ರಿ ವೆಡ್ಡಿಂಗ್ ಶೂಟ್, ವೆಡ್ಡಿಂಗ್ ಶೂಟ್ ಹಾಗೂ ಮೆಟರ್ನಿಟಿಶೂಟ್ಗಳು ಕಡ್ಡಾಯ ಎನ್ನುವಂತೆ ಸಾಮಾಜಿಕ ಮಾಧ್ಯಮ ಗಳು ಒತ್ತಡ ಸೃಷ್ಟಿಸುತ್ತಿವೆ. ಉಳ್ಳವರು ಮಾತ್ರವಲ್ಲದೇ ಸಾಮಾನ್ಯರೂ ಈ ಒತ್ತಡಕ್ಕೆ ಒಳಗಾಗಿ, ಆರ್ಥಿಕ ಹೊರೆ ಅನುಭವಿ ಸುವಂತಾಗಿದೆ. ಪ್ರಿ ವೆಡ್ಡಿಂಗ್ ಶೂಟ್ ಬೇಡ ಎಂದ ಯುವಕ ನನ್ನು, ಯುವತಿ ಮದುವೆಯಾಗಲು ನಿರಾಕರಿಸಿದ ಘಟನೆಯೂ ನಡೆದಿದೆ.</p>.<p>ಮದುವೆ, ತಾಯ್ತನ, ಜನ್ಮದಿನಗಳು ನಮ್ಮ ಜೀವನದ ಬಹುಮುಖ್ಯ ಘಟ್ಟ ಎನ್ನುವುದು ನಿಜ. ಅವುಗಳನ್ನು ಸಂಭ್ರಮಿಸುವ ಆಸೆಯಿದ್ದರೆ ಅದು ತಪ್ಪೇನೂ ಅಲ್ಲ. ಆದರೆ, ತೋರಿಕೆ ಗಾಗಿ ಅಳತೆ ಮೀರಿ ವೆಚ್ಚ ಮಾಡದೆ, ನಮ್ಮ ಮಿತಿಯಲ್ಲಿ ಖರ್ಚು ಮಾಡುವುದು ಒಳಿತು.</p>.<p>ಆಡಂಬರದ ಆಚರಣೆಗಳು ಹೆಚ್ಚುವುದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಾರಣವಾಗಿದೆ. ಸರಳ ಮತ್ತು ಪ್ರಾಮಾಣಿಕ ಬದುಕನ್ನು ರೂಪಿಸಿಕೊಳ್ಳುವ ವಿಧಾನವನ್ನು ಕಲಿಸಿಕೊಡುವಲ್ಲಿ ಶಿಕ್ಷಣ ಸೋತಿದೆ. ಸರಳ ಜೀವನವನ್ನು ಬೋಧಿಸಿದ ಬುದ್ಧಹಾಗೂ ಬಸವ ಈಗ ನಮಗೆ ಸಂಭ್ರಮಿಸುವ ಸರಕಾಗಿರು ವುದು ವಿಷಾದನೀಯ. ಮಹನೀಯರ ಜನ್ಮದಿನಗಳು ಡಿಜೆ ಸದ್ದಿನಲ್ಲಿ ಮುಗಿದುಹೋಗುತ್ತಿವೆ. ಅರ್ಥವಾಗದ ಸಂಪ್ರದಾಯ ಗಳನ್ನೆಲ್ಲ ನಿರಾಕರಿಸಿ, ‘ಮಂತ್ರ ಮಾಂಗಲ್ಯ’ ಎಂಬ ಸರಳ ಹಾಗೂ ಅರ್ಥಪೂರ್ಣ ಮದುವೆಯನ್ನು ಪ್ರೋತ್ಸಾಹಿಸಿದ ಕುವೆಂಪು, ‘ಉಳ್ಳವರು ಶಿವಾಲಯ ಮಾಡಿದರು, ನಾನೇನು ಮಾಡಲಿ ಬಡವನಯ್ಯ’ ಎಂದು ತನ್ನ ದೇಹವನ್ನೇ ದೇವಾಲಯ ಎಂದ ಬಸವಣ್ಣ, ತರತಮಗಳಿಲ್ಲದ ಸಮಾಜದ ಕನಸನ್ನು ಕೊಟ್ಟುಹೋದ ಅಂಬೇಡ್ಕರ್, ಇವರೆಲ್ಲ ನಮಗೆ ಆದರ್ಶವಾಗಬೇಕು. ಆಗ, ಪ್ರತಿಷ್ಠೆ ಮತ್ತು ದುಂದುವೆಚ್ಚದ ಆಚರಣೆಗಳಿಂದ ಹೊರಬರಲು ಸಾಧ್ಯವಾಗುತ್ತದೆ; ಸಾಮಾಜಿಕ ಮಾಧ್ಯಮಗಳ ಬಾಹ್ಯ ಒತ್ತಡವನ್ನು ಮೀರಿನಿಲ್ಲಲು ಸಾಧ್ಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಡಂಬರದ ಆಚರಣೆಗಳು ಜನಸಾಮಾನ್ಯರ ಬದುಕಿಗೆ ಕುತ್ತಾಗಿ ಪರಿಣಮಿಸುತ್ತವೆ ಎನ್ನುವ ಸತ್ಯ ಸ್ನೇಹಿತೆಯೊಬ್ಬಳ ಬದುಕನ್ನು ಹತ್ತಿರದಿಂದ ನೋಡಿದಾಗ ಮತ್ತಷ್ಟು ನಿಚ್ಚಳ ವಾಯಿತು.