<blockquote><em>ನೇಮಕಾತಿ ಬಗೆಗಿನ ‘ಸಾರ್ವಜನಿಕ ಅಪನಂಬಿಕೆ’ ಹೋಗಲಾಡಿಸುವ ಅವಕಾಶ ಈಗ ಕೆಪಿಎಸ್ಸಿ ಮುಂದಿದೆ. ಧೈರ್ಯಶಾಲಿ ನಡೆಯಿಂದ ಪಾರದರ್ಶಕತೆ ಸಾಧ್ಯ.</em></blockquote>.<p>ರಾಜ್ಯದ ಆಡಳಿತ ವ್ಯವಸ್ಥೆಗೆ ಭದ್ರನೆಲೆ ಒದಗಿಸುವ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಪ್ರಕ್ರಿಯೆ ಬರೀ ಒಂದು ಪರೀಕ್ಷೆ ಯಲ್ಲ; ಅದು ಭವಿಷ್ಯದ ಆಡಳಿತದ ಗುಣಮಟ್ಟವನ್ನು ನಿರ್ಧರಿಸುವ ಮಹತ್ವದ ಹಂತ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಲೋಕ ಸೇವಾ ಆಯೋಗ’ (ಕೆಪಿಎಸ್ಸಿ) ನಡೆಸಲಿರುವ ಸಂದರ್ಶನ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ನೈತಿಕತೆಯ ಹಾಗೂ ವೇಗದ ಮಾನದಂಡಗಳನ್ನು ಪೂರೈಸುವುದು ಅವಶ್ಯಕ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಪರೀಕ್ಷೆಗಳ ಸುತ್ತಮುತ್ತ ಉಂಟಾದ ಗೊಂದಲಗಳು ಸಾರ್ವಜನಿಕ ನಂಬಿಕೆಗೆ ಧಕ್ಕೆ ತಂದಿವೆ. ಈ ಬಾರಿ ಯಾವುದೇ ಸಂಶಯಕ್ಕೂ ಅವಕಾಶ ನೀಡ ದಂತೆ ಸುಧಾರಣೆಗಳನ್ನು ಜಾರಿಗೊಳಿಸಬೇಕಾಗಿದೆ.</p>.<p>2024ರ ಆಗಸ್ಟ್ನಲ್ಲಿ ನಡೆದ ಪ್ರಿಲಿಮಿನರಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ, ಡಿಸೆಂಬರ್ನಲ್ಲಿ ಮರುಪರೀಕ್ಷೆ ನಡೆಸಬೇಕಾಯಿತು. 2025ರ ಮೇ ತಿಂಗಳಲ್ಲಿ ಮುಖ್ಯ ಪರೀಕ್ಷೆ ನಡೆದಿದ್ದು, ಸುಮಾರು 6,000 ಅಭ್ಯರ್ಥಿಗಳು ಭಾಗವಹಿಸಿದ್ದರು. 2026ರ ಫೆಬ್ರುವರಿ ಯಲ್ಲಿ ಪ್ರಕಟವಾದ ಫಲಿತಾಂಶದ ಮೂಲಕ ಒಟ್ಟು 384 ಹುದ್ದೆಗಳಿಗೆ 1:3ರ ಅನುಪಾತದಲ್ಲಿ, ಸುಮಾರು 1,152 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ ಸಮಗ್ರ ಪ್ರಕ್ರಿಯೆ ಈಗ ಅಂತಿಮ ಹಾಗೂ ಅತ್ಯಂತ ಸಂವೇದನಾಶೀಲ ಹಂತ ತಲಪಿದೆ.</p>.<p>ಹಿಂದೆ 50 ಅಂಕಗಳನ್ನು ಹೊಂದಿದ್ದ ಸಂದರ್ಶನದ ಅಂಕ ಗಳನ್ನು ಈಗ 25ಕ್ಕೆ ಇಳಿಸಿರುವುದು ಸ್ವಾಗ ತಾರ್ಹ. ಕನಿಷ್ಠ 10 ಮತ್ತು ಗರಿಷ್ಠ 20 ಅಂಕಗಳ ಮಿತಿ ನಿಗದಿ ಮಾಡಿ, ಆ ಚೌಕಟ್ಟನ್ನು ಮೀರಿ ಅಂಕ ನೀಡಿದಲ್ಲಿ ಕಾರಣ ದಾಖಲಿಸುವ ನಿಯಮ ರೂಪಿಸಿರುವುದು ಪಾರದರ್ಶಕತೆಯತ್ತ ಹೆಜ್ಜೆ ಎನ್ನಬಹುದು. ಆದರೆ, ಬರೀ ಅಂಕಗಳ ಮಿತಿ ಕಡಿತಗೊಳಿಸು ವುದರಿಂದ ವಿಶ್ವಾಸ ಸ್ಥಾಪನೆಯಾಗುವುದಿಲ್ಲ. ಪ್ರಕ್ರಿಯೆಯಲ್ಲಿನ ಮೇಲ್ನೋಟದ ಬದಲಾವಣೆಗಿಂತಲೂ ಅದರ ವಿಶ್ವಾಸಾರ್ಹತೆ ಮುಖ್ಯ.