<p>ದೇಶದಲ್ಲಿಯೇ ಅತಿಹೆಚ್ಚು ಹಾಗೂ ಗುಣಮಟ್ಟದ ಶ್ರೀಗಂಧ ಉತ್ಪಾದಿಸುವ ರಾಜ್ಯ ಕರ್ನಾಟಕ. ಶ್ರೀಗಂಧದ ಬೆಳೆಗೆ ಇರಬೇಕಾದ ಹವಾಮಾನ, ಮಣ್ಣಿನ ಗುಣಮಟ್ಟ, ಪರಿಸರ ಇಲ್ಲಿದೆ. ಕರ್ನಾಟಕದ ಶ್ರೀಗಂಧದಲ್ಲಿ ಮೃದುತ್ವದ ಜೊತೆಗೆ ಎಣ್ಣೆಯ ಅಂಶವೂ ಹೆಚ್ಚಾಗಿದೆ.</p>.<p>2001ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿಇದ್ದಾಗ, ಆಗಿನ ಅರಣ್ಯ ಸಚಿವ ಕೆ.ಎಚ್. ರಂಗನಾಥ್ ಅವರ ಆಸಕ್ತಿಯ ಫಲವಾಗಿ ಅಂದಿನ ಸರ್ಕಾರ ‘ಶ್ರೀಗಂಧದ ನೀತಿ’ ಪ್ರಕಟಿಸಿತು; ಶ್ರೀಗಂಧ ಬೆಳೆಯುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ಇದ್ದ ನಿಯಮಗಳನ್ನು ಸರಳಗೊಳಿಸಿತು. ನಂತರದ ಎರಡೂವರೆ ದಶಕದಲ್ಲಿ ಶ್ರೀಗಂಧದ ಬೆಳೆ ಹಲವು ಜಿಲ್ಲೆಗಳಿಗೆ ಹಬ್ಬಿದೆ. ಹೊಸದಾಗಿ ಶ್ರೀಗಂಧ ಬೆಳೆಯುವವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿ, 40 ಸಾವಿರಎಕರೆ ಭೂಮಿಗೆ ಬೆಳೆ ವಿಸ್ತರಣೆಗೊಂಡಿದೆ. ಆದರೆ, ಬೆಳೆಗಾರರಿಗೆ ಸಮಾಧಾನವಿಲ್ಲ.</p>.<p>ಕಷ್ಟಪಟ್ಟು ಬೆಳೆದ ಶ್ರೀಗಂಧದ ಮರಗಳು ಕಳ್ಳರು, ಮಧ್ಯವರ್ತಿಗಳ ಪಾಲಾಗುತ್ತಿವೆ. ರೈತರೇ ಭದ್ರತೆ ಮಾಡಿ<br>ಕೊಂಡು ಮರ ಉಳಿಸಿಕೊಂಡರೂ ಸರಿಯಾದ ದರ ಸಿಗುತ್ತಿಲ್ಲ. ಶ್ರೀಗಂಧ ಖರೀದಿಗೆ ಸೂಕ್ತ ವ್ಯವಸ್ಥೆಯನ್ನು ಅರಣ್ಯ ಇಲಾಖೆ ರೂಪಿಸಿಲ್ಲ. ಖರೀದಿ ದರವನ್ನೂ ಏರಿಸುತ್ತಿಲ್ಲ.</p>.<p>ನಾವು ಬೆಳೆದ ಶ್ರೀಗಂಧದ ಹೆಚ್ಚಿನಲಾಭ ನಮಗೆ ಸಿಗದೇ ಬೇರೆ ಯಾರದೋ ಪಾಲಾಗುತ್ತಿದೆ. ಮಾಫಿಯಾ ರೀತಿಯಲ್ಲಿ ಶ್ರೀಗಂಧದ ಕಳ್ಳತನ, ಮಾರಾಟ ಜಾಲ ಬೆಳೆಯುತ್ತಿದ್ದರೂ ಅರಣ್ಯ ಇಲಾಖೆ ಎಚ್ಚತ್ತಿಲ್ಲ ಎಂದು ಶ್ರೀಗಂಧದ ಬೆಳೆಗಾರರು ಒಂದು ದಶಕದಿಂದ ಹೇಳುತ್ತಲೇ ಇದ್ದರೂ, ಇಲಾಖೆ ಚುರುಕಾಗಿಲ್ಲ.</p>.<p>ಅರಣ್ಯ ಇಲಾಖೆಯು ರೈತರಿಂದ ಖರೀದಿಸಿದ ಹಾಗೂ ಕಳ್ಳತನದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಶ್ರೀಗಂಧವನ್ನು ಹರಾಜು ಹಾಕಿ, ಮಾರಾಟದಿಂದ ಬಂದ ಆದಾಯವನ್ನು ರೈತರಿಗೆ ಹಸ್ತಾಂತರಿಸುತ್ತದೆ. ರೈತರು ನೇರವಾಗಿ ಡಿಪೊಗಳಿಗೆ ಶ್ರೀಗಂಧ ಸಾಗಣೆ ಮಾಡಿ ಮಾರಾಟ ಮಾಡಲೂ ಇಲಾಖೆ ಅನುವು ಮಾಡಿಕೊಡುತ್ತದೆ. ಐದು ವರ್ಷದಲ್ಲಿ ಪ್ರತಿ ಕೆ.ಜಿ. ಶ್ರೀಗಂಧದ ದರ ₹3 ಸಾವಿರದಿಂದ ₹4 ಸಾವಿರದವರೆಗೆ ಏರಿಕೆಯಾಗಿದೆ. ಸದ್ಯ ಪ್ರತಿ ಕೆ.ಜಿ.ಗೆ ₹13 ಸಾವಿರಕ್ಕೂ ಹೆಚ್ಚಿನ ದರವಿದೆ. ಖರೀದಿ ದರ ಹೆಚ್ಚಾದರೆ ಹೆಚ್ಚಿನ ಆದಾಯವೂ ರೈತರಿಗೆ ಸಿಗಲಿದೆ. ತಮಿಳುನಾಡು ರಾಜ್ಯದಲ್ಲಿ ಪ್ರತಿ ವರ್ಷ ದರ ಪರಿಷ್ಕರಣೆ ಮಾಡುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ದರ ಪರಿಷ್ಕರಣೆಗೆ ಹಿಂದೆ ಮುಂದೆ ನೋಡಲಾಗುತ್ತಿದೆ ಎನ್ನುವುದು ರೈತರ ಅಸಮಾಧಾನ.</p>.<p>ಕರ್ನಾಟಕ ಅರಣ್ಯ ನಿಯಮಗಳು 1969ರ ಸೆಕ್ಷನ್ 108(6)ರ ಪ್ರಕಾರ,ಪ್ರತಿ ಹಣಕಾಸು ವರ್ಷದಲ್ಲಿ ಶ್ರೀಗಂಧಮರದ ದರವನ್ನು ನಿಗದಿಪಡಿಸಬೇಕು. ಅದನ್ನು ಮಾಡದೆ, ಸರಾಸರಿದರ ಆಧರಿಸಿ ಆಗಾಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಕೆಲವೊಮ್ಮೆ ನೆರೆಯ ತಮಿಳುನಾಡಿನಲ್ಲಿ ನಡೆಸಲಾದ ಹರಾಜಿನ ಬೆಲೆಯನ್ನು ಪರಿಗಣಿಸಿ ಇಲ್ಲಿಯೂ ಅದನ್ನೇ ಬಳಸಬಹುದು ಎನ್ನುವ ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.</p>.<p>ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಸಂಸ್ಥೆ, ಮೈಸೂರು ಸ್ಯಾಂಡಲ್ ಸೋಪು, ಇತರೆ ಉತ್ಪನ್ನಗಳನ್ನು ಉತ್ಪಾದಿಸಲು ಶ್ರೀಗಂಧವನ್ನೇ ಅವಲಂಬಿಸಿದೆ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ರಾಜ್ಯದ ರೈತರಿಂದ 174.5 ಟನ್ ಶ್ರೀಗಂಧ ಖರೀದಿಸಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾದರೂ, ಶ್ರೀಗಂಧದ ಮೌಲ್ಯವರ್ಧನೆಗೆ ಅರಣ್ಯ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿಳಂಬ ಮಾಡದೆ ಹೊಸ ನೀತಿ ಜಾರಿಗೊಳಿಸಬೇಕು.