</p>.<p>ಡಿಗ್ರಿ ಮುಗಿಸುತ್ತಿದ್ದಂತೆ ಕುಟುಂಬದ ಒತ್ತಡಕ್ಕೆ ಮಣಿದ ಆಕೆ, ಉನ್ನತ ಶಿಕ್ಷಣದ ಕನಸನ್ನು ಮೊಟಕುಗೊಳಿಸಿದಳು. ಮಗಳ ಉನ್ನತ ವ್ಯಾಸಂಗಕ್ಕೆ ಖರ್ಚು ಮಾಡುವ ಬದಲು, ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡುವ ಮೂಲಕ ‘ಜವಾಬ್ದಾರಿ’ ಕಳೆದುಕೊಳ್ಳುವುದು ಪಾಲಕರಿಗೆ ಮುಖ್ಯವೆನ್ನಿ ಸಿತ್ತು. ಉತ್ತಮ ಕೆಲಸ, ಆಸ್ತಿ ಹೊಂದಿರುವ ವರನನ್ನು ಹುಡು ಕಿದ ಅವರು, ಅದ್ದೂರಿಯಾಗಿ ಮದುವೆ ನಡೆಸಿ ಕೊಟ್ಟರು. ಪ್ರಿ ವೆಡ್ಡಿಂಗ್ ಶೂಟ್, ದುಬಾರಿ ಬಟ್ಟೆ, ದೊಡ್ಡ ಸಭಾಂಗಣ, ಮದುವೆ ಚಿತ್ರೀಕರಣ ಎಂದೆಲ್ಲಾ ಹಣ ಖರ್ಚು ಮಾಡಿದರು.</p>.<p>ಮದುವೆಗಾಗಿ ಮಾಡಿದ ಲಕ್ಷಾಂತರ ರೂಪಾಯಿ ಸಾಲದ ಬಾಕಿ ಬೆಳೆಯುತ್ತಿರುವಾಗಲೇ, ಮಗಳು ಹೆರಿಗೆಗೆಂದು ತವರಿಗೆ ಬಂದಳು. ಸಾಲದ ಸುಳಿಗೆ ಸಿಲುಕಿದ್ದ ಪೋಷಕರಿಗೆ, ಗರ್ಭಿಣಿ ಮಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗಲಿಲ್ಲ. ಅವಧಿಪೂರ್ವ ಹೆರಿಗೆ ನೋವು ಕಾಣಿಸಿಕೊಂಡಿತು. ವೈದ್ಯಕೀಯ ಹೋರಾಟದಲ್ಲಿ ತಾಯಿ ಉಳಿದರೂ, ಮಗು ದಕ್ಕಲಿಲ್ಲ. ಸಾಲ ಮಾಡಿ ಮಗಳ ಮದುವೆ ಮಾಡಿದ್ದ ಕುಟುಂಬ, ಈಗ ಅದೇ ಮಗಳ ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂದೆಮುಂದೆ ನೋಡುವಂತೆ ಆಗಿತ್ತು.</p>.<p>ಕೂಸನ್ನು ಕಳೆದುಕೊಂಡ ದುಃಖ ಹೆಚ್ಚಿಸುವಂತೆ, ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಗಂಡನ ಮನೆಯವರು ದೂಷಿಸಿದರು. ಸೊಸೆಯ ಕಾಳಜಿ ಮತ್ತು ಆರೋಗ್ಯ ತಮ್ಮ ಜವಾಬ್ದಾರಿಯೂ ಹೌದು ಎನ್ನುವುದರ ಅರಿವಿಲ್ಲದಂತೆ ಗೆಳತಿಯ ಗಂಡನ ಮನೆ<br>ಯವರು ವರ್ತಿಸುತ್ತಿದ್ದಾರೆ. ತವರು ಮನೆಯವರ ಅಸಹಾಯ ಕತೆ, ಗಂಡನ ಮನೆಯವರ ಹೊಣೆಗೇಡಿತನದಲ್ಲಿ ಆಕೆ ನವೆ ಯುತ್ತಿದ್ದಾಳೆ. ವೃಥಾ ಆಡಂಬರಕ್ಕೆ ಬಿದ್ದರೆ ಜನಸಾಮಾನ್ಯರ ಬದುಕು ಹೇಗೆ ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವುದಕ್ಕೆ ಗೆಳತಿ ಉದಾಹರಣೆಯಂತೆ ಕಾಣಿಸುತ್ತಿದ್ದಾಳೆ.</p>.<p>ಮಕ್ಕಳ ಮದುವೆಯಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಉದಾಹರಣೆಗಳು ನಮ್ಮಲ್ಲಿ ಕಡಿಮೆ ಯೇನಿಲ್ಲ. ಅರಿವಿನ ಕೊರತೆ, ಒಣ ಪ್ರತಿಷ್ಠೆ, ನೋಡಿದವರು ಏನಂತಾರೆ ಎಂಬ ದಾಕ್ಷಿಣ್ಯ ಮದುವೆಗೆ ತಮ್ಮ ಶಕ್ತಿಮೀರಿ ಹಣ ಖರ್ಚು ಮಾಡಲು ಪೋಷಕರನ್ನು ಪ್ರೇರೇಪಿಸುತ್ತದೆ.</p>.<p>ಆಡಂಬರದ ಮದುವೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೂ ಇದೆ. ನಮ್ಮ ನಿರ್ಧಾರಗಳು ಹಾಗೂ ಜೀವನಶೈಲಿ ಮೇಲೆ ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಪ್ರಭಾವ ಬೀರುತ್ತಿರುವ ದಿನಗಳಿವು. ಸಂವಹನದ ಉದ್ದೇಶಕ್ಕಾಗಿ ಆರಂಭ ವಾದ ಈ ಮಾಧ್ಯಮಗಳು, ಈಗ ತಮ್ಮ ವ್ಯಾಪ್ತಿಯನ್ನು ಮೀರಿ ಬೆಳೆದಿವೆ. ಒಂದೆಡೆ ಜನರ ಸೃಜನಶೀಲತೆಗೆ ವೇದಿಕೆಯಾಗಿ, ಆದಾಯದ ಮೂಲ ಆಗಿವೆ. ಇನ್ನೊಂದೆಡೆ, ಅನಗತ್ಯ ಒತ್ತಡ ಸೃಷ್ಟಿಸುವುದರೊಂದಿಗೆ ತೋರಿಕೆಯ ಜೀವನಕ್ಕೆ ಕುಮ್ಮಕ್ಕು ನೀಡುತ್ತಿವೆ.</p>.<p>ಈ ಮೊದಲು ಮನೆಮಂದಿಗಷ್ಟೇ ಸೀಮಿತವಾಗಿದ್ದ ಅನೇಕ ಆಚರಣೆ ಗಳು ಈಗ ದುಬಾರಿ ಪೆಂಡಾಲ್ ಮತ್ತು ಫೋಟೊ ಶೂಟ್ ಗಳಿಂದ ಮಿಂಚುತ್ತಿವೆ. ಮದುವೆ ಮಾತ್ರವಲ್ಲ, ಪೂಜೆ ಹಾಗೂ<br>ಹುಟ್ಟುಹಬ್ಬದಂತಹ ಆಚರಣೆಗಳಲ್ಲೂ ಆಡಂಬರ ಎದ್ದು ಕಾಣುತ್ತಿದೆ. ಈ ಅದ್ದೂರಿತನದ ಹಿಂದಿನ ಕಾರಣ ಸಾಮಾಜಿಕಮಾಧ್ಯಮಗಳಲ್ಲಿ ಪ್ರದರ್ಶನ ಮಾಡುವುದೇ ಆಗಿದೆ. ದುಬಾರಿ<br>ಪ್ರಿ ವೆಡ್ಡಿಂಗ್ ಶೂಟ್, ವೆಡ್ಡಿಂಗ್ ಶೂಟ್ ಹಾಗೂ ಮೆಟರ್ನಿಟಿಶೂಟ್ಗಳು ಕಡ್ಡಾಯ ಎನ್ನುವಂತೆ ಸಾಮಾಜಿಕ ಮಾಧ್ಯಮ ಗಳು ಒತ್ತಡ ಸೃಷ್ಟಿಸುತ್ತಿವೆ. ಉಳ್ಳವರು ಮಾತ್ರವಲ್ಲದೇ ಸಾಮಾನ್ಯರೂ ಈ ಒತ್ತಡಕ್ಕೆ ಒಳಗಾಗಿ, ಆರ್ಥಿಕ ಹೊರೆ ಅನುಭವಿ ಸುವಂತಾಗಿದೆ. ಪ್ರಿ ವೆಡ್ಡಿಂಗ್ ಶೂಟ್ ಬೇಡ ಎಂದ ಯುವಕ ನನ್ನು, ಯುವತಿ ಮದುವೆಯಾಗಲು ನಿರಾಕರಿಸಿದ ಘಟನೆಯೂ ನಡೆದಿದೆ.</p>.<p>ಮದುವೆ, ತಾಯ್ತನ, ಜನ್ಮದಿನಗಳು ನಮ್ಮ ಜೀವನದ ಬಹುಮುಖ್ಯ ಘಟ್ಟ ಎನ್ನುವುದು ನಿಜ. ಅವುಗಳನ್ನು ಸಂಭ್ರಮಿಸುವ ಆಸೆಯಿದ್ದರೆ ಅದು ತಪ್ಪೇನೂ ಅಲ್ಲ. ಆದರೆ, ತೋರಿಕೆ ಗಾಗಿ ಅಳತೆ ಮೀರಿ ವೆಚ್ಚ ಮಾಡದೆ, ನಮ್ಮ ಮಿತಿಯಲ್ಲಿ ಖರ್ಚು ಮಾಡುವುದು ಒಳಿತು.</p>.<p>ಆಡಂಬರದ ಆಚರಣೆಗಳು ಹೆಚ್ಚುವುದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಾರಣವಾಗಿದೆ. ಸರಳ ಮತ್ತು ಪ್ರಾಮಾಣಿಕ ಬದುಕನ್ನು ರೂಪಿಸಿಕೊಳ್ಳುವ ವಿಧಾನವನ್ನು ಕಲಿಸಿಕೊಡುವಲ್ಲಿ ಶಿಕ್ಷಣ ಸೋತಿದೆ. ಸರಳ ಜೀವನವನ್ನು ಬೋಧಿಸಿದ ಬುದ್ಧಹಾಗೂ ಬಸವ ಈಗ ನಮಗೆ ಸಂಭ್ರಮಿಸುವ ಸರಕಾಗಿರು ವುದು ವಿಷಾದನೀಯ. ಮಹನೀಯರ ಜನ್ಮದಿನಗಳು ಡಿಜೆ ಸದ್ದಿನಲ್ಲಿ ಮುಗಿದುಹೋಗುತ್ತಿವೆ. ಅರ್ಥವಾಗದ ಸಂಪ್ರದಾಯ ಗಳನ್ನೆಲ್ಲ ನಿರಾಕರಿಸಿ, ‘ಮಂತ್ರ ಮಾಂಗಲ್ಯ’ ಎಂಬ ಸರಳ ಹಾಗೂ ಅರ್ಥಪೂರ್ಣ ಮದುವೆಯನ್ನು ಪ್ರೋತ್ಸಾಹಿಸಿದ ಕುವೆಂಪು, ‘ಉಳ್ಳವರು ಶಿವಾಲಯ ಮಾಡಿದರು, ನಾನೇನು ಮಾಡಲಿ ಬಡವನಯ್ಯ’ ಎಂದು ತನ್ನ ದೇಹವನ್ನೇ ದೇವಾಲಯ ಎಂದ ಬಸವಣ್ಣ, ತರತಮಗಳಿಲ್ಲದ ಸಮಾಜದ ಕನಸನ್ನು ಕೊಟ್ಟುಹೋದ ಅಂಬೇಡ್ಕರ್, ಇವರೆಲ್ಲ ನಮಗೆ ಆದರ್ಶವಾಗಬೇಕು. ಆಗ, ಪ್ರತಿಷ್ಠೆ ಮತ್ತು ದುಂದುವೆಚ್ಚದ ಆಚರಣೆಗಳಿಂದ ಹೊರಬರಲು ಸಾಧ್ಯವಾಗುತ್ತದೆ; ಸಾಮಾಜಿಕ ಮಾಧ್ಯಮಗಳ ಬಾಹ್ಯ ಒತ್ತಡವನ್ನು ಮೀರಿನಿಲ್ಲಲು ಸಾಧ್ಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>