</p>.<p>ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅನುಸರಿಸುವ ‘ರಹಸ್ಯ ಬೋರ್ಡ್’ ವ್ಯವಸ್ಥೆ ಇಲ್ಲಿಯೂ ಜಾರಿಯಾಗಬೇಕಾಗಿದೆ. ಅಭ್ಯರ್ಥಿಗಳಿಗೆ ತಮ್ಮ ಸಂದರ್ಶನ ಯಾವ ಬೋರ್ಡ್ ಮುಂದೆ ನಡೆಯಲಿದೆ ಎಂಬ ಮಾಹಿತಿ ಮುಂಚಿತ ವಾಗಿ ತಿಳಿಯದಂತೆಯೂ, ಬೋರ್ಡ್ ಸದಸ್ಯರಿಗೂ ಅಭ್ಯರ್ಥಿ ಗಳ ವಿವರ ಪೂರ್ವಭಾವಿಯಾಗಿ ತಿಳಿಯದಂತೆಯೂ ವ್ಯವಸ್ಥೆ ಮಾಡುವುದು ಅಗತ್ಯ. ಏಕಕಾಲದಲ್ಲಿ ಏಳು ಅಥವಾ ಎಂಟು ಸ್ವತಂತ್ರ ಬೋರ್ಡ್ಗಳನ್ನು ರಚಿಸಿ, ಯಾದೃಚ್ಛಿಕ ಹಂಚಿಕೆ ಪದ್ಧತಿ ಜಾರಿಗೊಳಿಸಿದರೆ ಯಾವುದೇ ವ್ಯಕ್ತಿ ಅಥವಾ ಗುಂಪು ಒಂದು ನಿರ್ದಿಷ್ಟ ಬೋರ್ಡ್ ಅನ್ನು ಪ್ರಭಾವಿಸಲು ಸಾಧ್ಯವಾಗು ವುದಿಲ್ಲ. ಈ ವ್ಯವಸ್ಥೆಯನ್ನು ಪರೀಕ್ಷಾ ನಿಯಂತ್ರಣಾಧಿಕಾರಿ ಅಥವಾ ಕಾರ್ಯದರ್ಶಿಗಳ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಸರ್ಕಾರವೂ ನಿಗಾವಹಿಸ ಬೇಕು.</p>.<p>ಸಂದರ್ಶನ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣವು ಕಡ್ಡಾಯ ಆಗಬೇಕು. 1,152 ಅಭ್ಯರ್ಥಿಗಳಲ್ಲಿ ಪ್ರತಿಯೊಬ್ಬರ ಸಂದರ್ಶನವೂ ದಾಖಲಾಗಿ ಭವಿಷ್ಯದಲ್ಲಿ ನ್ಯಾಯಾಲಯ ಅಥವಾ ಮೇಲ್ದರ್ಜೆಯ ಪರಿಶೀಲನೆಗೆ ಸಾಕ್ಷ್ಯ ವಾಗಿ ಉಳಿಯಬೇಕು. ಇದೇ ವೇಳೆ ಸಂದರ್ಶನ ಮುಗಿದ ತಕ್ಷಣ ಬೋರ್ಡ್ ನೀಡಿದ ಅಂಕಗಳನ್ನು ಲಕೋಟೆಯಲ್ಲಿ ಸೀಲ್ ಮಾಡಿ ಕಳುಹಿಸುವ ಪದ್ಧತಿ ಜಾರಿಗೆ ತರಬೇಕು. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳ ಸಮಗ್ರ ಮೊತ್ತವೇ ಅಂತಿಮ ಫಲಿತಾಂಶವನ್ನು ನಿರ್ಧರಿಸಬೇಕು.</p>.<p>ಸಮಯಪಾಲನೆಯೂ ಅಷ್ಟೇ ಮುಖ್ಯ. ದಿನಕ್ಕೆ ಕನಿಷ್ಠ 50ರಿಂದ 100 ಅಭ್ಯರ್ಥಿಗಳ ಸಂದರ್ಶನ ನಡೆಸುವ ವ್ಯವಸ್ಥೆ ರೂಪಿಸಿದರೆ, 20ರಿಂದ 25 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಸಬಹುದು. ಒಂದು ತಿಂಗಳೊಳಗೆ ಎಲ್ಲ ಸಂದರ್ಶನ ಗಳನ್ನು ಪೂರ್ಣಗೊಳಿಸಿ ಏಪ್ರಿಲ್ 15ರೊಳಗೆ ಅಂತಿಮ ಫಲಿತಾಂಶ ಪ್ರಕಟಿಸುವುದು ಅಸಾಧ್ಯವಲ್ಲ. ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಮೇ ತಿಂಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ಕೆಪಿಎಸ್ಸಿ ಫಲಿತಾಂಶ ಪ್ರಕಟವಾಗುವುದು ಅನಿವಾರ್ಯ. ಆಯ್ಕೆಯಾಗದ ಅಭ್ಯರ್ಥಿಗಳಿಗೆ ಮುಂದಿನ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಸಮಯ ದೊರಕಬೇಕು; ವಿಳಂಬದಿಂದ ಸಾವಿರಾರು ಪ್ರತಿಭೆಗಳ ಭವಿಷ್ಯಕ್ಕೆ ಹಾನಿಯಾಗಬಾರದು.</p>.<p>ರಾಜಕೀಯ ಹಸ್ತಕ್ಷೇಪವು ಯಾವುದೇ ರೂಪದಲ್ಲೂ ಇರಬಾರದು. ಅಭ್ಯರ್ಥಿಗಳೂ ತಮ್ಮ ನೈತಿಕ ಜವಾಬ್ದಾರಿಯನ್ನು ಅರಿತು, ಪ್ರಭಾವ ಬಳಸಿ ಅಂಕ ಪಡೆಯಲು ಯತ್ನಿಸಬಾರದು.</p>.<p>ಸರ್ಕಾರವು ಕೆಪಿಎಸ್ಸಿ ಸದಸ್ಯರ ಚಲನವಲನಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಮಧ್ಯವರ್ತಿಗಳು ಆಯೋಗದ ಸದಸ್ಯರು ಅಥವಾ ಅಧಿಕಾರಿಗಳ ಸಂಪರ್ಕಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿಯುವವರೆಗೂ ಬಾರದಂತೆ ವಿಶೇಷ ವ್ಯವಸ್ಥೆ ರೂಪಿಸ ಬೇಕು. 2011ರ ಪರೀಕ್ಷೆಯಲ್ಲಿ ಉಂಟಾದ ಗೊಂದಲದಿಂದ ಫಲಿತಾಂಶ ರದ್ದಾಗಿ, ವರ್ಷಗಳ ವಿಳಂಬ ಉಂಟಾದ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ಎಲ್ಲರ ಸಹಭಾಗಿತ್ವದ ಹೊಣೆ.</p>.<p>ಒಟ್ಟಿನಲ್ಲಿ, ಕೆಪಿಎಸ್ಸಿ ನಡೆಸುವ ಸಂದರ್ಶನ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಭ್ರಷ್ಟಾಚಾರರಹಿತ ಆಗಿರಬೇಕು. ಪ್ರತಿಯೊಂದು ಹುದ್ದೆಯೂ ಅರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಮಾತ್ರ ಭರ್ತಿ ಆಗುವಂತೆ ಖಚಿತಪಡಿಸುವುದು ಆಡಳಿತದ ಗೌರವಕ್ಕೆ ಸಂಬಂಧಿಸಿರುವಂತೆಯೇ ಯುವಜನರ ಭವಿಷ್ಯದ ಪ್ರಶ್ನೆಯೂ ಆಗಿದೆ. ‘ಯೋಗ್ಯರಿಗೆ ನ್ಯಾಯ, ಪಾರದರ್ಶಕತೆಗೆ ಆದ್ಯತೆ’ ಎಂಬ ಧೋರಣೆ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪ ದಲ್ಲೂ ಪ್ರತಿಫಲಿಸಬೇಕಾಗಿದೆ.</p>.<blockquote><em>ಲೇಖಕ: ಸಂಸ್ಥಾಪಕರು ಮತ್ತು ನಿರ್ದೇಶಕರು, ಇನ್ಸೈಟ್ಸ್ ಐಎಎಸ್</em></blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ನೇಮಕಾತಿ ಬಗೆಗಿನ ‘ಸಾರ್ವಜನಿಕ ಅಪನಂಬಿಕೆ’ ಹೋಗಲಾಡಿಸುವ ಅವಕಾಶ ಈಗ ಕೆಪಿಎಸ್ಸಿ ಮುಂದಿದೆ. ಧೈರ್ಯಶಾಲಿ ನಡೆಯಿಂದ ಪಾರದರ್ಶಕತೆ ಸಾಧ್ಯ.</em></blockquote>.<p>ರಾಜ್ಯದ ಆಡಳಿತ ವ್ಯವಸ್ಥೆಗೆ ಭದ್ರನೆಲೆ ಒದಗಿಸುವ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಪ್ರಕ್ರಿಯೆ ಬರೀ ಒಂದು ಪರೀಕ್ಷೆ ಯಲ್ಲ; ಅದು ಭವಿಷ್ಯದ ಆಡಳಿತದ ಗುಣಮಟ್ಟವನ್ನು ನಿರ್ಧರಿಸುವ ಮಹತ್ವದ ಹಂತ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಲೋಕ ಸೇವಾ ಆಯೋಗ’ (ಕೆಪಿಎಸ್ಸಿ) ನಡೆಸಲಿರುವ ಸಂದರ್ಶನ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ನೈತಿಕತೆಯ ಹಾಗೂ ವೇಗದ ಮಾನದಂಡಗಳನ್ನು ಪೂರೈಸುವುದು ಅವಶ್ಯಕ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಪರೀಕ್ಷೆಗಳ ಸುತ್ತಮುತ್ತ ಉಂಟಾದ ಗೊಂದಲಗಳು ಸಾರ್ವಜನಿಕ ನಂಬಿಕೆಗೆ ಧಕ್ಕೆ ತಂದಿವೆ. ಈ ಬಾರಿ ಯಾವುದೇ ಸಂಶಯಕ್ಕೂ ಅವಕಾಶ ನೀಡ ದಂತೆ ಸುಧಾರಣೆಗಳನ್ನು ಜಾರಿಗೊಳಿಸಬೇಕಾಗಿದೆ.</p>.<p>2024ರ ಆಗಸ್ಟ್ನಲ್ಲಿ ನಡೆದ ಪ್ರಿಲಿಮಿನರಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ, ಡಿಸೆಂಬರ್ನಲ್ಲಿ ಮರುಪರೀಕ್ಷೆ ನಡೆಸಬೇಕಾಯಿತು. 2025ರ ಮೇ ತಿಂಗಳಲ್ಲಿ ಮುಖ್ಯ ಪರೀಕ್ಷೆ ನಡೆದಿದ್ದು, ಸುಮಾರು 6,000 ಅಭ್ಯರ್ಥಿಗಳು ಭಾಗವಹಿಸಿದ್ದರು. 2026ರ ಫೆಬ್ರುವರಿ ಯಲ್ಲಿ ಪ್ರಕಟವಾದ ಫಲಿತಾಂಶದ ಮೂಲಕ ಒಟ್ಟು 384 ಹುದ್ದೆಗಳಿಗೆ 1:3ರ ಅನುಪಾತದಲ್ಲಿ, ಸುಮಾರು 1,152 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ ಸಮಗ್ರ ಪ್ರಕ್ರಿಯೆ ಈಗ ಅಂತಿಮ ಹಾಗೂ ಅತ್ಯಂತ ಸಂವೇದನಾಶೀಲ ಹಂತ ತಲಪಿದೆ.</p>.<p>ಹಿಂದೆ 50 ಅಂಕಗಳನ್ನು ಹೊಂದಿದ್ದ ಸಂದರ್ಶನದ ಅಂಕ ಗಳನ್ನು ಈಗ 25ಕ್ಕೆ ಇಳಿಸಿರುವುದು ಸ್ವಾಗ ತಾರ್ಹ. ಕನಿಷ್ಠ 10 ಮತ್ತು ಗರಿಷ್ಠ 20 ಅಂಕಗಳ ಮಿತಿ ನಿಗದಿ ಮಾಡಿ, ಆ ಚೌಕಟ್ಟನ್ನು ಮೀರಿ ಅಂಕ ನೀಡಿದಲ್ಲಿ ಕಾರಣ ದಾಖಲಿಸುವ ನಿಯಮ ರೂಪಿಸಿರುವುದು ಪಾರದರ್ಶಕತೆಯತ್ತ ಹೆಜ್ಜೆ ಎನ್ನಬಹುದು. ಆದರೆ, ಬರೀ ಅಂಕಗಳ ಮಿತಿ ಕಡಿತಗೊಳಿಸು ವುದರಿಂದ ವಿಶ್ವಾಸ ಸ್ಥಾಪನೆಯಾಗುವುದಿಲ್ಲ. ಪ್ರಕ್ರಿಯೆಯಲ್ಲಿನ ಮೇಲ್ನೋಟದ ಬದಲಾವಣೆಗಿಂತಲೂ ಅದರ ವಿಶ್ವಾಸಾರ್ಹತೆ ಮುಖ್ಯ.</p>.<p>ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅನುಸರಿಸುವ ‘ರಹಸ್ಯ ಬೋರ್ಡ್’ ವ್ಯವಸ್ಥೆ ಇಲ್ಲಿಯೂ ಜಾರಿಯಾಗಬೇಕಾಗಿದೆ. ಅಭ್ಯರ್ಥಿಗಳಿಗೆ ತಮ್ಮ ಸಂದರ್ಶನ ಯಾವ ಬೋರ್ಡ್ ಮುಂದೆ ನಡೆಯಲಿದೆ ಎಂಬ ಮಾಹಿತಿ ಮುಂಚಿತ ವಾಗಿ ತಿಳಿಯದಂತೆಯೂ, ಬೋರ್ಡ್ ಸದಸ್ಯರಿಗೂ ಅಭ್ಯರ್ಥಿ ಗಳ ವಿವರ ಪೂರ್ವಭಾವಿಯಾಗಿ ತಿಳಿಯದಂತೆಯೂ ವ್ಯವಸ್ಥೆ ಮಾಡುವುದು ಅಗತ್ಯ. ಏಕಕಾಲದಲ್ಲಿ ಏಳು ಅಥವಾ ಎಂಟು ಸ್ವತಂತ್ರ ಬೋರ್ಡ್ಗಳನ್ನು ರಚಿಸಿ, ಯಾದೃಚ್ಛಿಕ ಹಂಚಿಕೆ ಪದ್ಧತಿ ಜಾರಿಗೊಳಿಸಿದರೆ ಯಾವುದೇ ವ್ಯಕ್ತಿ ಅಥವಾ ಗುಂಪು ಒಂದು ನಿರ್ದಿಷ್ಟ ಬೋರ್ಡ್ ಅನ್ನು ಪ್ರಭಾವಿಸಲು ಸಾಧ್ಯವಾಗು ವುದಿಲ್ಲ. ಈ ವ್ಯವಸ್ಥೆಯನ್ನು ಪರೀಕ್ಷಾ ನಿಯಂತ್ರಣಾಧಿಕಾರಿ ಅಥವಾ ಕಾರ್ಯದರ್ಶಿಗಳ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಸರ್ಕಾರವೂ ನಿಗಾವಹಿಸ ಬೇಕು.</p>.<p>ಸಂದರ್ಶನ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣವು ಕಡ್ಡಾಯ ಆಗಬೇಕು. 1,152 ಅಭ್ಯರ್ಥಿಗಳಲ್ಲಿ ಪ್ರತಿಯೊಬ್ಬರ ಸಂದರ್ಶನವೂ ದಾಖಲಾಗಿ ಭವಿಷ್ಯದಲ್ಲಿ ನ್ಯಾಯಾಲಯ ಅಥವಾ ಮೇಲ್ದರ್ಜೆಯ ಪರಿಶೀಲನೆಗೆ ಸಾಕ್ಷ್ಯ ವಾಗಿ ಉಳಿಯಬೇಕು. ಇದೇ ವೇಳೆ ಸಂದರ್ಶನ ಮುಗಿದ ತಕ್ಷಣ ಬೋರ್ಡ್ ನೀಡಿದ ಅಂಕಗಳನ್ನು ಲಕೋಟೆಯಲ್ಲಿ ಸೀಲ್ ಮಾಡಿ ಕಳುಹಿಸುವ ಪದ್ಧತಿ ಜಾರಿಗೆ ತರಬೇಕು. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳ ಸಮಗ್ರ ಮೊತ್ತವೇ ಅಂತಿಮ ಫಲಿತಾಂಶವನ್ನು ನಿರ್ಧರಿಸಬೇಕು.</p>.<p>ಸಮಯಪಾಲನೆಯೂ ಅಷ್ಟೇ ಮುಖ್ಯ. ದಿನಕ್ಕೆ ಕನಿಷ್ಠ 50ರಿಂದ 100 ಅಭ್ಯರ್ಥಿಗಳ ಸಂದರ್ಶನ ನಡೆಸುವ ವ್ಯವಸ್ಥೆ ರೂಪಿಸಿದರೆ, 20ರಿಂದ 25 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಸಬಹುದು. ಒಂದು ತಿಂಗಳೊಳಗೆ ಎಲ್ಲ ಸಂದರ್ಶನ ಗಳನ್ನು ಪೂರ್ಣಗೊಳಿಸಿ ಏಪ್ರಿಲ್ 15ರೊಳಗೆ ಅಂತಿಮ ಫಲಿತಾಂಶ ಪ್ರಕಟಿಸುವುದು ಅಸಾಧ್ಯವಲ್ಲ. ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಮೇ ತಿಂಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನ ಕೆಪಿಎಸ್ಸಿ ಫಲಿತಾಂಶ ಪ್ರಕಟವಾಗುವುದು ಅನಿವಾರ್ಯ. ಆಯ್ಕೆಯಾಗದ ಅಭ್ಯರ್ಥಿಗಳಿಗೆ ಮುಂದಿನ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಸಮಯ ದೊರಕಬೇಕು; ವಿಳಂಬದಿಂದ ಸಾವಿರಾರು ಪ್ರತಿಭೆಗಳ ಭವಿಷ್ಯಕ್ಕೆ ಹಾನಿಯಾಗಬಾರದು.</p>.<p>ರಾಜಕೀಯ ಹಸ್ತಕ್ಷೇಪವು ಯಾವುದೇ ರೂಪದಲ್ಲೂ ಇರಬಾರದು. ಅಭ್ಯರ್ಥಿಗಳೂ ತಮ್ಮ ನೈತಿಕ ಜವಾಬ್ದಾರಿಯನ್ನು ಅರಿತು, ಪ್ರಭಾವ ಬಳಸಿ ಅಂಕ ಪಡೆಯಲು ಯತ್ನಿಸಬಾರದು.</p>.<p>ಸರ್ಕಾರವು ಕೆಪಿಎಸ್ಸಿ ಸದಸ್ಯರ ಚಲನವಲನಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಮಧ್ಯವರ್ತಿಗಳು ಆಯೋಗದ ಸದಸ್ಯರು ಅಥವಾ ಅಧಿಕಾರಿಗಳ ಸಂಪರ್ಕಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿಯುವವರೆಗೂ ಬಾರದಂತೆ ವಿಶೇಷ ವ್ಯವಸ್ಥೆ ರೂಪಿಸ ಬೇಕು. 2011ರ ಪರೀಕ್ಷೆಯಲ್ಲಿ ಉಂಟಾದ ಗೊಂದಲದಿಂದ ಫಲಿತಾಂಶ ರದ್ದಾಗಿ, ವರ್ಷಗಳ ವಿಳಂಬ ಉಂಟಾದ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ಎಲ್ಲರ ಸಹಭಾಗಿತ್ವದ ಹೊಣೆ.</p>.<p>ಒಟ್ಟಿನಲ್ಲಿ, ಕೆಪಿಎಸ್ಸಿ ನಡೆಸುವ ಸಂದರ್ಶನ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಭ್ರಷ್ಟಾಚಾರರಹಿತ ಆಗಿರಬೇಕು. ಪ್ರತಿಯೊಂದು ಹುದ್ದೆಯೂ ಅರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಮಾತ್ರ ಭರ್ತಿ ಆಗುವಂತೆ ಖಚಿತಪಡಿಸುವುದು ಆಡಳಿತದ ಗೌರವಕ್ಕೆ ಸಂಬಂಧಿಸಿರುವಂತೆಯೇ ಯುವಜನರ ಭವಿಷ್ಯದ ಪ್ರಶ್ನೆಯೂ ಆಗಿದೆ. ‘ಯೋಗ್ಯರಿಗೆ ನ್ಯಾಯ, ಪಾರದರ್ಶಕತೆಗೆ ಆದ್ಯತೆ’ ಎಂಬ ಧೋರಣೆ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪ ದಲ್ಲೂ ಪ್ರತಿಫಲಿಸಬೇಕಾಗಿದೆ.</p>.<blockquote><em>ಲೇಖಕ: ಸಂಸ್ಥಾಪಕರು ಮತ್ತು ನಿರ್ದೇಶಕರು, ಇನ್ಸೈಟ್ಸ್ ಐಎಎಸ್</em></blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>