</p>.<p>‘ಅರಣ್ಯ ಪ್ರೋತ್ಸಾಹ ಯೋಜನೆಯಡಿ ಶ್ರೀಗಂಧದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಶ್ರೀಗಂಧದ ಮರಗಳನ್ನು ಖರೀದಿಸಿದ 24 ಗಂಟೆಗಳಲ್ಲಿ, ನಿಗದಿತ ಬೆಲೆಯ ಶೇ 33ರಷ್ಟು ಮೊತ್ತವನ್ನು ರೈತರಿಗೆ ಪಾವತಿ ಮಾಡಬೇಕು. 12 ತಿಂಗಳಲ್ಲಿ ಉಳಿದ ಮೊತ್ತ ರೈತರಿಗೆ ಪಾವತಿಸಬೇಕು. ಪ್ರತಿ ವರ್ಷ ₹250 ಕೋಟಿಯನ್ನು ಶ್ರೀಗಂಧದ ಸಂಶೋಧನೆ, ವಿಸ್ತರಣೆ ಹಾಗೂ ವಿಮೆಗೆ ಮೀಸಲಿಡಬೇಕು’ ಎಂದು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.</p>.<p>ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದಡಾ. ಸಿ.ಎನ್. ಮಂಜುನಾಥ್ ಅವರು, ಕಾಫಿ, ರೇಷ್ಮೆ, ಮಸಾಲೆ ಉತ್ಪನ್ನಗಳ ರೀತಿಯಲ್ಲಿ ಶ್ರೀಗಂಧಕ್ಕೂ ಪ್ರತ್ಯೇಕ ಮಂಡಳಿ ರಚಿಸಿ ಎನ್ನುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರವಾದರೂ ಮಂಡಳಿ ಸ್ಥಾಪಿಸಿದರೆ, ಶ್ರೀಗಂಧದ ಬೆಳೆಗಾರರ ದಶಕಗಳ ಬೇಡಿಕೆಗೆ ಬೆಲೆ ಬರಲಿದೆ.</p>.<p>‘ಶ್ರೀಗಂಧದ ನೀತಿ’ ಸರಳೀಕರಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಳೆದ ಜೂನ್ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದರು. ಪ್ರಸ್ತುತ ಹೊಸ ನೀತಿಯ ಕರಡು ಸಚಿವರ ಮುಂದಿದೆ. ಅದರ ಜಾರಿಗಾಗಿ ರೈತರು ಕಾಯುತ್ತಿದ್ದಾರೆ.</p>.<p>ಹೊಸ ನೀತಿ ಜಾರಿ, ಶ್ರೀಗಂಧ ಮಂಡಳಿ ಸ್ಥಾಪನೆ, ತಂತ್ರಜ್ಞಾನ ಆಧರಿತ ಬೆಳೆ ಸುರಕ್ಷತೆ ಹಾಗೂ ಶ್ರೀಗಂಧದ ಎಣ್ಣೆ ಕಿರು ಘಟಕ ಸ್ಥಾಪನೆಗೆ ಸರ್ಕಾರ ಒತ್ತು ನೀಡಿದರೆ ಕರುನಾಡು ಶ್ರೀಗಂಧದ ಬೀಡಾಗಿ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದಲ್ಲಿಯೇ ಅತಿಹೆಚ್ಚು ಹಾಗೂ ಗುಣಮಟ್ಟದ ಶ್ರೀಗಂಧ ಉತ್ಪಾದಿಸುವ ರಾಜ್ಯ ಕರ್ನಾಟಕ. ಶ್ರೀಗಂಧದ ಬೆಳೆಗೆ ಇರಬೇಕಾದ ಹವಾಮಾನ, ಮಣ್ಣಿನ ಗುಣಮಟ್ಟ, ಪರಿಸರ ಇಲ್ಲಿದೆ. ಕರ್ನಾಟಕದ ಶ್ರೀಗಂಧದಲ್ಲಿ ಮೃದುತ್ವದ ಜೊತೆಗೆ ಎಣ್ಣೆಯ ಅಂಶವೂ ಹೆಚ್ಚಾಗಿದೆ.</p>.<p>2001ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿಇದ್ದಾಗ, ಆಗಿನ ಅರಣ್ಯ ಸಚಿವ ಕೆ.ಎಚ್. ರಂಗನಾಥ್ ಅವರ ಆಸಕ್ತಿಯ ಫಲವಾಗಿ ಅಂದಿನ ಸರ್ಕಾರ ‘ಶ್ರೀಗಂಧದ ನೀತಿ’ ಪ್ರಕಟಿಸಿತು; ಶ್ರೀಗಂಧ ಬೆಳೆಯುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ಇದ್ದ ನಿಯಮಗಳನ್ನು ಸರಳಗೊಳಿಸಿತು. ನಂತರದ ಎರಡೂವರೆ ದಶಕದಲ್ಲಿ ಶ್ರೀಗಂಧದ ಬೆಳೆ ಹಲವು ಜಿಲ್ಲೆಗಳಿಗೆ ಹಬ್ಬಿದೆ. ಹೊಸದಾಗಿ ಶ್ರೀಗಂಧ ಬೆಳೆಯುವವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿ, 40 ಸಾವಿರಎಕರೆ ಭೂಮಿಗೆ ಬೆಳೆ ವಿಸ್ತರಣೆಗೊಂಡಿದೆ. ಆದರೆ, ಬೆಳೆಗಾರರಿಗೆ ಸಮಾಧಾನವಿಲ್ಲ.</p>.<p>ಕಷ್ಟಪಟ್ಟು ಬೆಳೆದ ಶ್ರೀಗಂಧದ ಮರಗಳು ಕಳ್ಳರು, ಮಧ್ಯವರ್ತಿಗಳ ಪಾಲಾಗುತ್ತಿವೆ. ರೈತರೇ ಭದ್ರತೆ ಮಾಡಿ<br>ಕೊಂಡು ಮರ ಉಳಿಸಿಕೊಂಡರೂ ಸರಿಯಾದ ದರ ಸಿಗುತ್ತಿಲ್ಲ. ಶ್ರೀಗಂಧ ಖರೀದಿಗೆ ಸೂಕ್ತ ವ್ಯವಸ್ಥೆಯನ್ನು ಅರಣ್ಯ ಇಲಾಖೆ ರೂಪಿಸಿಲ್ಲ. ಖರೀದಿ ದರವನ್ನೂ ಏರಿಸುತ್ತಿಲ್ಲ.</p>.<p>ನಾವು ಬೆಳೆದ ಶ್ರೀಗಂಧದ ಹೆಚ್ಚಿನಲಾಭ ನಮಗೆ ಸಿಗದೇ ಬೇರೆ ಯಾರದೋ ಪಾಲಾಗುತ್ತಿದೆ. ಮಾಫಿಯಾ ರೀತಿಯಲ್ಲಿ ಶ್ರೀಗಂಧದ ಕಳ್ಳತನ, ಮಾರಾಟ ಜಾಲ ಬೆಳೆಯುತ್ತಿದ್ದರೂ ಅರಣ್ಯ ಇಲಾಖೆ ಎಚ್ಚತ್ತಿಲ್ಲ ಎಂದು ಶ್ರೀಗಂಧದ ಬೆಳೆಗಾರರು ಒಂದು ದಶಕದಿಂದ ಹೇಳುತ್ತಲೇ ಇದ್ದರೂ, ಇಲಾಖೆ ಚುರುಕಾಗಿಲ್ಲ.</p>.