<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು, ನಾಡಗೀತೆಯಲ್ಲಿ ಬುದ್ಧನ ಹೆಸರನ್ನು ಸೇರಿಸುವ ಮಾತನ್ನಾಡಿದ್ದಾರೆ. ನಮ್ಮ ನಾಡಗೀತೆಗೆ ಹೆಸರುಗಳನ್ನು ಸೇರಿಸುವ, ತೆಗೆಯುವ ಬಹುದೊಡ್ಡ ಇತಿಹಾಸವೇ ಇರು ವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಮಧ್ವರ ಹೆಸರಿನ ಸೇರ್ಪಡೆಯ ರಾದ್ಧಾಂತದ ರಾಡಿ ಕನ್ನಡಿಗರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಹಾಗೆ ನೋಡಿದರೆ, ಮನುಕುಲದ ಬೆಳಕಾದ ಬುದ್ಧನ ಹೆಸರು ಯಾವುದೇ ನಾಡಗೀತೆಯಲ್ಲಾಗಲೀ, ಸ್ಮೃತಿಗೀತೆಯಲ್ಲಾಗಲೀ ಉಲ್ಲೇಖ ಗೊಳ್ಳುವುದು ಹಾಗೂ ಯಾವುದೇ ರೂಪದ ಸ್ಮಾರಕದಲ್ಲಿ ಬಿಂಬಿತವಾಗುವುದು ಸ್ವಾಗತಾರ್ಹವೇ ಆಗಿರುತ್ತದೆ.</p>.<p>ಈಗ ನಮ್ಮ ನಾಡಗೀತೆಯಾಗಿರುವ, ಕುವೆಂಪು ಅವರ ಚೊಚ್ಚಿಲ ಕವನಸಂಕಲನ ‘ಕೊಳಲು’ ಸಂಗ್ರಹದಲ್ಲಿರುವ ‘ಜಯ ಹೇ ಕರ್ನಾಟಕ ಮಾತೆ’ ಹೆಸರಿನ (7.12.1928) ಕವಿತೆ ಮತ್ತು ಅದಕ್ಕೆ ಮೂರು ವರ್ಷಗಳ ಹಿಂದಿನ, 1925ರಹಸ್ತಪ್ರತಿಯಲ್ಲಿರುವ ‘ಕರ್ಣಾಟ ರಾಷ್ಟ್ರಗೀತೆ’ ಹೆಸರಿನ ಕವಿತೆಗೂ ಸಾವಯವ ಸಂಬಂಧವಿದೆ. ‘ನೆನಪಿನ ದೋಣಿ ಯಲ್ಲಿ’ ಶೀರ್ಷಿಕೆಯ ಆತ್ಮಕಥೆಯಲ್ಲಿ ಕುವೆಂಪು ಅವರು, ‘ಅದು ನನ್ನ ‘ಜಯ ಹೇ ಕರ್ನಾಟಕ ಮಾತೆ’ ಎಂಬ ನಾಡ ಗೀತೆಯ ಪ್ರಪಿತಾಮಹನೊ ಪ್ರಪ್ರಪಿತಾಮಹನೊ ಆಗಿರಬೇಕು... ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು’ ಎಂದು ಸ್ಪಷ್ಟಪಡಿಸಿದ್ದಾರೆ ಕೂಡ.</p>.<p>ಈಗ ಬುದ್ಧ ಅಥವಾ ಬೌದ್ಧ ಈ ಪದಗಳಿಗೆ ಸಂಬಂಧಿಸಿದಂತೆ, ಈ ಎರಡೂ ಕವಿತೆಗಳಲ್ಲಿರುವ ಕೆಲವು ಉಲ್ಲೇಖಗಳನ್ನು ಪರಿಶೀಲಿಸಬಹುದು. ‘ಕರ್ಣಾಟ ರಾಷ್ಟ್ರಗೀತೆ’ಯ ಎರಡನೆಯ ಪಂಕ್ತಿಯ 5ನೇ ಸಾಲಿನಲ್ಲಿ ‘ಕಪಿಲ ಪತಂಜಲ ಗೌತಮನುತ ಭಾರತ ಜನನಿಯ ತನುಜಾತೆ’ ಎಂಬ ಸಾಲಿದೆ. ಇಲ್ಲಿ ಬರುವ ಗೌತಮ ಯಾರು? ವೈದಿಕ ಪರಂಪರೆಯಲ್ಲಿ ಒಬ್ಬ ಗೌತಮ ಋಷಿ ಇದ್ದಾನೆ. ಹಾಗೆಯೇ ಬುದ್ಧನಿಗೂ ಗೌತಮ ಎಂಬ ಹೆಸರಿದೆ. ಕಪಿಲ ಪತಂಜಲರ ಜೊತೆಯಲ್ಲಿಯೇ ಉಲ್ಲೇಖವಾಗಿರುವುದರಿಂದ ಇದು ಬುದ್ಧನಿಗೆ ಅನ್ವಯವಾಗಿರುವ ಸಾಧ್ಯತೆ ಇಲ್ಲವೆನ್ನಿಸುತ್ತದೆ. ಆದರೆ, ಇದೇ ಸಾಲು ಬಹುತೇಕ ಪರಿಷ್ಕರಣೆಗೊಂಡು, ಈಗಿನ ನಾಡಗೀತೆಯಲ್ಲಿ ‘ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯೆ ತನುಜಾತೆ’ ಎಂದು ಅಭಿವ್ಯಕ್ತಗೊಂಡಿದೆ. ಇಲ್ಲಿ, ಕಪಿಲ ಪತಂಜಲರ ಜೊತೆಯಲ್ಲಿ ಬಂದರೂ, ಜಿನ ಎಂಬ ಪದದ ಪೂರ್ವದಲ್ಲಿ ಬಂದಿರುವುದರಿಂದ, ಇಲ್ಲಿನ ಗೌತಮ ನಿಸ್ಸಂಶಯವಾಗಿ ಬುದ್ಧನಿಗೆ ಸಂಬಂಧಿಸಿದ ಹೆಸರೇ ಆಗಿದೆ ಎನ್ನಬಹುದು. ಛಂದಸ್ಸಿನ ಅನುಕೂಲಕ್ಕಾಗಿ, ಬುದ್ಧ ಪದದ ಬದಲಾಗಿ ಗೌತಮ ಪದವನ್ನು ಕವಿ ಬಳಸಿರುವ, ಅಥವಾ ಹಿಂದಿನ ಅವತರಣಿಕೆಯಲ್ಲಿ ಇದ್ದುದನ್ನೇ ಉಳಿಸಿಕೊಂಡಿರುವ ಸಾಧ್ಯತೆ ಇದೆ.</p>.<p>‘ಕರ್ಣಾಟ ರಾಷ್ಟ್ರಗೀತೆ’ಯ 5ನೆಯ ಪಂಕ್ತಿಯ 3 ಮತ್ತು 4ನೇ ಸಾಲುಗಳಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಬೌದ್ಧರುದ್ಯಾನ’ ಎಂಬ ಉಲ್ಲೇಖವಿದೆ. ಈ ಸಾಲಿನ ಸಂಸ್ಕರಿತ ರೂಪ ಈಗಿನ ನಾಡಗೀತೆ ಯಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಎಂದಿದೆ. ‘ಬೌದ್ಧ’ ಪದದ ಬದಲಾಗಿ ‘ಜೈನ’ ಪದ ಬಂದಿರುವುದು ಸ್ಪಷ್ಟವಾಗಿದೆ. ಪೂರ್ವ ಕವಿತೆಯಲ್ಲಿದ್ದ ಬೌದ್ಧ ಪದವನ್ನು ತ್ಯಜಿಸಿ, ಹೊಸದ ರಲ್ಲಿ ಜೈನ ಪದವನ್ನು ಕವಿ ಸೇರಿಸಿದ್ದಾರೆ. ಹಾಗೆ ನೋಡಿದರೆ ಇಲ್ಲಿ ಛಂದಸ್ಸಿನ ಸಮಸ್ಯೆಯೂ ಇಲ್ಲ. ಇದು ಕವಿಯ ಪ್ರಯೋಗ ಮತ್ತು ಸ್ವಾತಂತ್ರ್ಯ ಕೂಡ. ಅದನ್ನು ಗೌರವಿಸುತ್ತಲೇ, ಅದಕ್ಕಿದ್ದಿರ ಬಹುದಾದ ಇನ್ನೊಂದು ಸಾಧ್ಯತೆಯನ್ನು ನಾವು ಪರಿಶೀಲಿಸ ಬಹುದಾಗಿದೆ.</p>.