<p>ಅರಣ್ಯ ಇಲಾಖೆಯು ರೈತರಿಂದ ಖರೀದಿಸಿದ ಹಾಗೂ ಕಳ್ಳತನದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಶ್ರೀಗಂಧವನ್ನು ಹರಾಜು ಹಾಕಿ, ಮಾರಾಟದಿಂದ ಬಂದ ಆದಾಯವನ್ನು ರೈತರಿಗೆ ಹಸ್ತಾಂತರಿಸುತ್ತದೆ. ರೈತರು ನೇರವಾಗಿ ಡಿಪೊಗಳಿಗೆ ಶ್ರೀಗಂಧ ಸಾಗಣೆ ಮಾಡಿ ಮಾರಾಟ ಮಾಡಲೂ ಇಲಾಖೆ ಅನುವು ಮಾಡಿಕೊಡುತ್ತದೆ. ಐದು ವರ್ಷದಲ್ಲಿ ಪ್ರತಿ ಕೆ.ಜಿ. ಶ್ರೀಗಂಧದ ದರ ₹3 ಸಾವಿರದಿಂದ ₹4 ಸಾವಿರದವರೆಗೆ ಏರಿಕೆಯಾಗಿದೆ. ಸದ್ಯ ಪ್ರತಿ ಕೆ.ಜಿ.ಗೆ ₹13 ಸಾವಿರಕ್ಕೂ ಹೆಚ್ಚಿನ ದರವಿದೆ. ಖರೀದಿ ದರ ಹೆಚ್ಚಾದರೆ ಹೆಚ್ಚಿನ ಆದಾಯವೂ ರೈತರಿಗೆ ಸಿಗಲಿದೆ. ತಮಿಳುನಾಡು ರಾಜ್ಯದಲ್ಲಿ ಪ್ರತಿ ವರ್ಷ ದರ ಪರಿಷ್ಕರಣೆ ಮಾಡುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ದರ ಪರಿಷ್ಕರಣೆಗೆ ಹಿಂದೆ ಮುಂದೆ ನೋಡಲಾಗುತ್ತಿದೆ ಎನ್ನುವುದು ರೈತರ ಅಸಮಾಧಾನ.</p>.<p>ಕರ್ನಾಟಕ ಅರಣ್ಯ ನಿಯಮಗಳು 1969ರ ಸೆಕ್ಷನ್ 108(6)ರ ಪ್ರಕಾರ,ಪ್ರತಿ ಹಣಕಾಸು ವರ್ಷದಲ್ಲಿ ಶ್ರೀಗಂಧಮರದ ದರವನ್ನು ನಿಗದಿಪಡಿಸಬೇಕು. ಅದನ್ನು ಮಾಡದೆ, ಸರಾಸರಿದರ ಆಧರಿಸಿ ಆಗಾಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಕೆಲವೊಮ್ಮೆ ನೆರೆಯ ತಮಿಳುನಾಡಿನಲ್ಲಿ ನಡೆಸಲಾದ ಹರಾಜಿನ ಬೆಲೆಯನ್ನು ಪರಿಗಣಿಸಿ ಇಲ್ಲಿಯೂ ಅದನ್ನೇ ಬಳಸಬಹುದು ಎನ್ನುವ ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.</p>.<p>ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಸಂಸ್ಥೆ, ಮೈಸೂರು ಸ್ಯಾಂಡಲ್ ಸೋಪು, ಇತರೆ ಉತ್ಪನ್ನಗಳನ್ನು ಉತ್ಪಾದಿಸಲು ಶ್ರೀಗಂಧವನ್ನೇ ಅವಲಂಬಿಸಿದೆ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ರಾಜ್ಯದ ರೈತರಿಂದ 174.5 ಟನ್ ಶ್ರೀಗಂಧ ಖರೀದಿಸಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾದರೂ, ಶ್ರೀಗಂಧದ ಮೌಲ್ಯವರ್ಧನೆಗೆ ಅರಣ್ಯ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಬೇಕು. ವಿಳಂಬ ಮಾಡದೆ ಹೊಸ ನೀತಿ ಜಾರಿಗೊಳಿಸಬೇಕು.</p>.<p>‘ಅರಣ್ಯ ಪ್ರೋತ್ಸಾಹ ಯೋಜನೆಯಡಿ ಶ್ರೀಗಂಧದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಶ್ರೀಗಂಧದ ಮರಗಳನ್ನು ಖರೀದಿಸಿದ 24 ಗಂಟೆಗಳಲ್ಲಿ, ನಿಗದಿತ ಬೆಲೆಯ ಶೇ 33ರಷ್ಟು ಮೊತ್ತವನ್ನು ರೈತರಿಗೆ ಪಾವತಿ ಮಾಡಬೇಕು. 12 ತಿಂಗಳಲ್ಲಿ ಉಳಿದ ಮೊತ್ತ ರೈತರಿಗೆ ಪಾವತಿಸಬೇಕು. ಪ್ರತಿ ವರ್ಷ ₹250 ಕೋಟಿಯನ್ನು ಶ್ರೀಗಂಧದ ಸಂಶೋಧನೆ, ವಿಸ್ತರಣೆ ಹಾಗೂ ವಿಮೆಗೆ ಮೀಸಲಿಡಬೇಕು’ ಎಂದು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.</p>.<p>ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದಡಾ. ಸಿ.ಎನ್. ಮಂಜುನಾಥ್ ಅವರು, ಕಾಫಿ, ರೇಷ್ಮೆ, ಮಸಾಲೆ ಉತ್ಪನ್ನಗಳ ರೀತಿಯಲ್ಲಿ ಶ್ರೀಗಂಧಕ್ಕೂ ಪ್ರತ್ಯೇಕ ಮಂಡಳಿ ರಚಿಸಿ ಎನ್ನುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರವಾದರೂ ಮಂಡಳಿ ಸ್ಥಾಪಿಸಿದರೆ, ಶ್ರೀಗಂಧದ ಬೆಳೆಗಾರರ ದಶಕಗಳ ಬೇಡಿಕೆಗೆ ಬೆಲೆ ಬರಲಿದೆ.</p>.<p>‘ಶ್ರೀಗಂಧದ ನೀತಿ’ ಸರಳೀಕರಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಳೆದ ಜೂನ್ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದರು. ಪ್ರಸ್ತುತ ಹೊಸ ನೀತಿಯ ಕರಡು ಸಚಿವರ ಮುಂದಿದೆ. ಅದರ ಜಾರಿಗಾಗಿ ರೈತರು ಕಾಯುತ್ತಿದ್ದಾರೆ.</p>.<p>ಹೊಸ ನೀತಿ ಜಾರಿ, ಶ್ರೀಗಂಧ ಮಂಡಳಿ ಸ್ಥಾಪನೆ, ತಂತ್ರಜ್ಞಾನ ಆಧರಿತ ಬೆಳೆ ಸುರಕ್ಷತೆ ಹಾಗೂ ಶ್ರೀಗಂಧದ ಎಣ್ಣೆ ಕಿರು ಘಟಕ ಸ್ಥಾಪನೆಗೆ ಸರ್ಕಾರ ಒತ್ತು ನೀಡಿದರೆ ಕರುನಾಡು ಶ್ರೀಗಂಧದ ಬೀಡಾಗಿ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>