<p>ಗೌತಮ ಮತ್ತು ಜಿನ ಎಂಬ ಉಲ್ಲೇಖಗಳೊಂದಿಗೆ ಬುದ್ಧ ಮತ್ತು ತೀರ್ಥಂಕರರ ಉಲ್ಲೇಖ ಮೊದಲಿಗೇ ಬಂದಿದ್ದರೂ, ಮತ್ತೊಮ್ಮೆ ಜೈನ ಪದದ ಉಲ್ಲೇಖ ಬರಲು ಬಹುಶಃ, ಆಗ್ಗೆ ಕರ್ನಾಟಕದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನರಂತೆ ಜೈನರೂ ಬಹುಸಂಖ್ಯಾತರಾಗಿದ್ದುದೂ ಕಾರಣವಾಗಿರಬಹುದು. ಜೊತೆಗೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಪಾರವಾಗಿರುವ ಜೈನ ಸಾಹಿತ್ಯವೂ (ಜೈನಯುಗವೆಂದೇ ಗುರುತಿಸಿರುವುದು) ಕಾರಣ ವಿರಬಹುದು. ಮತ್ತೂ ಮುಂದುವರಿದು, ಶ್ರವಣಬೆಳಗೊಳ ಮೊದಲಾದ ನಾಡಿನ ಅಪಾರ ಜೈನಕೇಂದ್ರಗಳು, ಅವುಗಳಿಗೆ ಹೆಚ್ಚಿನ ಶ್ರೀಸಾಮಾನ್ಯ ಅನುಯಾಯಿಗಳಿರುವುದೂ ಕಾರಣ ವಿರಬಹುದು. ಆದರೆ, ನಂತರದ ಬೆಳವಣಿಗೆಯಲ್ಲಿ, ಕರ್ನಾಟಕದಲ್ಲಿ ಬೌದ್ಧ ಸಾಹಿತ್ಯ, ಸ್ಮಾರಕಗಳು ಸಾಕಷ್ಟು ಬೆಳಕಿಗೆ ಬಂದಿರುವುದನ್ನು, ಬೌದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚಳವಾಗಿರುವುದನ್ನು ಮರೆಯುವಂತಿಲ್ಲ.</p>.<p>ಈಗ ನಮ್ಮ ಮುಂದಿರುವ ಬಹುದೊಡ್ಡ ಸಮಸ್ಯೆ ಎಂದರೆ, ಸ್ವೀಕೃತ ನಾಡಗೀತೆಯೊಳಗೆ, ಅದೂ ಕವಿಯ ಮರಣಾನಂತರ ಹೆಸರುಗಳನ್ನು ಸೇರಿಸುತ್ತಾ ಹೋಗುವುದು ಎಷ್ಟು ಸರಿ ಎನ್ನುವುದು. ‘ಕರ್ಣಾಟ ರಾಷ್ಟ್ರ ಗೀತೆ’ಯಲ್ಲಿನ ಉಲ್ಲೇಖದಂತೆ ‘ಪಾರಸಿಕ ಬೌದ್ಧರುದ್ಯಾನ’ ಎಂದು ಹಾಡಬಹುದಾದರೂ ಅಥವಾ, ಜನಮನದ ಪ್ರತೀಕ್ಷೆ ಯಂತೆ, ‘ಪಾರಸಿಕ ಬೌದ್ಧ ಜೈನರುದ್ಯಾನ’ ಎಂದು ಬದಲಿಸ ಬಹುದಾದರೂ, ಇದು ಇಲ್ಲಿಗೇ ಕೊನೆಗೊಳ್ಳುತ್ತದೆ ಎಂದು ಹೇಳಲಾಗದು. ಹಿಂದೆ ಮಧ್ವ, ಈಗ ಬುದ್ಧ! ಮುಂದೆ ಇನ್ನು ಯಾರು ಯಾರ ಹೆಸರುಗಳಿಗೆ ಬೇಡಿಕೆ ಬರಬಹುದೋ ಬಲ್ಲವರಾರು? ಆದ್ದರಿಂದ ಈಗಿರುವ ‘ಗೌತಮ’ ಎಂಬ ಹೆಸರನ್ನೇ ಬುದ್ಧನಿಗೆ ಅನ್ವಯಿಸಿಕೊಂಡು, ನಾಡಗೀತೆಯೊಳಗೆ ಹೆಸರು ಸೇರಿಸುವ ಪರಂಪರೆಯನ್ನು ಮುಕ್ತಾಯಗೊಳಿಸುವ ಪ್ರಬುದ್ಧತೆ ಯನ್ನು ಕನ್ನಡ ಜನತೆ ತೋರಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು, ನಾಡಗೀತೆಯಲ್ಲಿ ಬುದ್ಧನ ಹೆಸರನ್ನು ಸೇರಿಸುವ ಮಾತನ್ನಾಡಿದ್ದಾರೆ. ನಮ್ಮ ನಾಡಗೀತೆಗೆ ಹೆಸರುಗಳನ್ನು ಸೇರಿಸುವ, ತೆಗೆಯುವ ಬಹುದೊಡ್ಡ ಇತಿಹಾಸವೇ ಇರು ವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಮಧ್ವರ ಹೆಸರಿನ ಸೇರ್ಪಡೆಯ ರಾದ್ಧಾಂತದ ರಾಡಿ ಕನ್ನಡಿಗರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಹಾಗೆ ನೋಡಿದರೆ, ಮನುಕುಲದ ಬೆಳಕಾದ ಬುದ್ಧನ ಹೆಸರು ಯಾವುದೇ ನಾಡಗೀತೆಯಲ್ಲಾಗಲೀ, ಸ್ಮೃತಿಗೀತೆಯಲ್ಲಾಗಲೀ ಉಲ್ಲೇಖ ಗೊಳ್ಳುವುದು ಹಾಗೂ ಯಾವುದೇ ರೂಪದ ಸ್ಮಾರಕದಲ್ಲಿ ಬಿಂಬಿತವಾಗುವುದು ಸ್ವಾಗತಾರ್ಹವೇ ಆಗಿರುತ್ತದೆ.</p>.<p>ಈಗ ನಮ್ಮ ನಾಡಗೀತೆಯಾಗಿರುವ, ಕುವೆಂಪು ಅವರ ಚೊಚ್ಚಿಲ ಕವನಸಂಕಲನ ‘ಕೊಳಲು’ ಸಂಗ್ರಹದಲ್ಲಿರುವ ‘ಜಯ ಹೇ ಕರ್ನಾಟಕ ಮಾತೆ’ ಹೆಸರಿನ (7.12.1928) ಕವಿತೆ ಮತ್ತು ಅದಕ್ಕೆ ಮೂರು ವರ್ಷಗಳ ಹಿಂದಿನ, 1925ರಹಸ್ತಪ್ರತಿಯಲ್ಲಿರುವ ‘ಕರ್ಣಾಟ ರಾಷ್ಟ್ರಗೀತೆ’ ಹೆಸರಿನ ಕವಿತೆಗೂ ಸಾವಯವ ಸಂಬಂಧವಿದೆ. ‘ನೆನಪಿನ ದೋಣಿ ಯಲ್ಲಿ’ ಶೀರ್ಷಿಕೆಯ ಆತ್ಮಕಥೆಯಲ್ಲಿ ಕುವೆಂಪು ಅವರು, ‘ಅದು ನನ್ನ ‘ಜಯ ಹೇ ಕರ್ನಾಟಕ ಮಾತೆ’ ಎಂಬ ನಾಡ ಗೀತೆಯ ಪ್ರಪಿತಾಮಹನೊ ಪ್ರಪ್ರಪಿತಾಮಹನೊ ಆಗಿರಬೇಕು... ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು’ ಎಂದು ಸ್ಪಷ್ಟಪಡಿಸಿದ್ದಾರೆ ಕೂಡ.</p>.<p>ಈಗ ಬುದ್ಧ ಅಥವಾ ಬೌದ್ಧ ಈ ಪದಗಳಿಗೆ ಸಂಬಂಧಿಸಿದಂತೆ, ಈ ಎರಡೂ ಕವಿತೆಗಳಲ್ಲಿರುವ ಕೆಲವು ಉಲ್ಲೇಖಗಳನ್ನು ಪರಿಶೀಲಿಸಬಹುದು. ‘ಕರ್ಣಾಟ ರಾಷ್ಟ್ರಗೀತೆ’ಯ ಎರಡನೆಯ ಪಂಕ್ತಿಯ 5ನೇ ಸಾಲಿನಲ್ಲಿ ‘ಕಪಿಲ ಪತಂಜಲ ಗೌತಮನುತ ಭಾರತ ಜನನಿಯ ತನುಜಾತೆ’ ಎಂಬ ಸಾಲಿದೆ. ಇಲ್ಲಿ ಬರುವ ಗೌತಮ ಯಾರು? ವೈದಿಕ ಪರಂಪರೆಯಲ್ಲಿ ಒಬ್ಬ ಗೌತಮ ಋಷಿ ಇದ್ದಾನೆ. ಹಾಗೆಯೇ ಬುದ್ಧನಿಗೂ ಗೌತಮ ಎಂಬ ಹೆಸರಿದೆ. ಕಪಿಲ ಪತಂಜಲರ ಜೊತೆಯಲ್ಲಿಯೇ ಉಲ್ಲೇಖವಾಗಿರುವುದರಿಂದ ಇದು ಬುದ್ಧನಿಗೆ ಅನ್ವಯವಾಗಿರುವ ಸಾಧ್ಯತೆ ಇಲ್ಲವೆನ್ನಿಸುತ್ತದೆ. ಆದರೆ, ಇದೇ ಸಾಲು ಬಹುತೇಕ ಪರಿಷ್ಕರಣೆಗೊಂಡು, ಈಗಿನ ನಾಡಗೀತೆಯಲ್ಲಿ ‘ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯೆ ತನುಜಾತೆ’ ಎಂದು ಅಭಿವ್ಯಕ್ತಗೊಂಡಿದೆ. ಇಲ್ಲಿ, ಕಪಿಲ ಪತಂಜಲರ ಜೊತೆಯಲ್ಲಿ ಬಂದರೂ, ಜಿನ ಎಂಬ ಪದದ ಪೂರ್ವದಲ್ಲಿ ಬಂದಿರುವುದರಿಂದ, ಇಲ್ಲಿನ ಗೌತಮ ನಿಸ್ಸಂಶಯವಾಗಿ ಬುದ್ಧನಿಗೆ ಸಂಬಂಧಿಸಿದ ಹೆಸರೇ ಆಗಿದೆ ಎನ್ನಬಹುದು. ಛಂದಸ್ಸಿನ ಅನುಕೂಲಕ್ಕಾಗಿ, ಬುದ್ಧ ಪದದ ಬದಲಾಗಿ ಗೌತಮ ಪದವನ್ನು ಕವಿ ಬಳಸಿರುವ, ಅಥವಾ ಹಿಂದಿನ ಅವತರಣಿಕೆಯಲ್ಲಿ ಇದ್ದುದನ್ನೇ ಉಳಿಸಿಕೊಂಡಿರುವ ಸಾಧ್ಯತೆ ಇದೆ.</p>.<p>‘ಕರ್ಣಾಟ ರಾಷ್ಟ್ರಗೀತೆ’ಯ 5ನೆಯ ಪಂಕ್ತಿಯ 3 ಮತ್ತು 4ನೇ ಸಾಲುಗಳಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಬೌದ್ಧರುದ್ಯಾನ’ ಎಂಬ ಉಲ್ಲೇಖವಿದೆ. ಈ ಸಾಲಿನ ಸಂಸ್ಕರಿತ ರೂಪ ಈಗಿನ ನಾಡಗೀತೆ ಯಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಎಂದಿದೆ. ‘ಬೌದ್ಧ’ ಪದದ ಬದಲಾಗಿ ‘ಜೈನ’ ಪದ ಬಂದಿರುವುದು ಸ್ಪಷ್ಟವಾಗಿದೆ. ಪೂರ್ವ ಕವಿತೆಯಲ್ಲಿದ್ದ ಬೌದ್ಧ ಪದವನ್ನು ತ್ಯಜಿಸಿ, ಹೊಸದ ರಲ್ಲಿ ಜೈನ ಪದವನ್ನು ಕವಿ ಸೇರಿಸಿದ್ದಾರೆ. ಹಾಗೆ ನೋಡಿದರೆ ಇಲ್ಲಿ ಛಂದಸ್ಸಿನ ಸಮಸ್ಯೆಯೂ ಇಲ್ಲ. ಇದು ಕವಿಯ ಪ್ರಯೋಗ ಮತ್ತು ಸ್ವಾತಂತ್ರ್ಯ ಕೂಡ. ಅದನ್ನು ಗೌರವಿಸುತ್ತಲೇ, ಅದಕ್ಕಿದ್ದಿರ ಬಹುದಾದ ಇನ್ನೊಂದು ಸಾಧ್ಯತೆಯನ್ನು ನಾವು ಪರಿಶೀಲಿಸ ಬಹುದಾಗಿದೆ.</p>.<p>ಗೌತಮ ಮತ್ತು ಜಿನ ಎಂಬ ಉಲ್ಲೇಖಗಳೊಂದಿಗೆ ಬುದ್ಧ ಮತ್ತು ತೀರ್ಥಂಕರರ ಉಲ್ಲೇಖ ಮೊದಲಿಗೇ ಬಂದಿದ್ದರೂ, ಮತ್ತೊಮ್ಮೆ ಜೈನ ಪದದ ಉಲ್ಲೇಖ ಬರಲು ಬಹುಶಃ, ಆಗ್ಗೆ ಕರ್ನಾಟಕದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನರಂತೆ ಜೈನರೂ ಬಹುಸಂಖ್ಯಾತರಾಗಿದ್ದುದೂ ಕಾರಣವಾಗಿರಬಹುದು. ಜೊತೆಗೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಪಾರವಾಗಿರುವ ಜೈನ ಸಾಹಿತ್ಯವೂ (ಜೈನಯುಗವೆಂದೇ ಗುರುತಿಸಿರುವುದು) ಕಾರಣ ವಿರಬಹುದು. ಮತ್ತೂ ಮುಂದುವರಿದು, ಶ್ರವಣಬೆಳಗೊಳ ಮೊದಲಾದ ನಾಡಿನ ಅಪಾರ ಜೈನಕೇಂದ್ರಗಳು, ಅವುಗಳಿಗೆ ಹೆಚ್ಚಿನ ಶ್ರೀಸಾಮಾನ್ಯ ಅನುಯಾಯಿಗಳಿರುವುದೂ ಕಾರಣ ವಿರಬಹುದು. ಆದರೆ, ನಂತರದ ಬೆಳವಣಿಗೆಯಲ್ಲಿ, ಕರ್ನಾಟಕದಲ್ಲಿ ಬೌದ್ಧ ಸಾಹಿತ್ಯ, ಸ್ಮಾರಕಗಳು ಸಾಕಷ್ಟು ಬೆಳಕಿಗೆ ಬಂದಿರುವುದನ್ನು, ಬೌದ್ಧ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚಳವಾಗಿರುವುದನ್ನು ಮರೆಯುವಂತಿಲ್ಲ.</p>.<p>ಈಗ ನಮ್ಮ ಮುಂದಿರುವ ಬಹುದೊಡ್ಡ ಸಮಸ್ಯೆ ಎಂದರೆ, ಸ್ವೀಕೃತ ನಾಡಗೀತೆಯೊಳಗೆ, ಅದೂ ಕವಿಯ ಮರಣಾನಂತರ ಹೆಸರುಗಳನ್ನು ಸೇರಿಸುತ್ತಾ ಹೋಗುವುದು ಎಷ್ಟು ಸರಿ ಎನ್ನುವುದು. ‘ಕರ್ಣಾಟ ರಾಷ್ಟ್ರ ಗೀತೆ’ಯಲ್ಲಿನ ಉಲ್ಲೇಖದಂತೆ ‘ಪಾರಸಿಕ ಬೌದ್ಧರುದ್ಯಾನ’ ಎಂದು ಹಾಡಬಹುದಾದರೂ ಅಥವಾ, ಜನಮನದ ಪ್ರತೀಕ್ಷೆ ಯಂತೆ, ‘ಪಾರಸಿಕ ಬೌದ್ಧ ಜೈನರುದ್ಯಾನ’ ಎಂದು ಬದಲಿಸ ಬಹುದಾದರೂ, ಇದು ಇಲ್ಲಿಗೇ ಕೊನೆಗೊಳ್ಳುತ್ತದೆ ಎಂದು ಹೇಳಲಾಗದು. ಹಿಂದೆ ಮಧ್ವ, ಈಗ ಬುದ್ಧ! ಮುಂದೆ ಇನ್ನು ಯಾರು ಯಾರ ಹೆಸರುಗಳಿಗೆ ಬೇಡಿಕೆ ಬರಬಹುದೋ ಬಲ್ಲವರಾರು? ಆದ್ದರಿಂದ ಈಗಿರುವ ‘ಗೌತಮ’ ಎಂಬ ಹೆಸರನ್ನೇ ಬುದ್ಧನಿಗೆ ಅನ್ವಯಿಸಿಕೊಂಡು, ನಾಡಗೀತೆಯೊಳಗೆ ಹೆಸರು ಸೇರಿಸುವ ಪರಂಪರೆಯನ್ನು ಮುಕ್ತಾಯಗೊಳಿಸುವ ಪ್ರಬುದ್ಧತೆ ಯನ್ನು ಕನ್ನಡ ಜನತೆ ತೋರಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>